ಮದ್ದೂರು ಗಣೇಶ ಗಲಾಟೆ: ಲಾಠಿ ಏಟಿಗೆ ಬಿದ್ದ ಹಿಂದೂ ಕಾರ್ಯಕರ್ತೆ ಜ್ಯೋತಿ ವಿರುದ್ಧ FIR.

ಮದ್ದೂರು ಗಣೇಶ ಗಲಾಟೆ: ಲಾಠಿ ಏಟಿಗೆ ಬಿದ್ದ ಹಿಂದೂ ಕಾರ್ಯಕರ್ತೆ ಜ್ಯೋತಿ ವಿರುದ್ಧ FIR.

ಮಂಡ್ಯ : ಜಿಲ್ಲೆಯ ಮದ್ದೂರು ಗಣೇಶ ವಿಸರ್ಜನಾ ಮೆರವಣಿಗೆ ಗಲಾಟೆ ಸಂದರ್ಭದಲ್ಲಿ ನಡೆದ ಲಾಠಿಚಾರ್ಜ್‌ನಲ್ಲಿ ಹಿಂದೂ ಕಾರ್ಯಕರ್ತೆ ಜ್ಯೋತಿ ಗಂಭೀರವಾಗಿ ಗಾಯಗೊಂಡಿದ್ದರು. ರಸ್ತೆಯ ಮಧ್ಯೆ ನೋವಿನಿಂದ ಅಳುತ್ತಾ ಪೊಲೀಸರ ವಿರುದ್ಧ ಕಿಡಿಕಾರುತ್ತಿದ್ದ ಆಕೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿವೆ.

ಲಾಠಿ ಏಟಿನಿಂದ ತತ್ತರಿಸಿದ ಜ್ಯೋತಿ, ಸ್ಥಳದಲ್ಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆ ವಿಡಿಯೋಗಳು ಹಾಗೂ ಆಕೆಯ ರೀಲ್ಸ್‌ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿವೆ. ಆದರೆ, ಇದೇ ಹೇಳಿಕೆಗಳಿಂದಾಗಿ ವಿವಾದ ಸೃಷ್ಟಿಯಾಗಿದೆ. ಸಿಎಂ ಹಾಗೂ ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಮಾತುಗಳು ಬಳಸಿದ ಆರೋಪದ ಮೇಲೆ ಮದ್ದೂರು ಠಾಣೆ ಪಿಐ ಶಿವಕುಮಾರ್ ಅವರ ದೂರು ಆಧಾರದಲ್ಲಿ, ಮದ್ದೂರಿನ ಶಿವಪುರದ ನಿವಾಸಿ ಜ್ಯೋತಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಆರೋಪಗಳು:

* ಅನ್ಯಧರ್ಮದ ವಿರುದ್ಧ ಅವಹೇಳನಕಾರಿ ಪದ ಬಳಕೆ

* ಕೋಮು ವೈಮನಸ್ಸು ಉಂಟುಮಾಡುವ ಹೇಳಿಕೆ

* ವೈರತ್ವ ಉತ್ತೇಜಿಸುವ ಪ್ರಯತ್ನ

ಈ ಪ್ರಕರಣ ಈಗ ಮದ್ದೂರಿನಲ್ಲಿ ರಾಜಕೀಯ-ಸಾಮಾಜಿಕ ಚರ್ಚೆಗೆ ಕಾರಣವಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *