ತುಮಕೂರು: ಕಲ್ಲುಕ್ವಾರಿಯಲ್ಲಿ ಕ್ವಾರಿಗೆ ಇಟ್ಟಿದ್ದ ಮದ್ದು ಸ್ಪೋಟಗೊಂಡು ಇಬ್ಬರಿಗೆ ಗಾಯವಾಗಿರುವ ಭಯಾನಕ ಘಟನೆ ಜರುಗಿದೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹೊಸಹಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಕ್ವಾರಿಯಲ್ಲಿ ಬಂಡೆ ಸ್ಪೋಟಿಸಲು ಇಟ್ಟಿದ್ದ ಮದ್ದು ಸ್ಪೋಟಗೊಂಡಿದೆ.
ಬಂಡೆಯನ್ನು ಛಿದ್ರಗೊಳಿಸಲು ಇಟ್ಟಿದ್ದ
ಮದ್ದು ಸ್ಪೋಟಿಸದ ಕಾರಣ ಪರಿಶೀಲಿಸಿ ನಿಷ್ಕ್ರಿಯಗೊಳಿಸಲು ಹೋದಾಗ ಏಕಾಏಕಿ ಸ್ಫೋಟಗೊಂಡಿದೆ. ಈ ವೇಳೆ ಮಂಜುನಾಥ್ ಹಾಗೂ ಕೋಟಪ್ಪ ಎಂಬುವರಿಗೆ ಗಂಭೀರ ಗಾಯವಾಗಿದೆ. ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.