ಬೇಸಿಗೆಯ ಸಮಯದಲ್ಲಿ ಈ ಪದಾರ್ಥಗಳನ್ನು ತಪ್ಪದೆ ಬಳಸಿ..?

ಬೇಸಿಗೆಯ ಸಮಯದಲ್ಲಿ ಈ ಪದಾರ್ಥಗಳನ್ನು ತಪ್ಪದೆ ಬಳಸಿ..?

ಆರೋಗ್ಯ : ರಾಜ್ಯದಲ್ಲಿನ ಹವಾಮಾನ ಈಗಾಗಲೇ ಬೇಸಿಗೆಯ ಬಿಸಿಯ ಶಾಖವನ್ನು ಮುಟ್ಟಿಸುತ್ತಿದೆ. ಮುಂದೆ ಉಷ್ಣಾಂಶ ಹೆಚ್ಚಾಗಲಿರುವುದು ನಿಶ್ಚಿತ. ಈ ಕಾಲದಲ್ಲಿ ದೇಹಕ್ಕೆ ತಂಪು ನೀಡುವ ಮತ್ತು ಹೈಡ್ರೇಟ್ ಮಾಡುವ ಆಹಾರ ಪದಾರ್ಥಗಳು ಅತ್ಯಂತ ಅಗತ್ಯವಾಗುತ್ತವೆ. ಎಣ್ಣೆ ಮತ್ತು ಮಸಾಲೆಯುಳ್ಳ ಆಹಾರ ಸೇವನೆ ತಪ್ಪಿಸಿ, ಹಗುರವಾದ ಮತ್ತು ಆರೋಗ್ಯಕರ ಆಹಾರ ಸೇವನೆ ಮಾಡುವುದು ಉತ್ತಮ.

ನಿಂಬೆ ಹಣ್ಣು ಜ್ಯೂಸ್

ನಿಂಬೆ ಜ್ಯೂಸ್ ದೇಹಕ್ಕೆ ತಂಪು ನೀಡುವುದರ ಜೊತೆಗೆ ಉತ್ತಮ ಹೈಡ್ರೇಷನ್ ಕೊಡುತ್ತದೆ. ಇದನ್ನು ಪ್ರತಿದಿನ ಕುಡಿಯುವ ಮೂಲಕ ದೇಹದ ಒಳಗಿನ ತಾಪಮಾನವನ್ನು ನಿಯಂತ್ರಿಸಬಹುದು. ನಿಂಬೆ ಹಣ್ಣಿನಲ್ಲಿ ವಿಟಮಿನ್ C ತುಂಬಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಸಹಾಯಕವಾಗಿದೆ.

ಕಲ್ಲಂಗಡಿ

ಬೇಸಿಗೆ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಹೆಚ್ಚು ಪ್ರಮಾಣದಲ್ಲಿ ನೀರು ಇರುತ್ತದೆ, ಇದು ದೇಹವನ್ನು ಡಿಹೈಡ್ರೇಟ್ ಆಗದಂತೆ ಕಾಪಾಡುತ್ತದೆ. ಇದರಲ್ಲಿರುವ ವಿಟಮಿನ್ A, ವಿಟಮಿನ್ C ಮತ್ತು ಪೊಟ್ಯಾಸಿಯಂ ದೇಹದ ತಾಪಮಾನವನ್ನು ನಿಯಂತ್ರಿಸುತ್ತವೆ ಮತ್ತು ವಿಷಕಾರಿಗಳನ್ನು ಹೊರಹಾಕಲು ಸಹಾಯ ಮಾಡುತ್ತವೆ.

ಪುದೀನಾ

ಬೇಸಿಗೆಯಲ್ಲಿ ಪುದೀನಾ ಸೇವನೆ ದೇಹಕ್ಕೆ ತಂಪು ನೀಡುವುದರ ಜೊತೆಗೆ ಜೀರ್ಣಕ್ರಿಯೆ ಉತ್ತಮವಾಗಿರಲು ಸಹಾಯ ಮಾಡುತ್ತದೆ. ಇದನ್ನು ನೀರಿನಲ್ಲಿ ಅರೆದು ಕುಡಿಯಬಹುದು. ಪುದೀನಾದಲ್ಲಿ ಮೆಂಥಾಲ್ ಮತ್ತು ರೋಸ್ಮೆರಿನಿಕ್ ಆಮ್ಲವಿದೆ, ಇದು ದೇಹದ ಇನ್ಫ್ಲಮೇಷನ್ ಅನ್ನು ಕಡಿಮೆ ಮಾಡುತ್ತದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮಾನಸಿಕ ಒತ್ತಡವನ್ನು ತಗ್ಗಿಸುತ್ತದೆ.

Leave a Reply

Your email address will not be published. Required fields are marked *