ಕೋಟ್ಯಂತರ ರೂ. ವಂಚನೆ ನಡೆದರೂ ದೂರು ನೀಡದ ಆಡಳಿತ ಮಂಡಳಿ
ಕಲಬುರ್ಗಿ : ಜಿಲ್ಲೆಯ ವಿಶ್ವವಿದ್ಯಾಲಯದ ಖಜಾನೆಗೆ ಕನ್ನ ಬಿದ್ದಿದ್ದು, ಸಿಬ್ಬಂದಿಗೆ ಸಂಬಳ ನೀಡುವ ಜವಾಬ್ದಾರಿ ಹೊತ್ತ ಅಕೌಂಟಂಟ್ನಿಂದಲೇ ಈ ವಂಚನೆ ನಡೆದಿದೆ. ಆತ ತನ್ನ ವೈಯಕ್ತಿಕ ಖಾತೆಗೆ ಲಕ್ಷಾಂತರ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಯಾವುದೇ ದೂರು ದಾಖಲಾಗದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಅನುಮಾನಕ್ಕೆ ಎಡೆಮಾಡಿಕೊಟ್ಟ ಕುಲಪತಿಗಳ ಹೇಳಿಕೆ!
ಕಲಬುರ್ಗಿ ವಿವಿಯ ಎಲ್ಲಾ ಸಿಬ್ಬಂದಿಗೆ ಸಂಬಳ ಕೊಡಬೇಕಾದ ಅಕೌಂಟೆಂಟ್ ಶರಣು, ತನ್ನ ವೈಯಕ್ತಿಕ ಖಾತೆಗೆ ಲಕ್ಷಾಂತರ ರೂಪಾಯಿ ವರ್ಗಾವಣೆ ಮಾಡಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ಅದಕ್ಕೂ ಹೆಚ್ಚಾಗಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಈ ಬಗ್ಗೆ ದೂರು ದಾಖಲಿಸದೆ ಕುಳಿತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ.
ಅಕೌಂಟಂಟ್ ಶರಣು ತನಗೆ ಬೇಕಾದ ವ್ಯಕ್ತಿಗಳಿಗೆ ಹೆಚ್ಚುವರಿ ಟಿಎ,ಡಿಎ ಹಾಕಿದ್ದೇನೆ ಎಂದು ವಿವಿಯ ಖಾತೆಯಿಂದ ಲಕ್ಷ ಲಕ್ಷ ಹಣ ಸಂದಾಯ ಮಾಡಿದ್ದ. ಬಳಿಕ ಅವರಿಗೆ ಪೋನ್ ಮಾಡಿ ಆ ಹಣವನ್ನು ವಾಪಸ್ ತನ್ನ ವಯುಕ್ತಿಕ ಖಾತೆಗೆ ಹಾಕಿಕೊಂಡು ಮೋಸ ಮಾಡಿದ್ದ. ಆ ಮೋಸದ ಹಣವೇ ಅಂದಾಜು ಬರೋಬ್ಬರಿ ಒಂದು ಕೋಟಿವರೆಗೂ ಆಗಬಹುದು ಎಂದು ಈ ಮೊದಲು ವಿವಿ ಕುಲಪತಿಗಳೇ ಹೇಳಿದ್ದರು. ವಿವಿಯ ಲೆಕ್ಕ ಪತ್ರ ಸಮೀತಿ ಅಡಿಟ್ ವೇಳೆ ಈ ಅಕ್ರಮ ಹಣದ ವರ್ಗಾವಣೆ ಬಹಿರಂಗರ ಗೊಂಡಿತ್ತು. ಹೀಗಿದ್ದರೂ ಈ ಬಗ್ಗೆ ಯಾವುದೇ ದೂರು ದಾಖಲಾಗದೇ ಇರುವುದು ಅನುಮಾನಗಳಿಗೆ ಕಾರಣವಾಗಿತ್ತು.
ಘಟನೆ ನಡೆದಾಗ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದೆ ಎಂದಿದ್ದ ಕುಲಪತಿಗಳು ಈಗ ತನಿಖೆಯಲ್ಲಿ ಕೇವಲ 24 ಲಕ್ಷ ರೂಪಾಯಿ ಅಕ್ರಮ ವರ್ಗಾವಣೆ ನಡೆದಿದೆ ಎಂದು ಹೇಳಿದ್ದಾರೆ ಎಂಬುದು ತಿಳಿದು ಬಂದಿದೆ. ಅಕೌಂಟಂಟ್ ಶರಣು ಈಗಾಗಲೇ ಕೆಲಸಿದಿಂದ ವಜಾಗೊಂಡಿದ್ದಾನೆ.ಆದರೆ ತನಿಖೆಯಲ್ಲಿ ಕುಲಸಚಿವರ ಹೇಳಿಕೆಗಳಿಂದ ಅನುಮಾನ ಹುಟ್ಟಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
For More Updates Join our WhatsApp Group :




