BJP ಆರೋಪಕ್ಕೆ ಗೃಹ ಸಚಿವ ಪರಮೇಶ್ವರ್ ತಿರುಗೇಟು.
ಬೆಂಗಳೂರು: ವಿಧಾನ ಸಭೆ ಕಲಾಪದಲ್ಲಿ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ನಡುವೆ ಭಾರೀ ಗದ್ದಲಗಳು ನಡೆಯುತ್ತಿದೆ, ವಿಶೇಷ ಅಧಿವೇಶನದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆಗಳು ನಡೆದಿದೆ. ಈ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮತ್ತು ಹಿರಿಯ ಶಾಸಕ ಆರಗ ಜ್ಞಾನೇಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿ ಆರೋಪವನ್ನು ತಿರಸ್ಕರಿಸಿದ ಅವರು, ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಅಪರಾಧ ಅಂಕಿಅಂಶಗಳು, ಮಾದಕವಸ್ತು ವಶಪಡಿಸಿಕೊಳ್ಳುವ ದತ್ತಾಂಶ ಮತ್ತು ಅಕ್ರಮ ವಲಸಿಗರ ಗಡೀಪಾರು ವಿವರಗಳನ್ನು ಸದನದ ಮುಂದೆ ಇಟ್ಟಿದ್ದಾರೆ.
ಇಬ್ಬರೂ ಮಾಜಿ ಗೃಹ ಸಚಿವರು ತಮ್ಮ ಅಧಿಕಾರಾವಧಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹೇಗಿತ್ತು ಎಂಬುದನ್ನು ಮರೆತಂತೆ ಕಾಣುತ್ತದೆ. ಅಧಿಕೃತ ಅಂಕಿಅಂಶಗಳನ್ನು ಉಲ್ಲೇಖಿಸಿ ಪರಮೇಶ್ವರ, ಅಶೋಕ ಗೃಹ ಸಚಿವರಾಗಿದ್ದ 2011 ಮತ್ತು 2013 ರ ನಡುವೆ ರಾಜ್ಯವು 4,121 ಕೊಲೆಗಳು, 582 NDPS ಪ್ರಕರಣಗಳು ಮತ್ತು 995 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದೆ. ಬಸವರಾಜ ಬೊಮ್ಮಾಯಿ (2019–20) ಅವರ ಅವಧಿಯಲ್ಲಿ, ಕೊಲೆಗಳು 2,554, NDPS ಪ್ರಕರಣಗಳು 8,317 ಮತ್ತು ಸೈಬರ್ ಅಪರಾಧ ಪ್ರಕರಣಗಳು 19,157 ದಾಖಲಾಗಿವೆ. ಆರಗ ಜ್ಞಾನೇಂದ್ರ ಅವರ ಅವಧಿಯಲ್ಲಿ, 2,417 ಕೊಲೆಗಳು ಮತ್ತು 24,486 ಸೈಬರ್ ಅಪರಾಧ ಪ್ರಕರಣಗಳು ನಡೆದಿವೆ.
For More Updates Join our WhatsApp Group :




