ತಂದೆ–ಮಗನ ಬಾಂಧವ್ಯದ ಸಣ್ಣ ಆದರೆ ಸ್ಪರ್ಶಿಸುವ ಕಥೆ.
ಪೃಥ್ವಿ ಅಂಬಾರ್, ಸಾಯಿಕುಮಾರ್ ಸುಧಾರಾಣಿ, ಶ್ವೇತಾ ವಿನೋಧಿನಿ ಮುಂತಾದವರು ನಟಿಸಿರುವ ‘ಚೌಕಿದಾರ್’ ಸಿನಿಮಾ ರಿಲೀಸ್ (ಜನವರಿ 30) ಆಗಿದೆ. ಈ ಸಿನಿಮಾದಲ್ಲಿ ತಂದೆ-ಮಗನ ಬಾಂಧವ್ಯದ ಕಥೆ ಇದೆ. ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಡಾ. ಕಲ್ಲಹಳ್ಳಿ ಚಂದ್ರಶೇಖರ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಇಷ್ಟಪಡುವ ರೀತಿಯಲ್ಲಿ ‘ಚೌಕಿದಾರ್’ ಸಿನಿಮಾ ಮೂಡಿಬಂದಿದೆ. ಸಿನಿಮಾದ ವಿಮರ್ಶೆ ಇಲ್ಲಿದೆ..
ಸಾಯಿ ಕುಮಾರ್ ಅವರು ಒಂದೇ ರೀತಿಯ ಪಾತ್ರಕ್ಕೆ ಗಂಟುಬಿದ್ದವರಲ್ಲ. ಚಿತ್ರರಂಗದಲ್ಲಿ ಅವರು 50 ವರ್ಷಗಳ ಅನುಭವ ಹೊಂದಿದ್ದಾರೆ. ‘ಚೌಕಿದಾರ್’ ಸಿನಿಮಾದಲ್ಲಿ ಅವರದ್ದೇ ಪ್ರಮುಖ ಪಾತ್ರ. ಹೀರೋ ತಂದೆಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅಪ್ಪ ಎಂದರೆ ಇಡೀ ಕುಟುಂಬವನ್ನು ಕಾಯುವ ಚೌಕಿದಾರ ಎಂಬುದು ಗೊತ್ತೇ ಇದೆ. ಆ ಎಳೆಯನ್ನೇ ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗಿದೆ. ಮಗನ ಪಾತ್ರದಲ್ಲಿ ಪೃಥ್ವಿ ಅಂಬಾರ್ ನಟಿಸಿದ್ದಾರೆ.
ಸಾಯಿ ಕುಮಾರ್ ಅವರಿಗೆ ಹೀರೋ ತಂದೆಯ ಪಾತ್ರ ಹೊಸದಲ್ಲ. ಆದರೆ ‘ಚೌಕಿದಾರ್’ ಸಿನಿಮಾದಲ್ಲಿ ಇರುವ ಅಪ್ಪನ ಪಾತ್ರ ಸ್ವಲ್ಪ ಡಿಫರೆಂಟ್. ಮಗನ ಮೇಲೆ ಈತನಿಗೆ ವಿಪರೀತ ಪ್ರೀತಿ. ಬಾಲ್ಯದಲ್ಲಿ ನಡೆಯಲು ಕಲಿಯುವಾಗ ಮಗ ಬಿದ್ದರೂ ಕೂಡ ಈತನಿಗೆ ವಿಪರೀತ ಸಂಕಟ ಆಗುತ್ತದೆ. ಮಗ ದೊಡ್ಡವನಾಗಿ ಮದುವೆಯ ವಯಸ್ಸಿಗೆ ಬಂದರೂ ತಂದೆಯ ಪ್ರೀತಿ ಕಡಿಮೆ ಆಗಲ್ಲ. ಅಪ್ಪನ ಅತಿಯಾಗಿ ಪ್ರೀತಿಯಿಂದ ಕೆಲವು ಅನಾಹುತಗಳು ನಡೆದುಹೋಗುತ್ತವೆ. ಆ ಸಂಗತಿಗಳು ಏನು? ಅದರಿಂದ ಹೀರೋ ಹೇಗೆ ಹೊರಬರುತ್ತಾನೆ ಎಂಬುದೇ ಈ ಸಿನಿಮಾದ ಕಥೆಯ ತಿರುಳು.
ಪೃಥ್ವಿ ಅಂಬಾರ್ ಅವರು ‘ಚೌಕಿದಾರ್’ ಸಿನಿಮಾದಲ್ಲಿ ಕಿಂಚಿತ್ತೂ ಜವಾಬ್ದಾರಿ ಇಲ್ಲದ ಮಗನಾಗಿ ಕಾಣಿಸಿಕೊಂಡಿದ್ದಾರೆ. ಅತಿಯಾದ ಪ್ರೀತಿಯಿಂದ ಬೆಳೆದ ಮಕ್ಕಳು ಹೇಗಿರುತ್ತಾರೆ ಎಂಬುದನ್ನು ಅವರು ಈ ಪಾತ್ರದ ಮೂಲಕ ಕಣ್ಣಿಗೆ ಕಟ್ಟುವಂತೆ ಪ್ರೇಕ್ಷಕರಿಗೆ ತೋರಿಸಿದ್ದಾರೆ. ಕೆಲವು ದೃಶ್ಯಗಳಲ್ಲಿ ಈ ಪಾತ್ರದ ನೆಗೆಟಿವ್ ಶೇಡ್ ಹೆಚ್ಚಾಗಿ ಕಾಣಿಸುತ್ತದೆ.
For More Updates Join our WhatsApp Group :



