ತಿರುಪತಿ ಲಡ್ಡು ವಿವಾದ: ಇಡಿ ಕ್ಷೇತ್ರ ಗೋ ಮೂತ್ರದ ಶುದ್ಧೀಕರಣ ಆಗಲಿ ಮುತಾಲಿಕ್

ತಿರುಪತಿ ಲಡ್ಡು ವಿವಾದ: ಇಡಿ ಕ್ಷೇತ್ರ ಗೋ ಮೂತ್ರದ ಶುದ್ಧೀಕರಣ ಆಗಲಿ ಮುತಾಲಿಕ್

ಧಾರವಾಡ:  ಆಂದ್ರಪ್ರದೇಶದ ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ’ ಆರೋಪ ಸದ್ಯ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಬಗ್ಗೆ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರು ಮಾತನಾಡಿದರು. ಆಂದ್ರಪ್ರದೇಶದ ಚಂದ್ರಬಾಬು ನಾಯ್ಡು ಹೇಳಿಕೆ ದೇಶದಲ್ಲಿ ಸಂಚಲನ ಮೂಡಿಸಿದೆ. ಇಡಿ ಕ್ಷೇತ್ರ ಗೋ ಮೂತ್ರದ ಮೂಲಕ ಶುದ್ಧೀಕರಣ ಆಗಬೇಕು ಎಂದು ಒತ್ತಾಯ ಮಾಡಿದರು.

ನಗರದಲ್ಲಿಂದು ಸುದ್ದಿಗಾರರ ಅವರು ಮಾತನಾಡಿದರುಇವರಿಗೆ ಹಿಂದೂ ಸಮಾಜ ಬೆಂಬಲಕ್ಕೆ ನಿಲ್ಲಬೇಕು ಚಂದ್ರಬಾಬು ನಾಯ್ಡು, ಪವನ ಕಲ್ಯಾಣ, ಮತಾಂತರ, ಇಸ್ಲಾಮೀಕರಣ ಶುದ್ಧೀಕರಣ ಮಾಡುತ್ತಿದ್ದಾರೆ. ತಿರುಪತಿ ತಿಮ್ಮಪ್ಪನ ಕ್ಷೇತ್ರದಲ್ಲಾದ ಘೋರ ಅನ್ಯಾಯ ತೊಳೆಯುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಹಿಂದೂ ಸಮಾಜ ಬೆಂಬಲಕ್ಕೆ ನಿಲ್ಲಬೇಕು. ಸಿಇಒ ಅಮಾನತು, ಇನ್ನಾರೋ ಮೇಲೆ ಕೇಸ್ ಹಾಕಿದರೆ ಸಾಲದು. ಇಡಿ ಕ್ಷೇತ್ರ ಗೋ ಮೂತ್ರದ ಮೂಲಕ ಶುದ್ಧೀಕರಣ ಆಗಬೇಕು ಎಂದಿದ್ದಾರೆ.

ಲಡ್ಡುವಿನಲ್ಲಿ ಶುದ್ಧವಾದ ತುಪ್ಪ ಬಳಸಿಲ್ಲ. ಗೋಮಾಂಸದ ಕೊಬ್ಬು, ಮೀನಿನ ಎಣ್ಣೆ ಉಪಯೋಗಿಸಿದ್ದಾರೆ ಎಂದು ಹಿಂದಿನ ಜಗನ್  ಮೋಹನ್ ರೆಡ್ಡಿ ಸರ್ಕಾರದ ಮೇಲೆ ಆರೋಪ ಮಾಡಲಾಗಿದೆ. ಇದು ಸಣ್ಣ ಆರೋಪವಲ್ಲ. ಬಹಳ ಗಂಭೀರವಾದ ಆರೋಪ ಎಂದು ಹೇಳಿದ್ದಾರೆ.

ಗುಜರಾತ್ ಪ್ರಯೋಗಾಲಯದ ವರದಿ ಸಹ ಬಹಿರಂಗಪಡಿಸಿದ್ದಾರೆ. ಇದು ನೂರಕ್ಕೆ ನೂರು ಜಗನ್ ಮೋಹನ್  ರೆಡ್ಡಿ ಅವಧಿಯ ಘೋರ ಅಪರಾಧ. ಅಕ್ಷಮ್ಯ ಅಪರಾಧ. ಇದನ್ನು ಹಿಂದೂ ಸಮುದಾಯ ಕ್ಷಮಿಸುವುದಿಲ್ಲ. ತಿರುಪತಿ ತಿಮ್ಮಪ್ಪ ಸಹ ಕ್ಷಮಿಸದ ಅಪರಾಧ ಜಗನ್ ರೆಡ್ಡಿ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಎನ್ಕೌಂಟರ್ ಮಾಡಬೇಕು: ಮುತಾಲಿಕ್ ಕಿಡಿ ಇಡೀ ಜಗತ್ತಿನ ಕೋಟ್ಯಂತರ ಭಕ್ತರು ಅಲ್ಲಿಗೆ ಬರುತ್ತಾರೆ. ಭಕ್ತಿ-ಭಾವದಿಂದ ತುಂಬಿ ತುಳಕುವ ಪ್ರಸಾದದಲ್ಲಿ ಇಂತಹ ದ್ರೋಹ ಮಾಡಿದ್ದಾರೆ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ. ಈ ಘೋರ ಅಪರಾಧ ಮಾಡಿದವರನ್ನು ಎನ್ಕೌಂಟರ್ ಮಾಡಬೇಕು. ಇದು ಕ್ರಿಮಿನಲ್ ಅಪರಾಧ. ಹಿಂದೂಗಳ ನಂಬಿಕೆ, ವಿಶ್ವಾಸಕ್ಕೆ ಆಘಾತ ಮಾಡುವ ಕೆಲಸ. ಪ್ರಸಾದದ ಪವಿತ್ರತೆಗೆ ಕಳಂಕ ತಂದ ಕೆಲಸ. ತಪ್ಪಿತಸ್ಥರ ಮೇಲೆ ಕೋರ್ಟ್ ಸೆಕ್ಷನ್ ಹಾಕಿದರೆ ಸಾಲದು, ಕಠಿಣ ಕ್ರಮ ಆಗಬೇಕು ಎಂದಿದ್ದಾರೆ.

ಇದೇ ಲಡ್ಡುವಿನಲ್ಲಿ ವಿಷ ಹಾಕಿದ್ರೆ? ಇದೇ ಲಡ್ಡುವಿನಲ್ಲಿ ಸ್ಲೋ ಪಾಯಿಸನ್ ಹಾಕಿದ್ರೆ? ಅದನ್ನೆಲ್ಲ ಹಾಕುವಂತಹ ನೀಚ ಬುದ್ಧಿ, ಪ್ರವೃತ್ತಿ ಇವತ್ತಿನ ರಾಜಕಾರಣಗಳಲ್ಲಿದೆ. ಜಗನ್ ತಂದೆ ವೈ.ಎಸ್. ರಾಜಶೇಖರ ರೆಡ್ಡಿ ಅಲ್ಲಿನ ಬೆಟ್ಟಗಳನ್ನು ಕ್ರಿಶ್ಚಿಯನ್ರಿಗೆ ಕೊಟ್ಟಿದ್ದರು. ಹೀಗಾಗಿ ಅವರು ತಿಮ್ಮಪ್ಪನ ಶಾಪದಿಂದ ಸತ್ತರು. ಅವರ ಎಲುಬು ಸಹ ಸಿಗಲಿಲ್ಲ. ಆತ ಸುಟ್ಟು ಬೂದಿಯಾಗಿ ಹೋಗಿದ್ದ. ಎಲ್ಲಿ ಸತ್ತಿದ್ದಾರೆಂಬುದ ಸುಳಿವು ಸಿಗದಂತಹ ಸ್ಥಳದಲ್ಲಿ ಅಪಘಾತ ಆಗಿತ್ತು. ಅದೇ ಮಾದರಿಯಲ್ಲಿ ಜಗನ್ ಹೀನಾಯವಾಗಿ ಸೋತಿದ್ದಾರೆ. ಇದು ಹಿಂದು ಸಮಾಜ ಮತ್ತು ತಿರುಪತಿ ತಿಮ್ಮಪ್ಪನ ಶಾಪ ಎಂದಿದ್ದಾರೆ.

Leave a Reply

Your email address will not be published. Required fields are marked *