ವಿಜಯಲಕ್ಷ್ಮೀ ಪೋಸ್ಟ್ ದರ್ಶನ್ ಬಿಡುಗಡೆಯ ಸೂಚನೆ ನೀಡ್ತಿದೆ, ಫುಲ್ ಖುಷ್ ಆದ ಡಿ ಬಾಸ್ ಫ್ಯಾನ್ಸ್.!

ವಿಜಯಲಕ್ಷ್ಮೀ ಪೋಸ್ಟ್ ದರ್ಶನ್ ಬಿಡುಗಡೆಯ ಸೂಚನೆ ನೀಡ್ತಿದೆ, ಫುಲ್ ಖುಷ್ ಆದ ಡಿ ಬಾಸ್ ಫ್ಯಾನ್ಸ್.!

ದರ್ಶನ್ ಅಭಿನಯಿಸಿರುವಂತಹ ‘ನವಗ್ರಹ’ ಚಲನಚಿತ್ರ ಮತ್ತೆ ಚಿತ್ರಮಂದಿರಗಲಲ್ಲಿ ತೆರೆ ಕಾಣಲಿದೆ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಸ್ಟ್ ಒಂದನ್ನ ಹಂಚಿಕೊಂಡಿದ್ದಾರೆ.

ಇದೀಗ ಚಿತ್ರ ಬಿಡುಗಡೆಗೂ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲಿನಲ್ಲಿರೋ ದರ್ಶನ್ ಬಿಡುಗಡೆಗೂ ಸಂಬಂಧವಿದೆ ಎಂಬ ಚರ್ಚೆಗಳು ಶುರುವಾಗಿವೆ.

‘ನಿಮ್ಮೆಲ್ಲರ ಹೃದಯದಲ್ಲಿ ಅಚ್ಚಳಿಯದೆ ಉಳಿದ ಚಿತ್ರ ನವಗ್ರಹ ಅತೀ ಶೀಘ್ರದಲ್ಲಿ ರಿಲೀಸ್ ಆಗಲಿದೆ. ಇದು ಮೊದಲಿಗಿಂತ ಸ್ಪೆಷಲ್ ಆಗಿರಲಿದೆ. ಚಾಮುಂಡೇಶ್ವರಿ ಎಲ್ಲರಿಗೂ ಒಳ್ಳೆಯದನ್ನ ಮಾಡಲಿ’ ಎಂದು ವಿಜಯಲಕ್ಷ್ಮೀ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ದರ್ಶನ್ ಬಂಧನದಿಂದ ಸ್ಥಗಿತಗೊಂಡಿದ್ದ ಡೆವಿಲ್ ಚಿತ್ರತಂಡವೂ ದಸರಾ ಹಬ್ಬದ ಶುಬಾಶಯದ ಪೋಸ್ಟ್ ಒಮದನ್ನ ಹಂಚಿಕೊಂಡಿದ್ದಾರೆ.ಸದ್ಯ ಜೈಲಿನಿಂದ ದರ್ಶನ್ ಅವರಿಗೆ ಜಾಮೀನು ಸಿಗಬಹುದೆಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಇದೇ ಸಮಯದಲ್ಲಿ ನವಗ್ರಹ ರೀ ರಿಲೀಸ್ ಆಗೋದು ಕುತೂಹಲ ಸೃಷ್ಟಿಸಿದ್ದು, ವಿಜಯಲಕ್ಷೀ ಅವರ ಈ ಒಂದು ಪೋಸ್ಟ್ ದರ್ಶನ್ ಬಿಡುಗಡೆಯ ಸಂಕೇತ ಎಂದು ಹೇಲಲಾಗುತ್ತಿದೆ.

ಕನ್ನಡ ಚಿತ್ರರಂಗದ ಖಳನಟರ ಮಕ್ಕಳೆಲ್ಲರೂ ಈ ಚಿತ್ರದಲ್ಲಿ ನಟಿಸಿದ್ದು, ಈ ಸಿನಿಮಾದ ಮತ್ತೊಂದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *