ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದಲ್ಲಿ ಮುಸ್ಲಿಮರು ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದಲೂ ಮುಸ್ಲಿಮರು ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿಕೊಂಡು ಬರುತ್ತಿರುವುದು ವಿಶೇಷ.
ಗಜಾನನ ಯುವಕ ಮಂಡಳ ಎಂಬ ಸಂಘ ರಚಿಸಿದ್ದು ಇದರಲ್ಲಿ 10 ಮಂದಿ ಮುಸ್ಲಿಮರು ಮತ್ತು 5 ಮಂದಿ ಹಿಂದೂ ಸದಸ್ಯರಿದ್ದಾರೆ. ಮುಸ್ಲಿಮರು ಗಣೇಶನ ಮೂರ್ತಿ ಪ್ರತಿಷ್ಠಾಪಿಸುತ್ತಾರೆ. ನಂತರ ಮುಸ್ಲಿಮರು ತಮ್ಮ ಸಂಪ್ರದಾಯದಂತೆ ಹಿಂದೂಗಳು ತಮ್ಮ ಸಂಪ್ರದಾಯದಂತೆ ಐದು ದಿನಗಳ ಕಾಲ ಪೂಜೆ ಸಲ್ಲಿಸುತ್ತಾರೆ. ಐದನೇ ದಿನ ನಿಮಜ್ಜನೆ ನಡೆಯುತ್ತದೆ.