ಹುಬ್ಬಳ್ಳಿಯಲ್ಲಿ ಪಿತೃತ್ವವಿಚಾರ ಚಕಿತಗೊಳಿಸಿದ ಹ*ತ್ಯೆ: ಮಗ ತಾಯಿಯನ್ನು ಕೊ*ಲೆ ಮಾಡಿ.

ಹುಬ್ಬಳ್ಳಿಯಲ್ಲಿ ಪಿತೃತ್ವವಿಚಾರ ಚಕಿತಗೊಳಿಸಿದ ಹ*ತ್ಯೆ: ಮಗ ತಾಯಿಯನ್ನು ಕೊ*ಲೆ ಮಾಡಿ.

ಹುಬ್ಬಳ್ಳಿಆ ತಾಯಿ ಇದ್ದೊಬ್ಬ ಮಗನನ್ನು ಚೆನ್ನಾಗಿ ಬೆಳಸಿದ್ದರು. ಅಕ್ಕರೆಯಿಂದ ಆರೈಕೆ ಮಾಡಿ ಸಕ್ಕರೆಯಂತ ಜೀವನ ಕಟ್ಟಿಕೊಳ್ಳಲು ಹಗಲಿರಳು ಶ್ರಮಿಸಿದ್ದರು. ಆದರೆ ಮಹಾತಾಯಿಯನ್ನೇ ಮಗ ಕೊಲೆ ಮಾಡಿರುವಂತಹ ದಾರುಣ ಘಟನೆಯೊಂದು ನಗರದ ಬ್ರಹ್ಮಗಿರಿ ಕಾಲೋನಿಯಲ್ಲಿ ಬುಧವಾರ ನಡೆದಿದೆ. ಹುಬ್ಬಳ್ಳಿ-ಧಾರವಾಡ ಪಾಲಿಕೆಯ ನಿವೃತ್ತ ನೌಕರ ಅಶೋಕ್​​ ಕೊಲೆಗೈದ ಮಗ. ನಿಂಗವ್ವ ಮುಳಗುಂದ(78) ಕೊಲೆಯಾದ ತಾಯಿ. ಕೊಲೆ ಬಳಿಕ ಅಶೋಕ್ ತಾವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಆದರೆ ಅನುಮಾನ ಬಂದು ಪೊಲೀಸರು ವಿಚಾರಿಸಿದಾಗ ಅಸಲಿ ಸತ್ಯ ಗೊತ್ತಾಗಿದ್ದು, ಸದ್ಯ ಅಶೋಕ್​ ಅರೆಸ್ಟ್​ ಆಗಿದ್ದಾರೆ.

ಹುಬ್ಬಳ್ಳಿ ನಗರದ ಬ್ರಹ್ಮಗಿರಿ ಕಾಲೋನಿಯಲ್ಲಿ ನಿಂಗವ್ವ ಮುಳಗುಂದ ವಾಸವಾಗಿದ್ದರು. ನವೆಂಬರ್ 4 ರಂದು ತಮ್ಮ ಮನೆಯಲ್ಲಿ ಮಲಗಿದ್ದರು. ನಿಂಗವ್ವ ಅವರ ಪತಿ ಮಲ್ಲಪ್ಪ ಮನೆಯ ಹೊರಗಡೆ ಮಲಗಿದ್ದರು. ಆದರೆ ರಾತ್ರಿ ಸಮಯದಲ್ಲಿ ಹಿಂಬಾಗಿಲ ಮೂಲಕ ಮನೆಯೊಳಗೆ ಆಗಮಿಸಿ ನಿಂಗವ್ವರನ್ನು ಕೊಲೆ ಮಾಡಲಾಗಿತ್ತು. ಇತ್ತ ಬೆಳಗ್ಗೆ ಮನೆಗೆ ಬಂದಿದ್ದ ಅಶೋಕ್, ತನ್ನ ತಾಯಿಯನ್ನು ಯಾರೋ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ವಿದ್ಯಾನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ನಂತರ ಶ್ವಾನದಳ, ಬೆರಳಚ್ಚು ತಜ್ಞರು, ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್​ ಕೂಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೊದಲಿಗೆ ಯಾರೋ ದುಷ್ಕರ್ಮಿಗಳು ಹಿಂಬಾಗಿಲ ಮೂಲಕ ಬಂದು ವೃದ್ದೆಯ ಕೊಲೆ ಮಾಡಿ ಹೋಗಿದ್ದಾರೆ ಎಂದು ಶಂಕಿಸಲಾಗಿತ್ತು. ಆದರೆ ವಿಚಾರಣೆ ವೇಳೆ ಕೊಲೆ ಮಾಡಿದ ಆರೋಪಿ ಬಗ್ಗೆ ತಿಳಿದು‌ ಸ್ವತಃ ಪೊಲೀಸರೇ ಶಾಕ್​ ಆಗಿದ್ದಾರೆ. ಏಕೆಂದರೆ ನಿಂಗವ್ವರನ್ನು ಕೊಲೆ ಮಾಡಿದ್ದು, ಬೇರಾರೂ ಅಲ್ಲಾ, ಹೆತ್ತು ಹೊತ್ತು ಸಾಕಿ ಸಲುಹಿದ್ದ ಪುತ್ರ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *