ಹಣ್ಣುಗಳಿಂದ ಕಂಗೊಳಿಸಿದ ಶ್ರೀಗಳ ಗದ್ದುಗೆ.
ತುಮಕೂರು : ತುಮಕೂರಿನ ಕ್ಯಾತ್ಸಂದ್ರ ಸಮೀಪದ ಸಿದ್ದಗಂಗಾ ಮಠದಲ್ಲಿ, ಶಿವೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 7ನೇ ವರ್ಷದ ಪುಣ್ಯಸ್ಮರಣೆ ಭಕ್ತಿಭಾವದಿಂದ ನಡೆಯುತ್ತಿದೆ.
ಶಿವಕುಮಾರ ಸ್ವಾಮೀಜಿ ಪುತ್ತಳಿ ಮುಂದೆ ಮೌನ ಪ್ರಾರ್ಥನೆ: ಪುಣ್ಯಸ್ಮರಣೆ ಹಿನ್ನೆಲೆ, ಧ್ಯಾನಮಂದಿರದಲ್ಲಿರುವಶ್ರೀಶಿವಕುಮಾರಸ್ವಾಮೀಜಿಪುತ್ತಳಿಮುಂದೆ ಮಠಾಧ್ಯಕ್ಷ ಸಿದ್ದಲಿಂಗಶ್ರೀಗಳುಧ್ಯಾನದಲ್ಲಿತೊಡಗಿದರು. ವಿಶೇಷ ಪೂಜಾ ಕಾರ್ಯಕ್ರಮದಲ್ಲೂ ಅವರು ಭಾಗವಹಿಸಿದರು.
ಸಿದ್ದಲಿಂಗ ಶ್ರೀಗಳೊಂದಿಗೆ ಹಲವು ಗುರುಹರ ಚರಣರು ಹಾಗೂ ಭಕ್ತರು ಪುಣ್ಯಸ್ಮರಣೋತ್ಸವದಲ್ಲಿ ಭಾಗಿಯಾಗಿ ಶ್ರೀಗಳಿಗೆ ನಮನ ಸಲ್ಲಿಸಿದರು.
ಗದ್ದುಗೆಗೆ ವಿಶೇಷ ಅಲಂಕಾರ: ಹಣ್ಣುಗಳಿಂದ ಕಂಗೊಳಿಸಿದ ಶ್ರೀಗಳ ಗದ್ದುಗೆ ಶಿವೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆವಿಶೇಷಅಲಂಕಾರ ಮಾಡಲಾಗಿದೆ.
- ಹತ್ತಕ್ಕೂ ಹೆಚ್ಚು ಬಗೆಯ ಹಣ್ಣುಗಳು
- ಮನಮೋಹಕ ವಿನ್ಯಾಸ
- ಭಕ್ತರ ಕಣ್ಮನ ಸೆಳೆದ ಅಲಂಕಾರ
ಈ ವಿಶಿಷ್ಟ ಹಣ್ಣು ಅಲಂಕಾರದಿಂದ ಶ್ರೀಗಳ ಗದ್ದುಗೆ ಕಂಗೊಳಿಸುತ್ತಿದೆ.ಪುಣ್ಯಸ್ಮರಣೆ ಹಿನ್ನೆಲೆ ವಿಶೇಷ ವಾತಾವರಣ ಪುಣ್ಯಸ್ಮರಣೆ ಅಂಗವಾಗಿ ಸಿದ್ದಗಂಗಾ ಮಠದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಠಕ್ಕೆ ಆಗಮಿಸುತ್ತಿದ್ದಾರೆ.
For More Updates Join our WhatsApp Group :




