ತುಮಕೂರು:-ತುಮಕೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಜಿಟಿ-ಜಿಟಿ ಮಳೆಯಿಂದಾಗಿ ಸಾಕಷ್ಟು ಅನಾಹುತ ಸಂಭವಿಸಿದೆ.
ನಿರಂತರ ಮಳೆಗೆ ಕೃಷಿ ಇಲಾಖೆ ಮೇಲ್ಚಾವಣಿಯ ಸೀಲಿಂಗ್ ಕುಸಿತವಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಿಟಿ-ಜಿಟಿ ಮಳೆಯಿಂದ ಈ ಘಟನೆ ನಡೆದಿದೆ.
ಮಳೆ ನೀರಿಗೆ ಮೇಲ್ಚಾವಣಿ ನೆನೆದು ಸೀಲಿಂಗ್ ಕುಸಿದಿದೆ. ತುಮಕೂರಿನ ಕೋರ್ಟ್ ಬಳಿಯ ಕೃಷಿ ಇಲಾಖೆ ಮುಖ್ಯ ಕಚೇರಿಯ ಸೀಲಿಂಗ್ ಕುಸಿತವಾಗಿದೆ.
ಸೀಲಿಂಗ್ ಕುಸಿತದಿಂದ ಗಾಬರಿಗೊಂಡು ಸಿಬ್ಬಂದಿ ಓಡಿ ಹೋಗಿದ್ದಾರೆ. ಮಳೆ ಹೀಗೆಯೇ ಮುಂದುವರೆದರೆ ಮೇಲ್ಚಾವಣಿ ಕೂಡ ಕುಸಿಯುವ ಆತಂಕ ಎದುರಾಗಿದೆ. ಹೀಗಾಗಿ ಕೃಷಿ ಇಲಾಖೆ ಸಿಬ್ಬಂದಿ ಆತಂಕದಲ್ಲಿ ಕೆಲಸ ಮಾಡುತ್ತಿದ್ದಾರೆ.