ನೋ ರೀ ಶಫಲ್, ಯಾವುದೇ ಶಫಲ್ ಇಲ್ಲ, Chief Minister ಹೇಳುತ್ತಿದ್ದೇನೆ : ಸಿದ್ದರಾಮಯ್ಯ

ಬೆಂಗಳೂರು: ನೋ ರೀ ಶಫಲ್. ಯಾವುದೇ ಶಫಲ್ ಇಲ್ಲ. ನಾನೇ ಚೀಫ್​ ಮಿನಿಸ್ಟರ್ ಹೇಳುತ್ತಿದ್ದೇನೆ. ನಿಮಗೆ ಚೀಫ್​ ಮಿನಿಸ್ಟರ್ ಮೇಲೆ ನಂಬಿಕೆ ಇಲ್ವಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಅನೌಪಚಾರಿಕವಾಗಿ ಮಾತನಾಡಿದ ಅವರು, ಎಐಸಿಸಿ ವರಿಷ್ಠರ ಜೊತೆ ಸಭೆ ರೀ ಶಫಲ್ ಬಗ್ಗೆ ಏನಾದರು ಚರ್ಚೆ ಆಗೆದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಮೇಲಿನಂತೆ ಉತ್ತರಿಸಿದರು.

ಮಾಮೂಲಿ ಸಭೆ ನಮ್ಮ ರಾಷ್ಟ್ರೀಯ ನಾಯಕರು ಬಂದಿದ್ದಾರೆ. ಅವರ ಜೊತೆ ಮಾತುಕತೆ ಅಷ್ಟೇ. ಯಾವುದೇ ರೀ ಶಫಲ್ ಏನು ಇಲ್ಲ ಎಂದರು. ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿ, ಪಾದಯಾತ್ರೆ ಬಗ್ಗೆ ಈಗಾಗಲೇ ಹೇಳಿದ್ದೇನೆ. ಇದು ರಾಜಕೀಯ ಪ್ರೇರಿತ ಪಾದಯಾತ್ರೆ. ಇದು ರಾಜಕೀಯ ಅಜೆಂಡಾ ಎಂದು ಟೀಕಿಸಿದರು.

Leave a Reply

Your email address will not be published. Required fields are marked *