ದೆಹಲಿಯ ಆತ್ಮಹತ್ಯಾ ಕಾರು ಬಾಂಬ್ ದಾಳಿ: ಭಾರತೀಯ ಭದ್ರತಾ ವ್ಯವಸ್ಥೆಗೆ ಹೊಸ ಸವಾಲಿನ ಎಚ್ಚರಿಕೆ!

ದೆಹಲಿಯ ಆತ್ಮಹತ್ಯಾ ಕಾರು ಬಾಂಬ್ ದಾಳಿ: ಭಾರತೀಯ ಭದ್ರತಾ ವ್ಯವಸ್ಥೆಗೆ ಹೊಸ ಸವಾಲಿನ ಎಚ್ಚರಿಕೆ!

ನವದೆಹಲಿ: ದೆಹಲಿಯಲ್ಲಿ ಮೊದಲ ಆತ್ಮಹತ್ಯಾ ಕಾರು ಸ್ಫೋಟ ಸಂಭವಿಸಿದೆ. ಸಾಂಪ್ರದಾಯಿಕ ಬೆದರಿಕೆಗಳಿಗಿಂತ ಭಿನ್ನವಾಗಿ ಈ ರೀತಿಯ ವಾಹನಗಳ ಆತ್ಮಹತ್ಯಾ ಬಾಂಬ್ ಸ್ಫೋಟ ಗಳನ್ನು ಪತ್ತೆಹಚ್ಚುವುದು ಮತ್ತು ತಡೆಯುವುದು ಅತ್ಯಂತ ಕಷ್ಟ. ಅದರ ವಿನಾಶಕಾರಿ ಸಾಮರ್ಥ್ಯ ಕೂಡ ವ್ಯಕ್ತಿಯಿಂದ ಉಂಟಾಗುವ ಸ್ಫೋಟಕಗಳಿಗಿಂತಲೂ ವಿನಾಶವಾಗಿರುತ್ತದೆ. ಕಳೆದ ವಾರ ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟ ಭಾರತದಲ್ಲಿ ಹೊಸ ಬಗೆಯ ಭದ್ರತಾ ಆತಂಕವನ್ನು ಹೆಚ್ಚಿಸಿದೆ.

SVBIEDಗಳು ವ್ಯಕ್ತಿಗಳಿಂದ ಹರಡುವ ಸ್ಫೋಟಕ ದಾಳಿಗಳಿಗಿಂತ ಹೆಚ್ಚು ಮಾರಕವಾಗಿವೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು, VBIED (ವಾಹನಗಳಿಂದ ಹರಡುವ ಸುಧಾರಿತ ಸ್ಫೋಟಕ ಸಾಧನ)ಯ ಅಪಾಯವು ಸ್ಫೋಟವಾಗುವ ವಸ್ತುವಿನಲ್ಲಿ ಮಾತ್ರವಲ್ಲದೆ ವಾಹನದಲ್ಲಿಯೂ ಇರುತ್ತದೆ. ಅದು ಸ್ಫೋಟಿಸಿದಾಗ ಕಾರಿನ ಭಾಗಗಳು, ಬಾಗಿಲುಗಳು, ಚಾಸಿಸ್, ಎಂಜಿನ್ ಬ್ಲಾಕ್‌ಗಳು ಮತ್ತು ಗಾಜುಗಳು ಹೆಚ್ಚಿನ ವೇಗದ ಸ್ಪೋಟಕಗಳಾಗಿ ರೂಪಾಂತರಗೊಳ್ಳುತ್ತವೆ. ಇದು ಈ ಸ್ಫೋಟವನ್ನು ಇನ್ನಷ್ಟು ವಿನಾಶಕಾರಿಯಾಗಿಸುತ್ತದೆ. ಇದರಿಂದಾಗಿಯೇ ಸಾವು-ನೋವು ಹೆಚ್ಚಾಗುತ್ತದೆ. ಕಾರಿನೊಳಗಿಂದ ಸ್ಫೋಟಕ ಸ್ಫೋಟಿಸಿದಾಗ ಕಾರು ಕೂಡ ಒಂದು ಆಯುಧವಾಗಿ, ಅದರ ಭಾಗಗಳು ಸ್ಫೋಟದ ವೇಗ, ಪರಿಣಾಮವನ್ನು ಮೂರು ಪಟ್ಟು ಹೆಚ್ಚಾಗಿಸುತ್ತದೆ.

2019ರ ಪುಲ್ವಾಮಾ ದಾಳಿಯಲ್ಲಿ ಈ ತಂತ್ರವನ್ನು ಕಾಣಬಹುದು. ಅಲ್ಲಿ ಜೆಇಎಂ ಆತ್ಮಹತ್ಯಾ ಬಾಂಬರ್ ಸ್ಫೋಟಕಗಳಿಂದ ತುಂಬಿದ ವಾಹನದಿಂದ ಸಿಆರ್‌ಪಿಎಫ್ ಬೆಂಗಾವಲು ಪಡೆಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಭಾರತೀಯ ಸೇನೆಯ 40 ಸಿಬ್ಬಂದಿ ಸಾವನ್ನಪ್ಪಿದ್ದರು. 2022ರಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಇದೇ ರೀತಿಯ ಮತ್ತೊಂದು ಘಟನೆ ಸಂಭವಿಸಿತು. ಸ್ಫೋಟಕಗಳು ಮತ್ತು ಎಲ್‌ಪಿಜಿ ಸಿಲಿಂಡರ್‌ಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಸ್ಫೋಟಗೊಂಡು ಹತ್ತಿರದಲ್ಲಿದ್ದ ಕಾರು ಚಾಲಕ ಸೇರಿದಂತೆ ಅನೇಕರು ಸಾವನ್ನಪ್ಪಿದ್ದರು. ಆದರೂ, ಭಾರತದಲ್ಲಿ ಇಂತಹ ದಾಳಿಗಳು ಅಪರೂಪವೆಂದೇ ಹೇಳಬಹುದು. ಆದರೆ ಈ ರೀತಿಯ ಸ್ಫೋಟ ಸಂಭವಿಸಿದಾಗ, ಅವು ಹೆಚ್ಚು ವಿನಾಶಕಾರಿ ಪರಿಣಾಮಗಳನ್ನು ಬೀರುತ್ತವೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *