ಪತಿ ಮನೆಯ ಮೇಲೆ ಆಕೆಯ ಗೈರುಹಾಜರಾತಿ, ಕುಟುಂಬ ಆತಂಕದಲ್ಲಿದೆ
ಕೊಪ್ಪಳ: ಮದುವೆ ಎಂಬುದು ಎರಡು ಕುಟುಂಬಗಳ ನಡುವೆ ಹೊಸ ಸಂಬಂಧ ಬೆಸೆಯುವ ಸೇತುವೆ. ಬಲಗಾಲಿಟ್ಟು ಪತಿ ಮನೆಗೆ ಬರುವವಳು ತಮ್ಮ ಮನೆಯನ್ನು ಬೆಳಗಿಸುತ್ತಾಳೆ. ವಂಶೋದ್ಧಾರಕ್ಕೆ ಆಕೆ ಕಾರಣವಾಗುತ್ತಾಳೆ ಎಂಬ ಭಾವನೆ ನಮ್ಮಲ್ಲಿದೆ. ಆದರೆ ಇತ್ತೀಚಿಗೆ ಇವುಗಳಿಗೆ ವಿರುದ್ಧ ಎಂಬಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಮದುವೆಯಾಗಿ ಕೆಲ ದಿನಗಳ ಒಳಗೆಯೇ ನಾನಾ ಕಾರಣಕ್ಕೆ ದಾಂಪತ್ಯ ಸಂಬಂಧ ಹಳಸಿ ಅದೆಷ್ಟೋ ಕುಟುಂಬಗಳು ಸರ್ವನಾಶ ಆದ ಉದಾಹರಣೆಯನ್ನೂ ಕೇಳಿದ್ದೇವೆ. ಇಂತಹುದ್ದೇ ಮನಕಲಕುವ ಘಟನೆಯೊಂದೀಗ ಕರ್ನಾಟಕದ ಕೊಪ್ಪಳದಲ್ಲಿ ನಡೆದಿದೆ.
ಈ ನಡುವೆ ಮನಕಲಕುವ ಘಟನೆಯೊಂದು ನಡೆದಿದೆ. ಸೊಸೆ ನಾಪತ್ತೆಯಾಗಿರುವ ವಿಚಾರ ತಿಳಿದ ನಾಗರಾಜ್ ತಂದೆ ಖಂಡೆಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಂಜನಾ ವಿಚಾರವಾಗಿ ಅವರು ಮಾನಸಿಕವಾಗಿ ತೀವ್ರ ನೊಂದಿದ್ದರು ಎನ್ನಲಾಗಿದೆ. ಇನ್ನು ನಾಪತ್ತೆಯಾಗಿರುವ ನವ ವಿವಾಹಿತೆ ತವರು ಮನೆಗೂ ತೆರಳಿಲ್ಲ ಎನ್ನಲಾಗಿದ್ದು, ಆಕೆಯ ಸಹೋದರ ಕೂಡ ಹುಡುಕಾಟ ನಡೆಸುತ್ತಿದ್ದಾರೆ. ಸಂಜನಾ ಕೈಯಲ್ಲಿ ರವಿ ಎಂಬ ಟ್ಯಾಟೂ ಇರೋದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
For More Updates Join our WhatsApp Group :




