ವಿಜಯಪುರ || ಭೀಮಾತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು : ಮಗಳ ಸಾವಿಗೆ ಪ್ರತೀಕಾರದ ನೆತ್ತರು ಹರಿಸಿದ ತಂದೆ..?

ವಿಜಯಪುರ || ಭೀಮಾತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು : ಮಗಳ ಸಾವಿಗೆ ಪ್ರತೀಕಾರದ ನೆತ್ತರು ಹರಿಸಿದ ತಂದೆ..?

ವಿಜಯಪುರ: ಗುಮ್ಮಟನಗರಿ ವಿಜಯಪುರದಲ್ಲಿ ಹಾಡಹಗಲಲ್ಲೇ ಗುಂಡಿನ ಸದ್ದು ಮತ್ತೆ ಮಾರ್ದನಿಸಿದೆ. ಪ್ರೇಮ್‌ಕಹಾನಿ ವಿಚಾರವಾಗಿ ಶುರುವಾದ ಕಲಹ ಇದೀಗ ಜೀವವನ್ನೇ ಬಲಿ ತೆಗೆದುಕೊಂಡಿದೆ. ಮಗಳ ಸಾವಿಗೆ ವರ್ಷದ ಬಳಿಕ ಅಪ್ಪ ಸೇಡು ತೀರಿಸಿಕೊಂಡಿದ್ದಾನೆ. ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಮಾರ್ಧನಿಸಿದೆ. ಹಾಡಹಗಲೇ ಗುಂಡು ಹಾರಿಸಿ ಯುವಕನ ಬರ್ಬರ ಹತ್ಯೆ ಮಾಡಲಾಗಿದೆ. ತಿಕೋಟ ತಾಲೂಕಿನ ಅರಕೇರಿ ಗ್ರಾಮದ ಮನಾವರ ದೊಡ್ಡಿ ಎಂಬಲ್ಲಿ ಭೀಕರ ಹತ್ಯೆ ನಡೆದಿದೆ.

ಗುಂಡೇಟು ತಿಂದು ಸಾವನಪ್ಪಿರುವುದು ತಿಕೋಟಾ ತಾಲೂಕಿನ ಅರಕೇರಿ ತಾಂಡಾ ನಿವಾಸಿ ಸತೀಶ್ ರಾಠೋಡ್ ಎಂಬಾತ. ಅದೇ ತಾಂಡಾದ ರಮೇಶ್ ಚವ್ಹಾಣ್ ಹಾಗೂ ಆತನ ಸಹಚರರ ವಿರುದ್ಧ ಕೊಲೆ ಆರೋಪ ಮಾಡಲಾಗಿದೆ. ಈ ಡೆಡ್ಲಿ ಮರ್ಡರ್‌ಗೆ ಕಾರಣವಾಗಿದ್ದು ರಮೇಶ್ ಚವ್ಹಾಣ್ ಮಗಳು ಹಾಗೂ ಸುರೇಶ್ ರಾಠೋಡ್ ನಡುವಿನ ಪ್ರೇಮ್‌ಕಹಾನಿ.

ರಮೇಶ್ ಚವ್ಹಾಣ್ ಮಗಳು ಹಾಗೂ ಸತೀಶ್ ರಾಠೋಡ್ ಪರಸ್ಪರ ಪ್ರೀತಿ ಮಾಡ್ತಿದ್ರು. ಸತೀಶ್ ಕುಟುಂಬಸ್ಥರು ರಮೇಶ್ ಚವ್ಹಾಣ್ ಬಳಿ ಮದುವೆ ಪ್ರಸ್ತಾಪವನ್ನೂ ಮಾಡಿದ್ದರು. ಆದ್ರೆ ಸತೀಶ್‌ಗೆ ಮಗಳನ್ನ ಕೊಡಲು ರಮೇಶ್ ನಿರಾಕರಿಸಿದ್ದ. ಇದೇ ವಿಚಾರವಾಗಿ 2 ಕುಟುಂಬಗಳ ಮಧ್ಯೆ ವೈಷಮ್ಯ ಬೆಳೆದಿತ್ತು. ಇದೆಲ್ಲದರಿಂದ ಮನನೊಂದಿದ್ದ ರಮೇಶ್ ಚವ್ಹಾಣ್ ಮಗಳು ಕಳೆದ ವರ್ಷ ಜನವರಿ 28ರಂದು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳ ಸಾವಿಗೆ ಸತೀಶನೇ ಕಾರಣ ಅಂತಾ ರಮೇಶ್ ಸಿಟ್ಟಿಗೆದ್ದಿದ್ದ. ಹೀಗಾಗಿ ಮಗಳ ಮೊದಲ ವರ್ಷದ ತಿಥಿಯಂದೇ ಸತೀಶ್ ಹತ್ಯೆಗೆ ಮುಹೂರ್ತ ಫಿಕ್ಸ್ ಆಗಿತ್ತು ಎಂದು ಹೇಳಲಾಗುತ್ತಿದೆ. ಅದ್ರಂತೆ ಇಂದು ಕಾರಿನಲ್ಲಿ ಬರ್ತಿದ್ದಾಗ ಸತೀಶ್ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆಗೈಯಲಾಗಿದೆ. 

ಸತೀಶ್ ರಾಠೋಡ್ ಹತ್ಯೆಗೈದ ಹಂತಕರು ಆತನ ಶವದ ಮೇಲೆ ಕಂಟ್ರಿಮೇಡ್ ಪಿಸ್ತೂಲ್ ಇಟ್ಟು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿಜಯಪುರ ಗ್ರಾಮೀಣ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *