ತಿಪಟೂರು : ನಗರದಲ್ಲಿ ವೀರಶೈವ ಲಿಂಗಾಯಿತ ಸಂಘಟನೆ ಹಾಗೂ ಯುವ ವೇದಿಕೆ ವತಿಯಿಂದ ಅದ್ದೂರಿಯಾಗಿ ಬಸವೇಶ್ವರ ಜಯಂತೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಮೆರವಣಿಗೆ ಕಾರ್ಯಕ್ರಮವು ನಗರದ ಕಲ್ಲೇಶ್ವರ ದೇವಾಲಯದಿಂದ ಹೊರಟು ಕೋಡಿ ಸರ್ಕಲ್ನಲ್ಲಿರುವ ವಿವಾದಿತ ಬಸವೇಶ್ವರ ವೃತ್ತದಿಂದ ವಿವಿಧ ಕಲಾ ತಂಡಗಳಾದ ನಂದಿಧ್ವಜ ಕುಣೀತ, ಡೊಳ್ಳು ಕುಣಿತ, ವೀರಗಾಸೆ ಕುಣಿತ, ನಗಾರಿ, ಕಹಳೆ, ಕರಡೇವು, ಧಾಂಡೀಯಾ ಮ್ಯೂಸಿಕ್, ಬಸವ ಉತ್ಸವ, ೩೦ ಅಡಿ ಎತ್ತರದ ಬೃಹತ್ ಬಸವೇಶ್ವರ ಭಾವಚಿತ್ರದೊಂದಿಗೆ ಹೊಸಹಳ್ಳಿ ಪುರದ ಬಸವೇಶ್ವರ, ಈಚನೂರು ಕಾವಲಿನ ಕೋಡಿಬಸವೇಶ್ವರ, ಬೆಳಗರಹಳ್ಳಿ, ಹರಚನಹಳ್ಳಿ, ಬಿಳಿಗೆರೆ, ಗೋರಗೊಂಡನಹಳ್ಳಿ, ಸೂಗೂರು, ಕೆರಗೋಡಿ ಗ್ರಾಮದ ಬಸವಗಳೊಂದಿಗೆ ನಗರದ ದೊಡ್ಡಪೇಟೆ ಮಾರ್ಗವಾಗಿ ಶ್ರೀ ಗುರುಕು¯ ಕಲ್ಯಾಣ ಮಂಟಪದವರೆಗೆ ಸಾವಿರಾರು ಬಸವ ಭಕ್ತರು ಹಾಗೂ ಅನುಯಾಯಿಗಳು ಸೇರಿ ಸುಮಾರು ನಾಲ್ಕು ಗಂಟೆಗಳ ಕಾಲ ಮೆರವಣಿಗೆ ನಡೆಯಿತು.
ಜಯಂತಿ ಉತ್ಸವದಲ್ಲಿ ಶಾಸಕ ಕೆ.ಷಡಕ್ಷರಿ, ಮಾಜಿ ಸಚಿವ ಬಿ.ಸಿ.ನಾಗೇಶ್, ಜೆಡಿಎಸ್ ಮುಖಂಡ ಶಾಂತಕುಮಾರ್, ಟೂಡಾ ಶಶಿಧರ್, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಅಖಿಲ ಭಾರತ ವೀರಶೈವ ಮಹಾಸಬಾದ ಪದಾಧಿಕಾರಿಗಳು, ಯುವ ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿ ರಸ್ತೆಯುದ್ದಕ್ಕೂ ಬಸವೇಶ್ವರ ಬಿರುದಾವಳಿಗಳನ್ನು ಜೈಕಾರ ಹಾಕುತ್ತಾ ಕುಣಿದು ಕುಪ್ಪಳಿಸಿದರು. ಉತ್ಸವಕ್ಕೆ ಅಕ್ಕ ಪಕ್ಕದ ಅಂಗಡಿ ಮಳಿಗೆಗಳಿಂದ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಮೆರವಣಿಗೆ ಹಾದು ಬರುವ ಜಾಗದಲ್ಲಿ ಕೇಸರಿ ಬಾವುಟಗಳ ಚಿತ್ತಾರÀ ನಗರವನ್ನು ರಂಗೇರಿಸಿತ್ತು.
ಕುಪ್ಪೂರು-ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮೀಜಿ ೧೨ನೇ ಶತಮಾನದಲ್ಲಿ ಸಾಮಾಜಿಕ ಪಿಡುಗಾಗಿದ್ದ ವರ್ಣ ಸಂಸ್ಕೃತಿ ಹಾಗೂ ಜಾತಿ ವ್ಯವಸ್ಥೆಯನ್ನು ದೂರವಾಗಿಸಿ ಮನುಷ್ಯ ಮನುಷ್ಯರನ್ನು ಧರ್ಮ, ಧರ್ಮಗಳನ್ನು ಪ್ರೀತಿಸುವಂತೆ ಮಾಡಿ ಎಲ್ಲರಲ್ಲೂ ಸಮಾನತೆ ಸಹಬಾಳ್ವೆ ಬರುವಂತೆ ಮಾಡಿ, ಕಾಯಕದ ಮೂಲಕ ದಾಸೋಹಕ್ಕೆ ಹೆಚ್ಚು ಮಹತ್ವ ನೀಡಿದ ಬಸವೇಶ್ವರರ ತತ್ವ ಸಿದ್ದಾಂತಗಳು ಇಂದಿಗೂ ಅವಶ್ಯಕವಾಗಿದ್ದು ಅವುಗಳನ್ನು ಮಾನವ ನಡೆ ನುಡಿಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ನಗರದ ಗುರುಕುಲಾನಂದಾಶ್ರಮದ ಇಮ್ಮಡಿಕರಿಬಸವದೇಶಿಕೇಂದ್ರ ಸ್ವಾಮೀಜಿ ಮಾತನಾಡಿ ಬಸವಣ್ಣನವರ ಇಷ್ಟಲಿಂಗ ಪೂಜೆಯು ತನ್ನ ಕಾಯಕದ ಸಂಕೇತದೊAದಿಗೆ ಸಮಾನತೆ ಅಂಶವನ್ನೋಳಗೊAಡಿತ್ತು. ಆದರೆ ಇಂದು ಇಷ್ಟಲಿಂಗವು ಒಂದು ಜಾತಿಗೆ ಮೀಸಲಾಗಿರುವುದು ಶೋಚನೀಯ. ಸಮಾಜದಲ್ಲಿ ಅಡಕವಾಗಿದ್ದ ಮೌಡ್ಯತೆ ಹಾಗೂ ಕಂದಚಾರಗಳನ್ನು ತೊಲಗಿಸಲು ಸಾಮಾಜಿಕ ಬದಲಾವಣೆಯನ್ನು ಮಾಡಲು ಬಸವಣ್ಣ ವಚನಗಳ ಮೂಲಕ ಕ್ರಾಂತಿಯನ್ನೇ ಮಾಡಿ ಸುಧಾರಣೆಗಾಗಿ ಶ್ರಮಿಸಿದ ಸಾಂಸ್ಕೃತಿಕ ನಾಯಕ. ಮನುಷ್ಯನು ತನ್ನ ಬದುಕಿಗೆ ಶಿಸ್ತು ಸಂಯಮದ ಜೊತೆಗೆ ಸಾಧನೆ ಮಾಡಲು ಏಕಾಗ್ರತೆ ಧಾನ್ಯ ಅತಿವಶ್ಯಕವಾಗಿದೆ ಎಂದರು.
ಕಾAಗ್ರೇಸ್ ಮುಖಂಡ ಸಿ.ಬಿ.ಶಶಿಧರ್ ಮಾತನಾಡಿ ಕಾಲ ಕಳೆದಂತೆ ವಿಭೂತಿ ಸಂಸ್ಕೃತಿ, ವಸ್ತç ಸಂಸ್ಕೃತಿ ಮರೆಯಾಗುತ್ತಿದೆ. ನಾವೆಲ್ಲರೂ ಶರಣ ಸಂಸ್ಕೃತಿಯನ್ನು ಹಾದಿಯಲ್ಲಿ ಸಾಗಬೇಕಿದೆ ಎಂದರು.
ಯುವಜನೋತ್ಸವದಲ್ಲಿ ವಿಜೇತರಾದವರಿಗೆ ವೇದಿಕೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕಂಚಾಘಟ್ಟ ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಅಭಿನವ ಕಾಡಸಿದೇಶ್ವರ ಸ್ವಾಮೀಜಿ, ವೀರಶೈವ ಲಿಂಗಾಯಿತ ಸಂಘಟನೆ ಅಧ್ಯಕ್ಷ ರೇಣುಕಾರಾಧ್ಯ ಹಾಗೂ ಯುವ ವೇದಿಕೆ ಅಧ್ಯಕ್ಷ ಲೋಹಿತ್, ನಗರಸಭೆ ಅಧ್ಯಕ್ಷೆ ಯುಮುನಾಧರಣೇಶ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ನಿಖಿಲ್ ರಾಜಣ್ಣ, ಮಲ್ಲಿಕಾರ್ಜುನ್, ನಿಜಗುಣ, ಮುಂತಾದವರು ಹಾಜರಿದ್ದರು.