ವಿಜಯನಗರ : ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸನ್ನಿವೇಶ ಉಂಟಾಗಿರುವುದರಿಂದಾಗಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದ ಬಳಿ ಅಣಕು ಪ್ರದರ್ಶನ ಮಾಡಲಾಯಿತು.

ತುಂಗಭದ್ರಾ ಜಲಾಶಯಕ್ಕೆ ಭದ್ರತೆ ನೀಡಿರೋ ಕರ್ನಾಟಕ ಕೈಗಾರಿಕಾ ಪಡೆಯಿಂದ ಮಾಕ್ ಡ್ರಿಲ್ ನಡೆದಿದೆ. ಟಿಬಿ ಡ್ಯಾಂಗೆ ಕಳೆದ ಎರಡು ಮೂರು ದಿನಗಳಿಗಿಂತ ಹೆಚ್ಚಿನ ರೀತಿಯ ಭದ್ರತೆ ಒದಗಿಸಲಾಗಿದ್ದು, ಜಲಾಶಯದ ಬಳಿಯೇ ಮಾಕ್ ಡ್ರಿಲ್ ನಡೆಸಿ ಜನರಿಗೆ ಸೈರನ್ ಬಳಿಕ ರಕ್ಷಣೆ ಮಾಡಿಕೊಳ್ಳೋದು ಹೇಗೆ? ಅನ್ನೋದರ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.
ದೇಶಾದ್ಯಂತ ಇರುವ ಡ್ಯಾಂಗಳಿಗೆ ಈಗಾಗಲೇ ಹೆಚ್ಚುವರಿ ಭದ್ರತೆ ನೀಡಲಾಗಿದೆ. ಕೇವಲ ನಮ್ಮನ್ನು ರಕ್ಷಣೆ ಮಾಡೋದಲ್ಲದೇ ಡ್ಯಾಂ ರಕ್ಷಣೆ ಮಾಡಲು ಏನು ಮಾಡಬೇಕೆಂದು ಇದೇ ವೇಳೆ ತಜ್ಞರು ವಿವರಣೆ ನೀಡಿದರು. ಶ್ವಾನದಳ ಮತ್ತು ವಿಧ್ವಂಸಕ ಕೃತ್ಯ ನಿಗ್ರಹ ದಳದಿಂದ ತಪಾಸಣೆ ನಡೆಸಲಾಯಿತು.