ಹಾಸನ :ವರ್ಷದಲ್ಲಿ ಒಮ್ಮೆ ಮಾತ್ರ ಕೃಪೆ ದರ್ಶನ ನೀಡುವ ಹಾಸನಾಂಬೆ ದೇವಿಯ ದರ್ಶನೋತ್ಸವ ಈ ವರ್ಷವೂ ಭಕ್ತರಿಂದ ಭಾರೀ ಸ್ಪಂದನೆ ಪಡೆದುಕೊಂಡಿದೆ. ಈ ಹಿನ್ನೆಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸತತ ಎರಡನೇ ಬಾರಿಗೆ ಹಾಸನಾಂಬೆಯ ದರ್ಶನ ಪಡೆಯಲು ಹಾಸನಕ್ಕೆ ಆಗಮಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಇಂದು ಬೂವನಹಳ್ಳಿ ಹೆಲಿಪ್ಯಾಡ್ನಲ್ಲಿ ಲ್ಯಾಂಡ್ ಆಗಿದ್ದು, ಅಲ್ಲಿಂದ ನೇರವಾಗಿ ದೇವಾಲಯಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ಕಳೆದ ವರ್ಷವೂ ಈ ಸಮಯದಲ್ಲಿ ಅವರು ದೇವಿಯ ದರ್ಶನಕ್ಕೆ ಆಗಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಹೈಲೈಟ್ಸ್:
- ಸಿಎಂ ಆಗಿ ಸಿದ್ದರಾಮಯ್ಯರ 2ನೇ ದರ್ಶನ ಭೇಟಿ
- ದೇವಿಯ ದರ್ಶನ ಪಡೆದ ಬಳಿಕ ಭಕ್ತರೊಂದಿಗೆ ಸಂವಾದ
- ಜಿಲ್ಲೆಯಲ್ಲಿ ಭಕ್ತರ ಉತ್ಸಾಹ ತೀವ್ರ, ದಿನವೂ ಲಕ್ಷಾಂತರ ಮಂದಿ ದರ್ಶನ ಪಡೆಯುತ್ತಿದ್ದಾರೆ
For More Updates Join our WhatsApp Group :
