ಟೆಂಪೋದಲ್ಲೇ ಮಾಲೀಕ ಶವ ಪತ್ತೆ: ಕೊ* ಶಂಕೆ

ಟೆಂಪೋದಲ್ಲೇ ಮಾಲೀಕ ಶವ ಪತ್ತೆ: ಕೊ* ಶಂಕೆ

ತನ್ನದೇ ಟೆಂಪೋದಲ್ಲಿ ಶವವಾಗಿ ಪತ್ತೆಯಾದ ಮಾಲೀಕ.

ಚಿಕ್ಕಬಳ್ಳಾಪುರ: ಅಶೋಕ್ ಲೇಲ್ಯಾಂಡ್ ಮಿನಿ ಟೆಂಪೋ ಮಾಲೀಕ ಕಂ ಚಾಲಕನೋರ್ವ ತನ್ನ ಟೆಂಪೋವನ್ನು ನಂಬಿಕೊಂಡು ಬಾಡಿಗೆಗೆ ಹೋಗುವುದರ ಮೂಲಕ ಜೀವನ ಸಾಗಿಸುತ್ತಿದ್ದ. ಬಾಡಿಗೆಗೆ ಹೋಗಿ ಬರುವುದಾಗಿ ಹೇಳಿ ಹೋದವನು ಟೆಂಪೋದಲ್ಲೇ ಶವವಾಗಿ ಪತ್ತೆಯಾಗಿದ್ದು ,ಕೊಲೆ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ತಾಲೂಕಿನ ಆರೂರು ಗ್ರಾಮದಲ್ಲಿ ಘಟನೆ ನಡೆದಿದೆ.

ನಡೆದಿದ್ದೇನು?

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕುರುಬರಕುಂಟೆಯ ಕಾಲೋನಿ ನಿವಾಸಿ 48 ವರ್ಷದ ಸುಬ್ರಮಣಿ, ಶನಿವಾರ ಮನೆಯಿಂದ ಬಾಡಿಗೆಗೆ ಹೋಗಿ ಬರ್ತಿನಿ ಎಂದವನು ವಾಪಸ್ ಬಂದಿಲ್ಲ. ಇದರಿಂದ ಅನುಮಾನಗೊಂಡು ಹೆದ್ದಾರಿ ಬಳಿ ವಾಹನ ಹುಡುಕಿಕೊಂಡು ಬಂದಾಗ ಸುಬ್ರಮಣಿಯ ವಾಹನ ಹಾಗೂ ಶವ ಪತ್ತೆಯಾಗಿದೆ.

ಹಿಂಬದಿಯಿಂದ ಲಾರಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿಯೊಂದು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರ ಬಳಿ ನಡೆದಿದೆ.  ಗುಂಡಾ ತಾಂಡಾದ ನಿವಾಸಿ ಕಿರಣ್ (27) ಮೃತ ಬೈಕ್ ಸವಾರ. ಹಗರಿಬೊಮ್ಮನ ಹಳ್ಳಿ ಸಿಪಿಐ, ವಿಕಾಸ್ ಲಮಾಣಿ, ಮರಿಯಮ್ಮನ ಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ

ಗುಂಡಾ ತಾಂಡದಿಂದ, ಹೊಸಪೇಟೆಗೆ ಮಾತ್ರೆ ತರಲು ಬೈಕ್ ಸವಾರ ಕಿರಣ್ ಹೊರಟ್ಟಿದ್ದರು. ಬೆಂಗಳೂರಿನಿಂದ ಅಹಮದಾಬಾದ್ ಕಡೆ ಹೋಗುತ್ತಿದ್ದ ಲಾರಿ, ಬೈಕ್ ಸವಾರನಿಗೆ ಗುದ್ದಿದೆ. ತಲೆ ಮತ್ತು ಬೆನ್ನು, ಮುಖಕ್ಕೆ ಬಲವಾದ ಗಾಯವಾದ ಹಿನ್ನೆಲೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲಾರಿ ಚಾಲಕನನ್ನು ಮರಿಯಮ್ಮನ ಹಳ್ಳಿ ಪೊಲೀಸರು ವಿಚಾರಣೆ ಮಾಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *