ವಿಜಯನಗರ || ಶ್ರದ್ಧಾ ಭಕ್ತಿಯಿಂದ ಜರುಗಿದ  ಹೋಳಿಗೆಮ್ಮಗೆ ಉಡಿ ತುಂಬಿ ಕಳುಹಿಸುವ ಧಾರ್ಮಿಕ ಆಚರಣೆ

ವಿಜಯನಗರ || ಶ್ರದ್ಧಾ ಭಕ್ತಿಯಿಂದ ಜರುಗಿದ  ಹೋಳಿಗೆಮ್ಮಗೆ ಉಡಿ ತುಂಬಿ ಕಳುಹಿಸುವ ಧಾರ್ಮಿಕ ಆಚರಣೆ

ವಿಜಯನಗರ : ಕೂಡ್ಲಿಗಿ  ಪಟ್ಟಣದಲ್ಲಿ ಆಮ್ಮಳಿಗೆ ಉಡಿತುಂಬಿ ಕಳುಹಿಸುವ ಧಾರ್ಮಿಕ ಕಾರ್ಯಕ್ರಮ ನಾಗರೀಕರಿಂದ ಶ್ರದ್ಧಾ ಭಕ್ತಿಯಿಂದ ಜರುಗಿತು. ಪಟ್ಟಣದಲ್ಲಿನ ಹಿಂದೂ ಸಂಪ್ರದಾಯವನ್ನು ಪಾಲಿಸುವ ಪ್ರತಿಯೊಂದು ಮನೆಯವರು , ಪ್ರತಿ ವರ್ಷವೂ ಪಟ್ಟಣದ ಧಾರ್ಮಿಕ ಶ್ರದ್ಧಾವಂತರ ಆಣತಿಯಂತೆ. ಈ ಭಾರಿಯೂ  ಹೋಳಿಗೆಮ್ಮ ಉಡಿ ತುಂಬಿಸಿ ಕಳುಹಿಸಿಕೊಡುವ , ಸಂಪ್ರದಾಯಿಕ ಧಾರ್ಮಿಕ ಆಚರಣೆ ಜಾರಿಯಲ್ಲಿದೆ. ಇದನ್ನು ಹಲವು ಗ್ರಾಮೀಣ ಭಾಗಗಳಲ್ಲಿ , ಹಲವು ಕಟ್ಟು ಪಾಡುಗಳೊಂದಿಗೆ ಆಚರಣೆ ಮಾಡಲಾಗುತ್ತದೆ. ಭಾರೀ ನಿಯಮಗಳನುಸಾರ ಜರುಗಿಸಲಾಗುತ್ತದ್ದು, ಆಧುನಿಕ ಭರಾಟೆಯಲ್ಲಿ ಪಟ್ಟಣ ಪ್ರದೇಶಗಳಲ್ಲಿ,  ಇಂತಹ ಬಹುತೇಕ ಆಚರಣೆಗಳು ಕಾಣೆಯಾಗಿವೆ. ಆದರೆ ಕೂಡ್ಲಿಗಿ ಪಟ್ಟಣದಲ್ಲಿ ಧಾರ್ಮಿಕ ಆಚರಣೆಗಳು , ಈಗಲೂ ನಿಯಮಾನುಸಾರ ಚಾಚು ತಪ್ಪದೇ ಜರುಗುತ್ತಿದ್ದು ಇದು ಕೂಡ್ಲಿಗಿ ಪಟ್ಟಣದ ವಿಷೇಶವಾಗಿದೆ. ಮಹಿಳೆಯರು  ಸೇರಿದಂತೆ , ಲಿಂಗ ಭೆದವಿಲ್ಲದೇ ವಯಸ್ಸಿನ ಅಂತರವಿಲ್ಲದೇ ಸರ್ವರೂ ಶ್ರದ್ಧಾ ಭಕ್ತಿಯಿಂದ ಧಾರ್ಮಿಕ ನಿಯಮಾನುಸಾರ ಹೋಳಿಗೆಮ್ಮಳನ್ನು ಕಳುಹಿಕೊಟ್ಟರು.

ಸಂಪ್ರದಾಯಿಕ ಆಚರಣೆ- ಮನೆಯನ್ನ ಒಪ್ಪ ಓರಣಗೊಳಿಸಿ , ತಾವೂ ಶುಚಿರ್ಬೂತರಾಗಿ  ಸಿಹಿ ಖಾದ್ಯಗಳನ್ನು ನೇವೇದ್ಯ ಮಾಡಲಾಗುತ್ತದೆ. ತದನಂತರ ಕುಡಿಕೆಯ ರೂಪದಲ್ಲಿರುವ ಆಮ್ಮಳಿಗೆ , ಶಾಸ್ತೋಕ್ತವಾಗಿ ಉಡಿ ತುಂಬಿ ಪ್ರಾರ್ಥಿಸಲಾಗುತ್ತದೆ. ತದನಂತರ ಅಮ್ಮಳನ್ನು ಪಟ್ಟಣದಾಚೆಗೆ ಆಥವಾ ಊರಾಚೆಯಲ್ಲಿ , ನಿಗಧಿಗೊಳಿಸಿರುವ ಧಾರ್ಮಿಕ ಕೇಂದ್ರದ ಬಳಿಗೆ ಆಮ್ಮಳನ್ನು ಕೊಂಡ್ಯೊದು ಕಳುಹಿಸಿ ಬರಲಾಗುತ್ತದೆ. 

ಪಟ್ಟಣದ ಆಲದ ಮರದ ಹತ್ತಿರ ಶ್ರೀ ಊರಮ್ಮ ದೇವಿ ಪಾದಗಟ್ಟೆ ಬಳಿ , ಇನ್ನು ಹಲವರು ಪಟ್ಟಣದ ಹೊರ ವಲಯದಲ್ಲಿ ಆಮ್ಮಳನ್ನು ಕಳುಹಿಸಿ ಬರುತ್ತಾರೆ. ಆಮ್ಮಳನ್ನು ವಿಧಿ ವತ್ತಾಗಿ ಕಳುಹಿಸಿ ತದನಂತರ , ಆಮ್ಮಳಿಗೆ ನೈವ್ಯೇದ್ಯ ಗೈದು ಉಳಿದ ಖಾದ್ಯ ಆಹಾರವನ್ನು , ಆಮ್ಮಳ ಪ್ರಸಾದವಾಗಿ ಶ್ರದ್ಧಾ ಭಕ್ತಿಯಿಂದ  ಸ್ವೀಕರಿಸಲಾಗುತ್ತದೆ.  ಕೂಡ್ಲಿಗಿಯ ಗ್ರಾಮ ದೇವತೆ ಶ್ರೀಊರಮ್ಮದೇವಿ. ಪ್ರತಿ ವರ್ಷದ ಜೂನ್ ತಿಂಗಳಲ್ಲಿ ಒಂದು ಸಾರಿ ಊರವರೆಲ್ಲ ಸೇರಿ ಆಮ್ಮಳಿಗರ ಹೋಳಿಗೆ ನೈವೇದ್ಯವನ್ನು ಅರ್ಪಿಸುತ್ತಾರೆ. ಇದನ್ನು ಹೋಳಿಗೆಮ್ಮ ಹಬ್ಬದ ಎಂದು , ಅಮ್ಮಳನ್ನು ಕಳುಹಿಸುವ ಹಬ್ಬ ಎಂದು ಕರೆಯಲಾಗುತ್ತದೆ.

ಹಬ್ಬದಂದು ಮಡಿ ಮುಡಿಯಿಂದ ಶ್ರದ್ಧಾ ಭಕ್ತಿಯಿಂದ ತಯಾರಿಸಿದ , ಹೋಳಿಗೆ ಹಾಗೂ ಇತರೆ ಸಿಹಿ ಖಾದ್ಯಗಳ ಎಡೆಯನ್ನು. ಮಣ್ಣನ ಕುಡಿಕೆಯ ರೂಪದಲ್ಲಿ ಪ್ರತಿಷ್ಟಿತಗೊಂಡ ಆಮ್ಮಳಿಗೆ ನೈವ್ಯದ್ಯೆ ಮಾಡಿ ಪೂಜೆ ಮಾಡಲಾಗುತ್ತದೆ. ನಂತರ ಸಂಜೆ ಸಮಯದಲ್ಲಿ , ಆಮ್ಮಳನ್ನು ಶ್ರದ್ಧಾ ಭಕ್ತಿಯಿಂದ ಊರಮ್ಮನ ಪಾದಗಟ್ಟೆಗೆ ತಂದು ಅರ್ಪಿಸಲಾಗುತ್ತದೆ. ಮನೆಯಿಂದ ಎಡೆಯನ್ನು ತೆಗೆದುಕೊಂಡು ಹೋಗುವಾಗ , ಅವರು ಯಾರೊಂದಿಗೂ ಮಾತನಾಡುವಂತಿಲ್ಲ. ಯಾವುದೇ ಕಾರಣಕ್ಕೆ ತಿರುಗಿ ನೋಡೋ ಹಾಗಿಲ್ಲ , ಹೋಳಿಗೆಮ್ಮ ಕಳುಹಿಸುವಾಗ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತೆ.

ಹೋಳಿಗೆಮ್ಮ ಕೊಂಡ್ಯೊಯ್ಯುವವರು , ಮಡಿ ಮುಡಿ ಮೌನವ್ರತ ಪಾಲಿಸುವುದು  ಹಬ್ಬದ ನಿಯಮವಾಗಿದೆ. ಎಡೆಯನ್ನು ಅರ್ಪಿಸಿದ ಹೆಂಗಸರು ಅಮ್ಮಳಿಗೆ ವಂದಿಸಿ , ಮನೆಗೆ ಮರಳಿ ಬಂದ ದಾರಿಯಲ್ಲಿಯೇ ನಡೆದುಕೊಂಡು ತೆರಳುತ್ತಾರೆ. ನಂತರ ಮನೆಯಲ್ಲಿ ಎಲ್ಲರೂ ಸೇರಿ , ಹೋಳಿಗೆ ಊಟವನ್ನು  ಅಮ್ಮಳ ಪ್ರಸಾದವೆಂದೇ ಭಕ್ತಿಯಿಂದ ಸೇವಿಸುತ್ತಾರೆ. ವಿಷೇಶ ಏನೆಂದರೆ ಈ ಹಬ್ಬದ ಊಟಕ್ಕೆ , ಮನೆ ಮಂದಿ ಹೊರತು ಪಡಿದಸಿ ಬೇರೆ ಯಾರನ್ನೂ ಯಾವುದೇ ಕಾರಣಕ್ಕೆ ಕರೆಯುವಂತಿಲ್ಲ. ಊಟ ವನ್ನು ಬೇರೆಯವರಿಗೆ ಕೊಡುವಂತಿಲ್ಲ , ಕೊಟ್ಟರೆ ಮನೆಯಲ್ಲಿನ ಹುಲುಸು(ಅದೃಷ್ಟ ದೇವತೆ ಮುನಿಸಿಕೊಂಡು ಹೊರಟು ಹೋಗುತ್ತಾಳೆಂಬ ನಂಬಿಕೆ) ಇದು ಹೋಳಿಗೆ ಹಬ್ಬದ ನಿಯಮವಾಗಿದೆ.

ಹೆಂಗಸರು ತಾವು ಆಮ್ಮಳಿಗೆ ಅರ್ಪಿಸಿದ ಎಡೆಯನ್ನು, ಮೆನೆಯಲ್ಲಿಯ ಹಸಿದ ಬಾಲಕರಿಗೆ ದನ ಕರುಗಳಿಗೆ ಸಾಕು ಪ್ರಾಣಿಗಳಿಗೆ ನೀಡುತ್ತಾರೆ. ಆದರೆ ಮನೆ ಮಂದಿಯನ್ನು ಹೊರತು ಪಡಿಸಿದಂತೆ, ಬೇರೆ ಯಾರಿಗೂ ಕೊಡುವುದಿಲ್ಲ ಆದನ್ನು ಹೊಸ್ತಿಲಾಚೆ ಕೊಂಡ್ಯೊಯ್ಯುವಂತಿಲ್ಲ. ಮನೆಯೊಳಗಿನ ಜನರು ಹಾಗೂ ಸಾಕು ಪ್ರಾಣಿಗಳು  ಸಂತೃಪ್ತಗೊಂಡರೆ, ಶ್ರೀ ಗ್ರಾಮ ದೇವತೆ ಊರಮ್ಮ ದೇವಿ ಸಂತೃಪ್ತಳಾಗಿ ಆಶೀರ್ವದಿಸಿದ್ದಾಳೆ ಎಂದು ನಂಬುತ್ತಾರೆ. ಈ ಹೋಳಿಗೆಮ್ಮ ಹಬ್ಬ ಕಲ್ಯಾಣ ಕರ್ನಾಟಕ ಸೇರಿದಂತೆ , ಉತ್ತರ ಭಾರತದಲ್ಲಿ ಪ್ರತಿ ವರ್ಷ ಆಚರಿಸುವ ಧಾರ್ಮಿಕ ಹಾಗೂ ಜಾನಪದ ಸಂಪ್ರದಾಯಿಕ ತುಂಬಾ ವಿಶಿಷ್ಠವಾದ ಹಬ್ಬವಾಗಿದೆ.

Leave a Reply

Your email address will not be published. Required fields are marked *