ತುಮಕೂರು || ಮೊಬೈಲ್ ನೆಟ್ ವರ್ಕ್ ಸಿಗದೆ ಪರದಾಟ

ತುಮಕೂರು || ಮೊಬೈಲ್ ನೆಟ್ ವರ್ಕ್ ಸಿಗದೆ ಪರದಾಟ

ಗುಬ್ಬಿ: ಕಳೆದ ಐದಾರು ತಿಂಗಳುಗಳಿOದ ಗುಬ್ಬಿಯ ಕೆಲ ಬಡಾವಣೆಗಳಲ್ಲಿ  ಮೊಬೈಲ್ ಟವರ್ ಸಿಗುತ್ತಿಲ್ಲ ಎಂದು ಗುಬ್ಬಿಯ ಗ್ರಾಹಕರು ಗಂಭೀರ ಆರೋಪ ಮಾಡಿದ್ದಾರೆ, ಗುಬ್ಬಿ ಪಟ್ಟಣದ ಮಾರುತಿ ನಗರ, ವಿದ್ಯಾನಗರ, ಮಹಾಲಕ್ಷ್ಮೀ ನಗರ ಬಡಾವಣೆಗಳಲ್ಲಿ ಏರ್‌ಟೆಲ್ ಹಾಗೂ ಜಿಯೋ ನೆಟ್ ವರ್ಕ್ಗಳು ಸಿಗದೆ ಕಾಲ್ ಡ್ರಾಪ್ ಆಗುತ್ತಿದ್ದು, ಈ ಬಗ್ಗೆ ಕಂಪನಿಗಳು ಯಾವುದೇ ರೀತಿಯಲ್ಲಿ ತಾಂತ್ರಿಕವಾಗಿ ಮೇಲ್ದರ್ಜೆಗೆ ಏರಿಸುವುದಿರಲಿ, ಗ್ರಾಹಕರ ದೂರನ್ನು ಕೇಳುವವರೇ ಇಲ್ಲ.  ನಿತ್ಯ ಒಂದು ಸಾವಿರಕ್ಕೂ ಹೆಚ್ಚು ಗ್ರಾಹಕರು ತಮ್ಮ ಮೊಬೈಲ್‌ಗಳನ್ನು ಹಿಡಿದು ಸಿಗ್ನಲ್ ಸಿಗದೆ ತಮ್ಮ ಮನೆಗಳ ಮೇಲೆ ನಿಂತು ಮಾತನಾಡಲು ಪ್ರಯತ್ನಿಸುತ್ತಿದ್ದು ಇದು ಸಾಧ್ಯವಾಗದೆ ಕಂಪೆನಿಗಳವರಿಗೆ ಶಾಪ ಹಾಕುತ್ತಿದ್ದಾರೆ.

ಇದಕ್ಕೆ ಕಾರಣ ಹುಡುಕುವುದಾದರೆ ವಿದ್ಯಾನಗರ ಬಡಾವಣೆಯಲ್ಲಿ ಹಾಲಿ ಇರುವ ಟವರ್‌ಗೆ 5 ಜಿ ತಂತ್ರಜ್ಞಾನ ಅಳವಡಿಸಲು ಸ್ಥಳೀಯರು ವಿರೋಧಿಸುತ್ತಿರುವುದು. ಇಲ್ಲಿನ ಸ್ಥಳೀಯ ಪಟ್ಟಣ ಪಂಚಾಯ್ತಿ ಸದಸ್ಯರೊಬ್ಬರ ಮನೆ ಪಕ್ಕದಲ್ಲಿರುವ ಟವರ್ ಮೇಲ್ದರ್ಜೆಗೇರಿಸಲು ಇವರು ವಿರೋಧಿಸುತ್ತಿದ್ದು, ಈ ಭಾಗದ ಸುತ್ತಮುತ್ತ ಮೊಬೈಲ್ ತರಂಗಾOತರಗಳಿOದ ಸುಮಾರು ಮಹಿಳೆಯರು ಕ್ಯಾನ್ಸರ್ ಕಾಯಿಲೆಯಿಂದ ಮರಣ ಹೊಂದಿದ್ದಾರೆ.  ಈ ತರಂಗಾAತರಗಳು ಇನ್ನು ದುಷ್ಪರಿಣಾಮ ಬೀರಬಹುದು ಎಂದು ಇವರು ವಿರೋಧಿಸುತ್ತಿದ್ದಾರೆ. ಇದು ಯಾವ ಮಟ್ಟಕ್ಕೆ ಎಂದರೆ ಇಲ್ಲಿ ಟವರ್ ಮೇಲ್ದರ್ಜೆಗೆ ಅವಕಾಶ ಕೊಟ್ಟರೆ ನಮ್ಮ ಮನೆಯವರೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂಬ ಮಾತಿನವರೆಗೆ ನಡೆದಿದೆ.

ಈ ನೆಪ ಇಟ್ಟುಕೊಂಡು ಜಿಯೋ ಮತ್ತು ಏರ್ ಟೆಲ್‌ನವರು ಗ್ರಾಹಕರಿಗೆ ಸೇವೆ ಕೊಡುತ್ತಿಲ್ಲ. ಗ್ರಾಹಕರು ದೂರು ಏನೆಂದರೆ ಅಲ್ಲಿ ಅವಕಾಶವಿಲ್ಲದಿದ್ದರೆ ಬೇರೆ ಕಡೆ ಟವರ್ ಅಳವಡಿಸಿ ಎನ್ನುತ್ತಾರೆ. ಆದರೆ ಇವರ ಗೋಳು ಕೇಳುವರು ಯಾರು ಹೇಳಿ? ಪ್ರತಿ ತಿಂಗಳು ೩೦೦ ರೂ. ನಮ್ಮ ಕಿಸೆಯಿಂದ ಕಸಿಯುವ ಮೊಬೈಲ್ ಕಂಪನಿಗಳು ಸೇವೆಯನ್ನು ಮಾತ್ರ ನೀಡದೆ ಹಣ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಹೆಸರು ಹೇಳದ ಗ್ರಾಹಕರೊಬ್ಬರು, ಈ ಬಗ್ಗೆ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಗ್ರಾಹಕರೆಲ್ಲಾ ಸೇರಿ ಕೇಂದ್ರ ದೂರಸಂಪರ್ಕ ಮಂತ್ರಿಗೆ ಹಾಗೂ ಪ್ರಧಾನ ಮಂತ್ರಿಯವರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *