“ಸ್ಮಶಾನದಲ್ಲಿ ತ್ಯಾಜ್ಯ ಸುರಿಸಿದ ಪಂಜಾಯತ್‌ — ಕಚೇರಿ ಮುಂದೆ ಕಸ ಸುರಿದು ಪ್ರತಿಭಟನೆ!”

 “ಸ್ಮಶಾನದಲ್ಲಿ ತ್ಯಾಜ್ಯ ಸುರಿಸಿದ ಪಂಜಾಯತ್‌ — ಕಚೇರಿ ಮುಂದೆ ಕಸ ಸುರಿದು ಪ್ರತಿಭಟನೆ!”

ನೆಲಮಂಗಲ: ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಬೆಂಗಳೂರಲ್ಲಿ ಜಿಬಿಎ ಕಠಿಣ ಕ್ರಮಕ್ಕೆ ಮುಂದಾಗಿದೆ. ಕಸ ಎಸೆಯುವವರ ಮನೆ ಮುಂದೆ ಲೋಡ್​​ಗಟ್ಟಲೆ ಕಸ ತಂದು ಸುರಿದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಜೊತೆಗೆ ದಂಡವನ್ನೂ ವಿಧಿಸುವ ಕೆಲಸ ಮಾಡುತ್ತಿದೆ. ಆದ್ರೆ ಬೆಂಗಳೂರು ಗ್ರಾಮಾಂತರದ ನೆಲಮಂಗಲದಲ್ಲಿ ಈ ಮಾದರಿ​ ಉಲ್ಟಾ ಆಗಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಸುರಿದಿದ್ದಕ್ಕೆ ಪಂಚಾಯತ್​​ ಕಚೇರಿ ಮುಂದೆಯೇ ಕಸ ತಂದು ಸುರಿದು ಜನ ಪಾಠ ಕಲಿಸಿದ್ದಾರೆ.

ಸೋಪುರ ಕೈಗಾರಿಕಾ ಪ್ರದೇಶದಲ್ಲಿ ಸಂಗ್ರಹವಾಗುವ ಕಸವನ್ನ ಸ್ಮಶಾನದಲ್ಲಿ ಸುರಿದ ಪಂಚಾಯತ್​​ ನಡೆಗೆ ಸಿಡಿದೆದ್ದ ಸಾರ್ವಜನಿಕರು, ಮನೆಗಳಲ್ಲಿ ಸಂಗ್ರಹ ಮಾಡುವ ಕಸವನ್ನು ಕಚೇರಿ ಮುಂದೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಮಶಾನದಲ್ಲಿ ಕಸ ಹಾಕಲು ಸೂಚನೆ ನೀಡಿದ್ದ ಪಿಡಿಓ ವಿರುದ್ಧ ಕಿಡಿ ಕಾರಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *