ತುಮಕೂರು || 74 rowdy sheeters ಪ್ರಕರಣ ರದ್ದು

ತುಮಕೂರು || 74 rowdy sheeters ಪ್ರಕರಣ ರದ್ದು

ಜಿಲ್ಲೆಯಲ್ಲಿ 901 ರೌಡಿಶೀಟರ್‌ಗಳಿದ್ದು,  ಈ ಪೈಕಿ ಸನ್ನಡತೆ ಆಧಾರದಲ್ಲಿ 91 ರೌಡಿಶೀಟರ್‌ಗಳನ್ನ ಸಭೆಗೆ ಕರೆಯಲಾಗಿತ್ತು. 91 ರೌಡಿಶೀಟರ್‌ಗಳ ಪೈಕಿ 74 ರೌಡಿಶೀಟರ್‌ಗಳ ವಿರುದ್ಧದ ಪ್ರಕರಣಗಳನ್ನು ರದ್ದು

ತುಮಕೂರು: ಸನ್ನಡತೆ ಆಧಾರದ ಮೇಲೆ ಬರೋಬ್ಬರಿ 74 ಮಂದಿ ರೌಡಿಶೀಟರ್‌ಗಳ ವಿರುದ್ದದ ಪ್ರಕರಣವನ್ನ ರದ್ದು ಮಾಡಿ, ರೌಡಿಶೀಟರ್ ಪಟ್ಟಿಯಿಂದ ಅವರನ್ನು ತೆಗೆಯಲಾಗಿದೆ.

ನಗರದ ಎಸ್ಪಿ ಕಚೇರಿ ಮೈದಾನದಲ್ಲಿ ರೌಡಿಶೀಟರ್‌ಗಳ ಪರಿವರ್ತನಾ ಸಭೆ ನಡೆಯಿತು. ಸಭೆಗೆ ಕಳೆದ ಏಳೆಂಟು ವರ್ಷಗಳಿಂದ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದ ರೌಡಿಶೀಟರ್‌ಗಳನ್ನು ಕರೆಯಲಾಗಿತ್ತು. ಸನ್ನಡತೆ ಪರಿಶೀಲನೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಕರೆದಿದ್ದರು. ಜಿಲ್ಲೆಯಲ್ಲಿ 901 ರೌಡಿಶೀಟರ್‌ಗಳಿದ್ದು,  ಈ ಪೈಕಿ ಸನ್ನಡತೆ ಆಧಾರದಲ್ಲಿ 91 ರೌಡಿಶೀಟರ್‌ಗಳನ್ನ ಸಭೆಗೆ ಕರೆಯಲಾಗಿತ್ತು. ಸಭೆಗೆ ಹಾಜರಾದ  ರೌಡಿಶೀಟರ್‌ಗಳ ಸದ್ಯದ ಜೀವನ, ಆರೋಗ್ಯ ಹಾಗೂ ಕೆಲಸದ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ಸಭೆಗೆ ಬಂದಿದ್ದ 91 ರೌಡಿಶೀಟರ್‌ಗಳ ಪೈಕಿ 74 ರೌಡಿಶೀಟರ್‌ಗಳ ವಿರುದ್ಧದ ಪ್ರಕರಣಗಳನ್ನು ರದ್ದುಮಾಡಲಾಗಿದೆ.

ರೌಡಿಶೀಟರ್‌ಗಳ ಪರಿವರ್ತನಾ ಸಭೆಯಲ್ಲಿ ಅಜ್ಜನಿಂದ ಹಿಡಿದು 25ರಿಂದ 30 ವರ್ಷದವರೂ ಭಾಗಿಯಾಗಿದ್ದರು. ಕಳೆದ ಹತ್ತುವರ್ಷದಲ್ಲಿ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗದೇ  ಇರುವ ರೌಡಿಶೀಟರ್‌ಗಳ ಪ್ರಕರಣವನ್ನು ರದ್ದುಗೊಳಿಸಿದ್ದಾರೆ.

ಸನ್ನಡತೆ ನೋಡಿಕೊಂಡು ನಮ್ಮನ್ನು ರೌಡಿಶೀಟರ್ ಪಟ್ಟಿಯಿಂದ ತೆಗೆದಿದ್ದಾರೆ. ನಾವು ಅನುಭವಿಸಿದ್ದೇ ಸಾಕು. ಮುಂದೆ ಯಾರೂ ರೌಡಿಶೀಟರ್ ಓಪನ್ ಮಾಡಿಸಿಕೊಳ್ಳಲು ಹೋಗಬೇಡಿ. ದಯವಿಟ್ಟು ಹೆಂಡತಿ ಮಕ್ಕಳು ಸುಖವಾಗಿರಿ. ರೌಡಿಶೀಟರ್ ಓಪನ್ ಆದರೆ ತುಂಬಾ ಕಷ್ಟ. ಸಮಾಜ ರೌಡಿಶೀಟರ್ ಎಂದಾಗ ಒಬ್ಬೊಬ್ಬರು ಒಂದೊಂದು ರೀತಿ ನೋಡುತ್ತಾರೆ. ಮಕ್ಕಳಿಗೆ ಗೊತ್ತಾಗದಂತೆ ಈವರೆಗೆ ಬಂದ್ವಿ. ಈಗ ರೌಡಿಶೀಟರ್ ಪಟ್ಟಿಯಿಂದ ಮುಕ್ತಿಗೊಳಿಸಿದ್ದಾರೆ ಬಹಳ ಸಂತೋಷವಾಗಿದೆ ಎಂದು ರೌಡಿಶೀಟರ್‌ಯಿಂದ ಮುಕ್ತರಾದ ಶಿವಕುಮಾರ್ ಕಣ್ಣೀರಿಟ್ಟರು. ಹದಿನೆಂಟು ವರ್ಷದಿಂದ ರೌಡಿ ಎಂದಾಗ ತುಂಬಾ ಬೇಸವಾಗುತ್ತಿತ್ತು. ನನ್ನ ಆರೋಗ್ಯವೂ ಅಷ್ಟು ಸರಿಯಿಲ್ಲ. ನನ್ನ ವಯಸ್ಸು 60 ಸರ್. ಪೊಲೀಸರು ಕರೆದಾಗಲೆಲ್ಲಾ ಬರುತ್ತಿದೆ. ರೌಡಿಶೀಟರ್ ಯಿಂದ ತೆಗೆದಿದ್ದಾರೆ. ಬಹಳ ಸಂತೋಷವಾಗುತ್ತಿದೆ ಸಾರ್. ದೇವರು ಇದಾನೆ. ಎಸ್ಪಿ ಸಾಹೇಬ್ರಿಗೆ ಥ್ಯಾಂಕ್ಸ್ ಎಂದು ನವಾಬ್ ಅವರು ನೋವಿನ ಅನುಭವದ ನುಡಿಗಳನ್ನು ಬಿಚ್ಚಿಟ್ಟರು. ಸಾರ್ ಹತ್ತುವರ್ಷದ ಹಿಂದೆ ಸೈಟ್ ವಿಚಾರಕ್ಕೆ ಜಗಳ ಮಾಡಿಕೊಂಡಿದ್ವಿ. ರೌಡಿಶೀಟರ್ ಓಪನ್ ಮಾಡಿದ್ರು. ಈಗ ತೆಗೆದಿದ್ದಾರೆ ನಂಗೆ ಒಳ್ಳೆದಾಗಿದೆ. ಯಾರೂ ಗಲಾಟೆ ಮಾಡಿಕೊಳ್ಳಬೇಡಿ. ಪೊಲೀಸರು ಇನ್ಮೇಲೆ ಚೆನ್ನಾಗಿರು ಎಂದು ಕಳಿಸಿದ್ದಾರೆ. ಅಣ್ಣ ತಮ್ಮಂದಿರು ಕಿತ್ತಾಡಿಕೊಂಡಿದ್ದು ತಪ್ಪು ಎಂದು ಗೊತ್ತಾಯಿತು ಎಂದು ರೌಡಿಶೀಟರ್ ಪಟ್ಟಿಯಲ್ಲಿದ್ದ ವೃದ್ಧರೊಬ್ಬರು ನಿಟ್ಟುಸಿರು ಬಿಟ್ಟರು.

ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವವರ ಮೇಲೆ ರೌಡಿಶೀಟರ್ ಓಪನ್ ಮಾಡುತ್ತೇವೆ. ರೌಡಿಶೀಟರ್ ಓಪನ್ ಮಾಡಿದವರ ಮೇಲೆ ನಿರಂತರವಾಗಿ ವೀಕ್ಷಣೆ ಮಾಡಲಾಗುತ್ತದೆ. ಚುನಾವಣೆ ಸಂದರ್ಭದಲ್ಲಿ, ಜಾಸ್ತಿ ಗಲಭೆ ಮಾಡುವ ಸಂದರ್ಭದಲ್ಲಿ ಅವರನ್ನು ಗಡಿಪಾರು ಮಾಡಲಾಗುತ್ತದೆ. ರೌಡಿಶೀಟರ್ ಓಪನ್ ಆದಮೇಲೆ ಹತ್ತುವರ್ಷಗಳ ಕಾಲ ಯಾವುದೇ ಕ್ರೆöÊಂನಲ್ಲಿ ಭಾಗಿಯಾಗದೇ ಇದ್ದಾಗ, ಅವರ ಮೇಲಿನ ಕೇಸ್‌ಗಳು ಮುಕ್ತಾಯವಾಗಿದ್ದಾಗ ಅವರನ್ನು ರೌಡಿಶೀಟರ್ ಪಟ್ಟಿಯಿಂದ ತೆಗೆಯುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಕೆ.ವಿ.ಅಶೋಕ್ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *