ನಿವೃತ್ತ ನ್ಯಾಯಮೂರ್ತಿಗಳಿಂದ ಸಹಿ ಅಭಿಯಾನಕ್ಕೆ ಖಂಡನೆ.
ನವದೆಹಲಿ : ರೋಹಿಂಗ್ಯಾ ವಲಸಿಗರ ಕುರಿತ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ರೋಹಿಂಗ್ಯಾಗಳಿಗೆ ನಮ್ಮ ದೇಶ ರೆಡ್ಕಾರ್ಪೆಟ್ ಹಾಸಬೇಕೇ? ಎಂದು ಪ್ರಶ್ನಿಸಿದ್ದರು. ಇದಕ್ಕೆ ತೀವ್ರ ಆಕ್ಷೇಪಣೆಯೂ ವ್ಯಕ್ತವಾಗಿತ್ತು. ಅವರ ಈ ಹೇಳಿಕೆಗಳ ಹಿನ್ನೆಲೆಯಲ್ಲಿ ಅವರನ್ನು ಗುರಿಯಾಗಿಸಿಕೊಂಡು ನಡೆಸಲಾದ ಪ್ರೇರಿತ ಅಭಿಯಾನಕ್ಕೆ ಹಲವು ನಿವೃತ್ತ ನ್ಯಾಯಾಧೀಶರು ಬಲವಾದ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ.
ನ್ಯಾಯಾಂಗ ಪ್ರಕ್ರಿಯೆಗಳು ನ್ಯಾಯಯುತ, ತಾರ್ಕಿಕ ಟೀಕೆಗೆ ಒಳಪಟ್ಟಿದೆ. ತಾತ್ವಿಕ ಭಿನ್ನಾಭಿಪ್ರಾಯ ಬೇರೆ ಸಂಗತಿ. ಆದರೆ, ದಿನನಿತ್ಯದ ನ್ಯಾಯಾಲಯದ ವಿಚಾರಣೆಯನ್ನು ಪೂರ್ವಾಗ್ರಹದ ಕೃತ್ಯವೆಂದು ತಪ್ಪಾಗಿ ನಿರೂಪಿಸುವ ಮೂಲಕ ನ್ಯಾಯಾಂಗವನ್ನು ಅಮಾನ್ಯಗೊಳಿಸುವ ಪ್ರಯತ್ನವಾಗಿದೆ ಎಂದು ನಿವೃತ್ತ ನ್ಯಾಯಾಧೀಶರು ಆರೋಪಿಸಿದ್ದಾರೆ.
ಅತ್ಯಂತ ಮೂಲಭೂತ ಕಾನೂನು ಪ್ರಶ್ನೆಯನ್ನು ಕೇಳಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಭಾರತದ ನೆಲದಲ್ಲಿರುವ ಯಾವುದೇ ಮನುಷ್ಯ, ನಾಗರಿಕ ಅಥವಾ ವಿದೇಶಿಯರನ್ನು ಚಿತ್ರಹಿಂಸೆ, ಕಣ್ಮರೆ ಅಥವಾ ಅಮಾನವೀಯ ವರ್ತನೆಗೆ ಒಳಪಡಿಸುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಗೌರವಿಸಬೇಕು ಎಂಬ ನ್ಯಾಯಪೀಠದ ಸ್ಪಷ್ಟ ದೃಢೀಕರಣವನ್ನು ಈ ಅಭಿಯಾನವು ಪುನರುಚ್ಛರಿಸುತ್ತದೆ.
ಈ ಸಂದರ್ಭದಲ್ಲಿ, ಕೆಲವು ಮೂಲಭೂತ ಸಂಗತಿಗಳು ಮತ್ತು ಕಾನೂನು ನಿಲುವುಗಳನ್ನು ಸ್ಪಷ್ಟವಾಗಿ ಪುನರಾವರ್ತಿಸುವುದು ಅಗತ್ಯವೆಂದು ನಾವು ನಂಬುತ್ತೇವೆ ಎಂದು ನಿವೃತ್ತ ನ್ಯಾಯಮೂರ್ತಿಗಳು ಹೇಳಿದ್ದಾರೆ. ಅವುಗಳೆಂದರೆ,
1. ರೋಹಿಂಗ್ಯಾಗಳು ಭಾರತೀಯ ಕಾನೂನಿನಡಿಯಲ್ಲಿ ನಿರಾಶ್ರಿತರಾಗಿ ಭಾರತಕ್ಕೆ ಬಂದಿಲ್ಲ. ಅವರಿಗೆ ಯಾವುದೇ ಶಾಸನಬದ್ಧ ನಿರಾಶ್ರಿತರ-ರಕ್ಷಣಾ ಚೌಕಟ್ಟಿನ ಮೂಲಕ ಪ್ರವೇಶ ನೀಡಲಾಗಿಲ್ಲ. ಬಹುತೇಕ ಸಂದರ್ಭಗಳಲ್ಲಿ ಅವರ ಪ್ರವೇಶವು ಕಾನೂನುಬಾಹಿರವಾಗಿದೆ.
For More Updates Join our WhatsApp Group :




