ಶಾಸಕ ಮುನಿರತ್ನ ವಿರುದ್ಧ ದಾಖಲಾಯ್ತು ಮತ್ತೊಂದು ಕೇಸ್

ಶಾಸಕ ಮುನಿರತ್ನ ವಿರುದ್ಧ ದಾಖಲಾಯ್ತು ಮತ್ತೊಂದು ಕೇಸ್

ಬೆಂಗಳೂರು : ಜಾತಿ ನಿಂದನೆ ಮತ್ತು ಮಹಿಳೆಯರ ಮೇಲೆ ಅವಹೇಳನಕಾರಿಯಾಗಿ ಮಾತನಾಡಿ ಕಂಬಿಯ ಹಿಂದೆ ಸೇರಿರುವ ಶಾಸಕ ಮುನಿರತ್ನ ಅವರಿಗೆ ಇಂದು ಡಬಲ್ ಟ್ರಬಲ್ ಎದುರಾಗಲಿದೆ. ಒಂದು ಕಡೆ ಜಾಮೀನು ಭವಿಷ್ಯ ಮತ್ತೊಂದು ಕಡೆ ಬಂಧನ ಭೀತಿ ಕಾಡಲಿದೆ.

ಹೌದು… ಅಟ್ರಾಸಿಟಿ ಹಾಗೂ ಜೀವ ಬೆದರಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಮುನಿರತ್ನ ಅವರಿಗೆ ಇಂದು ಈ ಸಂಬಂಧ ಜಾಮೀನು ಅದೇಶ ಪ್ರಕಟವಾಗಲಿದೆ.  ಜಾಮೀನು ಅದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕಟ ಮಾಡಲಿದೆ.

ಆದರೆ ನಿನ್ನೆ ರಾತ್ರಿ ಮುನಿರತ್ನ ಹಾಗೂ ಬೆಂಬಲಿಗರ  ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. ರಾಮನಗರದ ಕಗ್ಗಲೀಪುರ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಒಂದು ವೇಳೆ ಜಾಮೀನು ಸಿಕ್ಕರೆ ಜೈಲು ಬಳಿಯೇ ಮುನಿರತ್ನ ಬಂಧನ ಸಾಧ್ಯತೆ ಇದೆ.

ಜಾಮೀನು ನಿರಾಕರಣೆಯಾದರೆ ಬಾಡಿ ವಾರೆಂಟ್ ಸಲ್ಲಿಸಿ ವಶಕ್ಕೆ ಪಡೆಯಲಿದ್ದಾರೆ. ಕಗ್ಗಲೀಪುರ ಪೊಲೀಸರು. ಹೀಗಾಗಿ ಇಂದು ಮುನಿರತ್ನಗೆ ಡಬಲ್ ಟ್ರಬಲ್ ಎದುರಾಗಲಿದೆ.

ಶಾಸಕ ಮುನಿರತ್ನ ವಿರುದ್ಧ ಅತ್ಯಚಾರ ಪ್ರಕರಣ ದಾಖಲು

ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಪಿಸಿ ಸೆಕ್ಷನ್ 354ಎ, 354 ಸಿ, 376, 506, 504, 120(ಬಿ), 149, 384, 406, 308 ಅಡಿ ಕೇಸ್ ದಾಖಲು ಮಾಡಲಾಗಿದೆ.  ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ರೆಸಾರ್ಟ್ ನಲ್ಲಿ ಅತ್ಯಚಾರ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಶಾಸಕ ಮುನಿರತ್ನ ಸೇರಿ 7 ಜನರ ವಿರುದ್ಧ ಎಫ್.ಐ.ಆರ್ ದಾಖಲು ಮಾಡಲಾಗಿದೆ.

ಎ1 ಮುನಿರತ್ನ ನಾಯ್ಡು

ಎ2 ವಿಜಯ್ ಕುಮಾರ್

ಎ3 ಸುಧಾಕರ

ಎ4 ಕಿರಣ್ ಕುಮಾರ್

ಎ5 ಲೋಹಿತ್ ಗೌಡ

ಎ6 ಮಂಜುನಾಥ್

ಎ7 ಲೋಕಿ

Leave a Reply

Your email address will not be published. Required fields are marked *