ಹೈದರಾಬಾದ್: ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಬಿಆರ್ಎಸ್ ಎಂಎಲ್ಸಿ ಕೆ. ಕವಿತಾ ಅವರನ್ನು ಇಂದು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಭಾರತ ರಾಷ್ಟ್ರ ಸಮಿತಿ ಯಿಂದ ಹೊರಹಾಕಲಾಗಿದೆ.
ಉಚ್ಛಾಟನೆಯ ಹಿನ್ನೆಲೆ:
ಕವಿತಾ ಇತ್ತೀಚೆಗೆ ತಮ್ಮ ಸೋದರಸಂಬಂಧಿಗಳು ಮತ್ತು ಬಿಆರ್ಎಸ್ ಮುಖಂಡರಾದ ಟಿ. ಹರೀಶ್ ರಾವ್ ಹಾಗೂ ಜೆ. ಸಂತೋಷ್ ಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ಅವರು “ಕೆಸಿಆರ್ ಅವರ ಪ್ರತಿಷ್ಠೆಯನ್ನು ಹಾಳು ಮಾಡಲು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರೊಂದಿಗೆ ಮೌನ ಒಪ್ಪಂದ ಮಾಡಿಕೊಂಡಿದ್ದಾರೆ” ಎಂದು ಹೇಳಿದ್ದರು.
ಈ ಹೇಳಿಕೆಗಳ ಬೆನ್ನಲ್ಲೇ ಬಿಆರ್ಎಸ್ ಕವಿತಾ ಅವರನ್ನು ಉಚ್ಚಾಟನೆಗೊಳಿಸಿತು.ಸೋರಿಕೆಯಾದ ಪತ್ರದಿಂದ ಬಿರುಕು ಸ್ಪಷ್ಟಈ ವರ್ಷದ ಮೇ ತಿಂಗಳಲ್ಲಿ ಅಮೆರಿಕ ಪ್ರವಾಸದಲ್ಲಿದ್ದಾಗ ಕವಿತಾ ತಮ್ಮ ತಂದೆ ಕೆಸಿಆರ್ಗೆ ಬರೆದ ಪತ್ರ ಸೋರಿಕೆಯಾಗಿತ್ತು. ಆ ಪತ್ರದಲ್ಲಿ ಪಕ್ಷದ ಒಳಗಿನ “ಆಂತರಿಕ ಸಮಸ್ಯೆಗಳ”ಬಗ್ಗೆ ಉಲ್ಲೇಖವಿತ್ತು. ಹಿಂತಿರುಗಿದ ನಂತರವೂ ಅವರು “ಕೆಸಿಆರ್ ದೇವರಂತೆ, ಆದರೆ ಅವರನ್ನು ಸುತ್ತುವರೆದಿರುವುದು ದೆವ್ವಗಳು” ಎಂದು ಹೇಳಿ ಟೀಕಿಸಿದ್ದರು
ಬಿಆರ್ ಎಸ್ ಪ್ರತಿಕ್ರಿಯೆ: “ಪಕ್ಷವನ್ನು ಸಾರ್ವಜನಿಕವಾಗಿ ಟೀಕಿಸುವ ಹಕ್ಕು ಯಾರಿಗೂ ಇಲ್ಲ. ಕವಿತಾ ನಮ್ಮ ನಾಯಕರ ಮೇಲೆ ಆಧಾರರಹಿತ ಆರೋಪ ಮಾಡಿದ್ದಾರೆ” ಎಂದು ಬಿಆರ್ಎಸ್ ವಕ್ತಾರ ಕ್ರಿಶಾಂಕ್ ಮನ್ನೆ ತಿಳಿಸಿದ್ದಾರೆ. ಬಿಆರ್ಎಸ್ ತನ್ನ ಅಧಿಕೃತ ಪೋಸ್ಟ್ನಲ್ಲಿ “ಕವಿತಾ ಅವರ ಇತ್ತೀಚಿನ ನಡವಳಿಕೆ ಪಕ್ಷಕ್ಕೆ ಹಾನಿ ಮಾಡುತ್ತಿದೆ. ಆದ್ದರಿಂದ ಪಕ್ಷದಿಂದ ತಕ್ಷಣದಿಂದಲೇ ಅಮಾನತು ಮಾಡಲಾಗಿದೆ” ಎಂದು ಘೋಷಿಸಿದೆ.
For More Updates Join our WhatsApp Group :




