“ಅವರ‍್ಯಾಕೆ ಹಾಗೆ?” ಎಂದು ಯೋಚಿಸಿಕೊಂಡಿದ್ದಾಗ

"ಅವರ್ಯಾೆಕೆ ಹಾಗೆ?" ಎಂದು ಯೋಚಿಸಿಕೊಂಡಿದ್ದಾಗ

ಸಾವಿರ ತಲೆಗಳು ಸಾಕೆನಿಸದೆ ಹೋದವು.

“ನಾನ್ಯಾಕೆ ಹೀಗೆ?” ಎಂದು ಯೋಚಿಸುವುದಕ್ಕೆ

ಶುರುಹಚ್ಚಿಕೊಂಡಾಗ

ಒಂದೇ ಒಂದು ತಲೆ ಸಾಕೆನಿಸಿತು.

ದೇವರೇನೋ ಸಹಸ್ರಶರ‍್ಷ.

ಅವನಿಗೆ ಆ ತಾಕತ್ತಿದೆ. ತಡೆದುಕೊಳ್ಳುವ

ಮತ್ತು ತಡೆದುನಿಲ್ಲಿಸುವ ತಾಕತ್ತಿದೆ.

ನಮಗೋ ಒಂದೇ ಒಂದು ತಲೆಯನ್ನು ಕೂಡ

ಸುಧಾರಿಸಲಿಕ್ಕೆ ಆಗುವುದಿಲ್ಲ.

ಆ ತಲೆಯ ತಲೆನೋವಿನಿಂದ ಮುಕ್ತರಾಗುವುದಕ್ಕೆ

ಗುಳಿಗೆ, ಮಾತ್ರೆಗಳಿಗೆ ಶರಣುಹೋಗುತ್ತೇವೆ.

ಆದ್ದರಿಂದಲೇ ದೊಡ್ಡವರು ಹೇಳುವುದು,

“ಜೋ ಹುವಾ ಅಚ್ಛಾ ಹುವಾ;

ಜೋ ಹೋ ರಹಾ ಹೈ, ಅಚ್ಛಾ ಹೋ ರಹಾ ಹೈ;

ಜೋ ಹೋಗಾ ಅಚ್ಛಾ ಹೋಗಾ” ಎಂದು.

ದೊಡ್ಡವರ ಮಾತನ್ನು ಕೇಳಿಸಿಕೊಳ್ಳೋಣ;

ಅವರ ಮಾತಿಗೆ ಕಿವಿಯಾಗುವಾ.

ಡಾ. ಶಿವಾನಂದ ಶಿವಾಚರ‍್ಯರು

ಸುಕ್ಷೇತ್ರ ಹಿರೇಮಠ, ತಪೋವನ, ತುಮಕೂರು

Leave a Reply

Your email address will not be published. Required fields are marked *