ತುಮಕೂರು || ತುಮಕೂರಿನ ಉಪ್ಪಾರಹಳ್ಳಿಯಲ್ಲಿ ಸಮಸ್ಯೆಗಳ ಆಗರ

ತುಮಕೂರು || ತುಮಕೂರಿನ ಉಪ್ಪಾರಹಳ್ಳಿಯಲ್ಲಿ ಸಮಸ್ಯೆಗಳ ಆಗರ

ಚನ್ನಬಸವ.ಎಂ ಕಿಟ್ಟದಾಳ್

ತುಮಕೂರು : ಯಾವುದೇ ಒಂದು ಪ್ರದೇಶದ ರಸ್ತೆಯ ಸ್ಥಿತಿಗತಿಗಳು ಅಲ್ಲಿನ ಅಭಿವೃದ್ಧಿಯನ್ನು ಎತ್ತಿ ಹಿಡಿಯುತ್ತದೆ. ರಸ್ತೆ ಕಾಮಗಾರಿ ಮೇಲೆಯೇ ಅಲ್ಲಿನ ಅಭಿವೃದ್ಧಿಯನ್ನು ಅಳೆಯುವುದುಂಟು. ಆದ್ರೆ ಅದೆಷ್ಟೋ ಕಡೆಗಳಲ್ಲಿ ಕೆಲ ಮುಖ್ಯ ರಸ್ತೆಗಳನ್ನು ಮಾತ್ರ ಅಭಿವೃದ್ಧಿಪಡಿಸಲಾಗುತ್ತದೆಯೇ ಹೊರತು ಹೆಚ್ಚಿನ ರಸ್ತೆಗಳು ಅಭಿವೃದ್ಧಿ ಕಾಣುವುದೇ ಇಲ್ಲ. ಈ ಸಮಸ್ಯೆಯಿಂದ ತುಮಕೂರು ಕೂಡ ಹೊರತಲ್ಲ.

ತುಮಕೂರಿನ ಉಪ್ಪರಹಳ್ಳಿಯ 18 – 24 ನೇ ವಾರ್ಡ್ಗೆ ಮಧ್ಯದಲ್ಲಿರುವ ಈ ರಸ್ತೆಯು ಕೂಡ ಅದೇಷ್ಟೋ ವರ್ಷಗಳಿಂದ ಅದ್ವಾನವಾಗಿದೆ. ರಸ್ತೆಗೆ ಡಾಂಬರ್ ಕಂಡು ಸಾಕಷ್ಟು ವರ್ಷಗಳೇ ಕಳೆದಿವೆ. ಈ ರೀತಿ ಇರುವ ರಸ್ತೆಯಲ್ಲಿ ಮ್ಯಾನ್ ಹೋಲ್ ಸರಿಪಡಿಸಲು ಹೋಗಿ ಮತ್ತೊಂದು ಅವಾಂತರವನ್ನೇ ಸೃಷ್ಟೀಸಿದ್ದಾರೆ ಮಹಾನಗರ ಪಾಲಿಕೆ ಅಧಿಕಾರಿಗಳು. ಮ್ಯಾನ್ ಹೋಲ್ ಸರಿಪಡಿಸಲು ರಸ್ತೆಯನ್ನು ಕಿತ್ತು ಹಾಕಿದ್ದು ಮತ್ತೇ ಆ ರಸ್ತೆಗೆ ಕೇವಲ ಮಣ್ಣನ್ನು ಮುಚ್ಚುವ ಮೂಲಕ ರಸ್ತೆಯನ್ನು ಅದಗೆಡಿಸಿದ್ದಾರೆ. ಅಲ್ಲಿನ ಜನರು ಈ ರಸ್ತೆಯಲ್ಲಿ ಓಡಾಡಲು ಸಹ ಭಯಪಡುತಿದ್ದಾರೆ. ಅದೆಷ್ಟು ಜನ ಬಿದ್ದು ಎದ್ದು ಹೋಗಿದ್ದಾರೋ ಗೊತ್ತಿಲ್ಲ, ಅದೆಷ್ಟು ಜನಕ್ಕೆ ಕೈ ಕಾಲು ಮುರಿದಿದಿಯೋ ಗೊತ್ತಿಲ್ಲ. ರಸ್ತೆ ಅಕ್ಕ ಪಕ್ಕದ ಮನೆಗಳು ಕೂಡು ಕುಸಿಯುವ ಆತಂಕ ಜನರಲ್ಲಿ ಮೂಡಿದೆ.

ಇನ್ನೂ ಉಪ್ಪಾರಹಳ್ಳಿ ಸರ್ಕಾರಿ ಬಾವಿಯಿಂದ ಕೆಳ ಮುಖ ವಾಗಿ ಸಾಗುವ ರಸ್ತೆಯಲ್ಲಿ ಹೆಚ್ಚಗಿ ವೃದ್ಧರು ಮತ್ತು ಮಕ್ಕಳು ಓಡಾಡುತ್ತಾರೆ. ಈ ರಸ್ತೆ ಹಾಳಾದಾಗಿನಿಂದ ವೃದ್ಧರಲ್ಲಿ ಭಯದ ವಾತವರಣ ಸೃಷ್ಟಿಯಾಗಿದೆ. ಮಕ್ಕಳಂತು ಈ ರಸ್ತೆಯಲ್ಲಿ ಓಡಾಡುವುದೇ ಇಲ್ಲ.. ಕಾರಣ ಇಷ್ಟೇ ಈ ರಸ್ತೆಯಲ್ಲಿ ಬಂದರೆ ಎಲ್ಲಿ ಜಾರಿ ಬೀಳುತ್ತೇವೋ ಎಂಬ ಭಯ ಅವರ ಮನದಲ್ಲಿ ಮನೆ ಮಾಡಿದೆ. ಸಾಕಷ್ಟು ದಿನಗಳಿಂದ ಈ ಸಮಸ್ಯೆಯನ್ನು ಎದುರಿಸುತ್ತಿರುವ ಇಲ್ಲಿನ ಸ್ಥಳಿಯರು ಅಧಿಕಾರಿಗಳ ವಿರುದ್ಧ, ಮಹಾನಗರ ಪಾಲಿಕೆ ವಿರುದ್ಧ ತಿರುಗಿ ಬಿದ್ದಿದ್ದಾರೆ.

ರಸ್ತೆ ಸಮಸ್ಯೆಯಿಂದ ಮಾತ್ರವಲ್ಲ ಸಾಕಷ್ಟು ಸಮಸ್ಯೆಯಿಂದ ಉಪ್ಪಾರಹಳ್ಳಿ ಬಳಲುತಿದ್ದು ಇದರ ಬಗ್ಗೆ ಯಾವುದೇ ಅಧಿಕಾರಿಗಳು ಕೂಡ ಗಮನ ಹರಿಸುತ್ತಿಲ್ಲ. ಹಲವಾರು ಬಾರಿ ಎಂಎಲ್‌ಎ, ಡಿಸಿ, ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಯಾರುಕೂಡ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಹೆಸರಿಗಷ್ಟೆ ಬಂದು ಪರಿಶೀಲಿಸಿ ಹೋಗುತ್ತಾರೆ ಅಷ್ಟೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 18 – ಮತ್ತು 24 ನೇ ವಾರ್ಡ್ನಲ್ಲಿ ಯಾವುದೇ ರೀತಿಯ ಜನಸ್ಪಂದನ ಕಾರ್ಯಕ್ರಮಗಳು ನಡೆದಿಲ್ಲ ಎಂದು ಜನ ಆರೋಪಿಸಿದ್ದಾರೆ.

ತುಮಕೂರು ಮಹಾನಗರ ಪಾಲಿಕೆ ಕೂಡ ಗುಂಡಿ ಬಿದ್ದ ರಸ್ತೆಗಳತ್ತ ಕಣ್ಣೆತ್ತಿ ನೋಡುತ್ತಿಲ್ಲ ಎನ್ನುವ ಆರೋಪವಿದೆ. ಇದರಿಂದಾಗಿ ಬಹುತೇಕ ಹದಗೆಟ್ಟ ರಸ್ತೆಗಳಲ್ಲಿ ಸಾರ್ವಜನಿಕರು ಸಂಚರಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಉಪ್ಪಾರಳ್ಳಿ ಬಳಿ ಗುಂಡಿಗಳಿOದ ಕೂಡಿರುವ ರಸ್ತೆಗಳಲ್ಲಿ ವಿಧಿಯಿಲ್ಲದೆ ಸಾರ್ವಜನಿಕರು ಸಂಚರಿಸುವ ವೇಳೆ ಕೆಲ ಸಣ್ಣ-ಪುಟ್ಟ ಅಪಘಾತಗಳಿಗೆ ಒಳಗಾಗಬೇಕಾಗಿದೆ. ರಾತ್ರಿಯಾಯಿತೆಂದರೆ ಸರಿಯಾದ ಬೀದಿ ದೀಪಗಳು ಕೂಡ ಇಲ್ಲದೆ ಇಂತಹ ಗುಂಡಿಗಳಿOದ ಕೂಡಿದ ರಸ್ತೆಗಳಲ್ಲಿ ಸಾಗುವ ಸಾರ್ವಜನಿಕರು ಸಾಕಷ್ಟು ಹರಸಾಹಸ ಪಡಬೇಕಾಗಿದೆ. ಇನ್ನೂ ಮಳೆಗಾಲ ಬಂದರೆ ಇಂತಹ ರಸ್ತೆಗಳಲ್ಲಿ ಹೆಚ್ಚು ಅಪಘಾತಕ್ಕೆ ಒಳಗಾಗಬೇಕಾಗುತ್ತದೆ ಎಂದು ಸಾರ್ವಜನಿಕರು ಅಧಿಕಾರಿಗಳಿಗೆ ಇಡೀ ಶಾಪವನ್ನು ಹಾಕುತಿದ್ದಾರೆ.

ಕರ್ನಾಟಕ ದೇಶದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮುಂಚೂಣಿ ರಾಜ್ಯ. ತನ್ನ ಅಭಿವೃದ್ಧಿ ಪಥದಲ್ಲಿ ರಸ್ತೆ ಮೂಲಸೌಕರ್ಯ ಪ್ರಮುಖ ಕೊಡುಗೆ ನೀಡಿದೆ. ಅದರಂತೆ ದೇಶದ ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಗೆ ತುಮಕೂರು ನಗರ ಕೂಡ ಒಳಪಟ್ಟಿದೆ. ಆದರೆ ತುಮಕೂರು ನಗರದಲ್ಲಿ ಸೀಮಿತ ರಸ್ತೆಗಳು ಮಾತ್ರ ಯೋಜನೆಯಡಿ ಅಭಿವೃದ್ಧಿ ಕಾಣುತ್ತಿವೆ ಹೊರತು ಕೆಲವು ರಸ್ತೆಗಳು ಇಂದಿಗೂ ಗುಂಡಿಗಳಿOದ ಕೂಡಿವೆ ಇದರ ಬಗ್ಗೆ ಸ್ಮಾರ್ಟ್ ಸಿಟಿ, ಮಹಾನಗರ ಪಾಲಿಕೆ ಮತ್ತು ಅಧಿಕಾರಿಗಳು ಕೂಡ ಗಮನ ಹರಿಸಬೇಕಿದೆ. ಕಾದು ನೋಡಬೇಕಾಗಿದೆ ಅದೆಷ್ಟು ಬೇಗ ಇದರಬಗ್ಗೆ ಅಧಿಕಾರಿಗಳು ಈಗಾಲದರು ಎಚ್ಚೇತ್ತುಕೊಳ್ಳುತ್ತಾರೆ ಎಂದು. ಉಪ್ಪಾರಳ್ಳಿಯ ಸಮಸ್ಯೆ ಕುರಿತಂತೆ ಅಲ್ಲಿನ ನಿವಾಸಿಗಳಾದ ನರಸಿಂಹ ದಾಸ್, ಕಂಬಣ್ಣ, ವೆಂಕಟೇಶ್, ಗುರು ಹೆಚ್.ಬಿ., ಸುಶೀಲಮ್ಮ, ಸಂಪತ್, ನಾರಾಯಾಣ್ ಮುಂತಾದವರು ತಮ್ಮ ಅಳನ್ನು ಪ್ರಗತಿ ಟಿವಿ ಮತ್ತು ಪ್ರಜಾಪ್ರಗತಿಗೆ ಹೇಳಿಕೊಂಡರು.

Leave a Reply

Your email address will not be published. Required fields are marked *