ಜನಸಾಮಾನ್ಯರ ಕನಸುಗಳು ಈಡೇರುತ್ತವೆಯೇ, ಭಗ್ನವಾಗುತ್ತವೆಯೇ?
ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2026-27ರ ಹಣಕಾಸು ವರ್ಷದ ಬಜೆಟ್ ಅನ್ನು ಮಂಡಿಸಲಿದ್ದಾರೆ. ಈ ಬಾರಿ ಬಜೆಟ್ ಮೇಲೆ ಎಲ್ಲರ ಕುತೂಹಲ ನಿಂತಿರುವುದು ಆದಾಯ ತೆರಿಗೆ ಮೇಲಾಗಲಿ, ಪೆಟ್ರೋಲ್ ಡೀಸೆಲ್ ಮೇಲಾಗಲಿ ಅಲ್ಲ ಬದಲಾಗಿ ಚಿನ್ನ, ಬೆಳ್ಳಿ ಮೇಲೆ. ಯಾಕೆಂದರೆ ಸತತ ಒಂದು ವರ್ಷದಿಂದ ಚಿನ್ನ ಹಾಗೂ ಬೆಳ್ಳಿ ದರ ಗಗನಕ್ಕೇರಿದೆ.
ಸುಮಾರು ಒಂದು ದಶಕದಲ್ಲಿ ಭಾನುವಾರದಂದು ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸುತ್ತಿರುವುದು ಇದೇ ಮೊದಲು. ಸೀತಾರಾಮನ್ ಸತತ ಒಂಬತ್ತು ಬಾರಿ ಬಜೆಟ್ ಮಂಡಿಸುವ ದಾಖಲೆಯನ್ನು ನಿರ್ಮಿಸಲಿದ್ದಾರೆ. ಈ ಬಾರಿ ರಕ್ಷಣೆ, ಹಸಿರು ಇಂಧನ ಮತ್ತು ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಉದ್ಯಮದ ಜೊತೆಗೆ, ಮಹಿಳೆಯರು, ರೈತರು, ಯುವಕರು ಮತ್ತು ತೆರಿಗೆದಾರರು ಸಹ ಈ ಬಜೆಟ್ನಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ.
2026-27ನೇ ಸಾಲಿನ ಸಾಮಾನ್ಯ ಬಜೆಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರಸ್ತುತ ಅಧಿಕಾರಾವಧಿಯಲ್ಲಿ ಪ್ರಮುಖ ಬಜೆಟ್ ಎಂದು ಪರಿಗಣಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2026 ರಂದು ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಈ ಬಜೆಟ್ ಅನ್ನು ಮಂಡಿಸಲಿದ್ದಾರೆ. ಕಳೆದ ವರ್ಷದ ಬಜೆಟ್ ಅನ್ನು ಜನಪ್ರಿಯ ಬಜೆಟ್ ಎಂದು ಪರಿಗಣಿಸಲಾಗಿದ್ದು, ಇದರಲ್ಲಿ ಮಧ್ಯಮ ವರ್ಗಕ್ಕೆ ದೊಡ್ಡ ಪರಿಹಾರ ಸಿಕ್ಕಿತ್ತು.
ಆ ಬಜೆಟ್ನಲ್ಲಿ, ಆದಾಯ ತೆರಿಗೆ ವಿನಾಯಿತಿ, ಸಂಬಳ ಪಡೆಯುವ ವರ್ಗಕ್ಕೆ ಪ್ರಮಾಣಿತ ಕಡಿತ, ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸುವುದು, ಅಗ್ಗದ ಔಷಧಿಗಳು ಮತ್ತು ವಿಮಾ ವಲಯದಲ್ಲಿನ ಸುಧಾರಣೆಗಳಂತಹ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ವರ್ಷ ಸರ್ಕಾರದ ಗಮನ ಆರ್ಥಿಕತೆಯ ಮೇಲೆ.
ಭಾರತೀಯ ಷೇರು ಮಾರುಕಟ್ಟೆ ಇಂದು ಎಂದಿನಂತೆ ವಹಿವಾಟು ನಡೆಸಲಿದೆ ಎಂಬುದು ಗಮನಿಸಬೇಕಾದ ಸಂಗತಿ. ಬಜೆಟ್ ಕಾರಣ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಮತ್ತು ಬಾಂಬೆ ಷೇರು ವಿನಿಮಯ ಕೇಂದ್ರ (BSE) ಭಾನುವಾರ, ಫೆಬ್ರವರಿ 1, 2026 ರಂದು ತೆರೆದಿರುತ್ತವೆ. ವಿವಿಧ ಉದ್ಯಮ ಪಾಲುದಾರರು ಸರ್ಕಾರದೊಂದಿಗೆ ತಮ್ಮ ನಿರೀಕ್ಷೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಜನವರಿ 27ರಂದು ನಾರ್ತ್ ಬ್ಲಾಕ್ನಲ್ಲಿರುವ ಬಜೆಟ್ ಪ್ರೆಸ್ನಲ್ಲಿ ಹಲ್ವಾ ಸಮಾರಂಭ ನಡೆಸಲಾಯಿತು. ಈ ಸಮಾರಂಭವು 2026-2ರ ಕೇಂದ್ರ ಬಜೆಟ್ನ ತಯಾರಿ ಪ್ರಕ್ರಿಯೆಯ ಅಂತಿಮ ಹಂತವೆಂದು ಗುರುತಿಸಲಾಗುತ್ತದೆ. ಕೇಂದ್ರ ಹಣಕಾಸು ಸಚಿವರೊಂದಿಗೆ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಬಜೆಟ್ ತಯಾರಿಕೆಯಲ್ಲಿ ತೊಡಗಿರುವ ಇತರ ಹಿರಿಯ ಅಧಿಕಾರಿಗಳು ಇದ್ದರು.
For More Updates Join our WhatsApp Group :



