ಕುಣಿಗಲ್ || ಪಶು ಇಲಾಖೆ ಚಾಲಕನ ಸೇವೆ ಮುಂದುವರಿಕೆಗೆ ಆಗ್ರಹ

ಕುಣಿಗಲ್ || ಪಶು ಇಲಾಖೆ ಚಾಲಕನ ಸೇವೆ ಮುಂದುವರಿಕೆಗೆ ಆಗ್ರಹ

ಕುಣಿಗಲ್: ಪಶು ಇಲಾಖೆಯ 1967ಸಹಾಯವಾಣಿ ಆ್ಯಂಬ್ಯುಲೆನ್ಸ್ ಚಾಲಕನನ್ನು ಸೇವೆಯಿಂದ ತೆಗೆದು ಹಾಕಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಪಶು ಆಸ್ಪತ್ರೆ ಮುಂಭಾಗ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ. 

 ರೈತರಿಂದ ಹಣ ವಸೂಲಿ ಮಾಡಿದ ವೈದ್ಯರ ವಿರುದ್ದ ಮೇಲಧಿಕಾರಿಗೆ ದೂರು ಹೇಳಿದ  ಪಶು ಇಲಾಖೆ 1967 ಸಹಾಯವಾಣಿ ಆ್ಯಂಬ್ಯುಲೆನ್ಸ್ ಚಾಲಕ ಶ್ರೀನಿವಾಸ್ರವರನ್ನು ಎಡು ಸ್ಪಾರ್ಕ್ ಕಂಪನಿಯು ಚಾಲಕ ಹುದ್ದೆಯಿಂದ ತೆಗೆದು ಹಾಕಿದೆ ಎಂದು ಆರೋಪಿಸಿ ದಲಿತ ಜಾಗೃತಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ದಲಿತ್ ನಾರಾಯಣ್,  ತಾಲೂಕು ಅಧ್ಯಕ್ಷ ಎಸ್.ಟಿ.ರಾಜು  ನೇತೃತ್ವದಲ್ಲಿ ವಿವಿಧ ಸಂಘನೆಯ ಕಾರ್ಯಕರ್ತರು ಇಲ್ಲಿನ ಪಶು ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

  ದಲಿತ ಜಾಗೃತಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ದಲಿತ್ ನಾರಾಯಣ್ ಮಾತನಾಡಿ, ಸರ್ಕಾರ ರಾಸುಗಳು ಕಾಯಿಲೆಯಿಂದ ಬಳಲಿ ಚಿಕಿತ್ಸೆ ಸಿಗದೆ ಸಾಯಬಾರದೆಂಬ ಉದ್ದೇಶದಿಂದ 1967 ಉಚಿತ ಆ್ಯಂಬ್ಯುಲೆನ್ಸ್ ಜೊತೆಗೆ ವೈದ್ಯರನ್ನು ವ್ಯವಸ್ಥೆ ಮಾಡಿ ಉಚಿತ ಚಿಕಿತ್ಸೆ ನೀಡಲು ಮಹಾರಾಷ್ಟçದ ಎಡು ಸ್ಪಾರ್ಕ್ ಇಂಟರ್ ನ್ಯಾಷನಲ್ ಪ್ರೆöÊ.ಲಿಮಿಟೆಡ್ ಕಂಪನಿಯೊOದಕ್ಕೆ ಗುತ್ತಿಗೆ ನೀಡಿದೆ. ಆ ಕಂಪನಿಯವರು ಆರ್.ಶ್ರೀನಿವಾಸ್ ಅವರನ್ನು ಆ್ಯಂಬ್ಯುಲೆನ್ಸ್   ಚಾಲಕನಾಗಿ ನೇಮಕ ಮಾಡಿಕೊಂಡಿದೆ, ಅಂದಿನಿOದ ಶ್ರೀನಿವಾಸ್ ಅವರು ಆ್ಯಂಬ್ಯುಲೆನ್ಸ್  ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

  ರೈತರಿಂದ ಹಣ ವಸೂಲಿ  : ಆ್ಯಂಬ್ಯುಲೆನ್ಸ್ನಲ್ಲಿ ರಾಸುಗಳಿಗೆ ಚಿಕಿತ್ಸೆ ನೀಡಲು ಹಳ್ಳಿಗಳಿಗೆ ಹೋದಾಗ ವೈದ್ಯರು ಹೈನುಗಾರಿಕೆ ರೈತರಿಂದ ಹಣ ವಸೂಲಿ  ಮಾಡುತ್ತಿದ್ದರು. ರೈತರು ಕೊಡುವುದಿಲ್ಲ ಎಂದು ಹೇಳಿದಾಗ ನೀವು ಕೊಡುವ ಹಣ ಇಲಾಖೆಯ ಅಧಿಕಾರಿಗಳಿಗೆ ಮತ್ತು ಕಂಪನಿ ವ್ಯವಸ್ಥಾಪಕರಿಗೆ ಕೊಡಬೇಕು ಇಲ್ಲದಿದ್ದರೆ ನಾಳೆ ನಿಮ್ಮ ರಾಸುಗಳಿಗೆ ಏನಾದರೂ ತೊಂದರೆಯಾದಾಗ ಆ್ಯಂಬ್ಯುಲೆನ್ಸ್ ಕಳುಹಿಸುವುದಿಲ್ಲ ಎಂದು ಹೇಳುತ್ತಿದ್ದರಂತೆ.

  ಇದರಿಂದ ಬೇಸತ್ತ ಚಾಲಕ ಶ್ರೀನಿವಾಸ್ ವೈದ್ಯರ ವಿರುದ್ಧ ಕಂಪನಿಗೆ ದೂರು ನೀಡಿದ್ದರು. ಎಲ್ಲಿ ಕಂಪನಿಯ ಮಾನ ಹೋಗುವುದೊ   ಎಂಬುದನ್ನು ಅರಿತ ಜಿಲ್ಲಾ ಸಂಯೋಜಕ ಹಾಗೂ ವೈದ್ಯರು ಸೇರಿಕೊಂಡು ಶ್ರೀನಿವಾಸ್ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಮಾನಸಿಕವಾಗಿ ಹಿಂಸೆ ಹಾಗೂ ಕಿರುಕುಳ ನೀಡಿ,  ಸಂಸ್ಥೆಯ ಮುಖ್ಯಸ್ಥರಿಗೆ ಇಲ್ಲ ಸಲ್ಲದ ಸುಳ್ಳು ಹೇಳಿ  ಕೆಲಸದಿಂದ  ತೆಗೆಸಿ ಹಾಕಿದ್ದಾರೆ ಎಂದು ಆರೋಪಿಸಿದರು. ಕಂಪನಿ ತಪ್ಪು ಮಾಡಿದವರನ್ನು ಬಿಟ್ಟು ತಪ್ಪು ಮಾಡದ ಅಮಾಯಕ ಚಾಲಕನ ವಿರುದ್ಧ ಕ್ರಮ ಕೈಗೊಂಡಿರುವುದು ಖಂಡನೀಯ ಎಂದರು.

 ಡಿಜಿಎಸ್ ತಾಲೂಕು ಅಧ್ಯಕ್ಷ ಎಸ್.ಟಿ.ರಾಜು   ಮಾತನಾಡಿ ಪಶು ಸಂಗೋಪನ ಇಲಾಖೆ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಿ ಚಾಲಕನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.

    ಧರಣಿಯಲ್ಲಿ ಸಂಘಟನೆಗಳ ಮುಖಂಡರಾದ ಬುಲೆಟ್ ಮೋಹನ್ ಕುಮಾರ್, ಜಿ.ರಘು, ಹಟ್ಟಿರಂಗಯ್ಯ, ಕುಮಾರ್, ಶ್ರೀನಿವಾಸಯ್ಯ, ಚಿಕ್ಕ ರಾಮು ಇದ್ದರು.

Leave a Reply

Your email address will not be published. Required fields are marked *