ರಾಜ್ vs ರಾಜ್; ‘ಸು ಫ್ರಮ್ ಸೋ’ ಅಬ್ಬರದ ಮಧ್ಯೆಯೇ ರಿಲೀಸ್ ಆಗಲಿದೆ ರಾಜ್ ಬಿ. ಶೆಟ್ಟಿ ಹೊಸ ಸಿನಿಮಾ.

‘ಸು ಫ್ರಮ್ ಸೋ’ ಸಿನಿಮಾ 40 ಕೋಟಿಗೂ ಹೆಚ್ಚು ಗಳಿಕೆ ಮಾಡುತ್ತಿದ್ದು, 50 ಕೋಟಿ ಕ್ಲಬ್ ಸೇರಲು ಸಜ್ಜಾಗಿದೆ. ರಾಜ್ ಬಿ. ಶೆಟ್ಟಿ ನಟನೆಯ ಈ ಸಿನಿಮಾ…

ಅಪ್ರಾಪ್ತ ಮಗನ ಎದುರೇ ಪತಿಯ ಕೊಂದು ತಾನೂ ಆತ್ಮಹ*ತ್ಯೆಗೆ ಶರಣಾದ ಮಹಿಳೆ.

ಅಹಮದಾಬಾದ್ : ಅಪ್ರಾಪ್ತ ಮಗನ ಎದುರೇ ಕಾನ್​​ಸ್ಟೆಬಲ್ ಪತಿಯನ್ನು ಕೊಲೆ ಮಾಡಿ ಮಹಿಳೆ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ. ಮಹಿಳೆ 7 ವರ್ಷದ ಮಗನ…

ಹುಬ್ಬಳ್ಳಿ ನೇಹ ಹಿರೇಮಠ ಕೊ*ಲೆ ಪ್ರಕರಣ: ಹಂತಕನ ಜಾಮೀನು ಅರ್ಜಿ ವಜಾ.

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. 2024ರ ಏಪ್ರಿಲ್ 18ರಂದು ನಡೆದಿದ್ದ ನೇಹಾ ಹಿರೇಮಠ ಕೊಲೆ ಪ್ರಕರಣದ…

ಬಸ್ ಬಂದ್ ಎಫೆಕ್ಟ್ : ಮೆಟ್ರೋ ನಿಲ್ದಾಣದ ಮುಂದೆ ಪ್ರಯಾಣಿಕರ ಸಾಲು | KSRTC Strike Impact

ಬೆಂಗಳೂರು : ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಸಾರಿಗೆ ನೌಕರರು ಬಸ್ಗಳನ್ನು ರಸ್ತೆಗಿಳಿಸಿಲ್ಲ. ಸಾರಿಗೆ ನೌಕರರ ಮುಷ್ಕರದ ಎಫೆಕ್ಟ್ ಇದೀಗ ನಮ್ಮ ಮೆಟ್ರೋ ಪ್ರಯಾಣಿಕರ…

‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಬಿ. ಶೆಟ್ಟಿ ಖಡಕ್ ಉತ್ತರ.

ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಮತ್ತು ರಾಜ್ ಬಿ. ಶೆಟ್ಟಿ ಅವರ ಸಹಯೋಗದಿಂದ ಕನ್ನಡ ಚಿತ್ರರಂಗಕ್ಕೆ ಹೊಸ ಶೈಲಿಯ ಸಿನಿಮಾಗಳು ಬಂದಿವೆ. ‘ಕಾಂತಾರ’,‘ಕಿರಿಕ್ ಪಾರ್ಟಿ’ ಮುಂತಾದ ಯಶಸ್ವಿ…

‘ಕೂಲಿ’ ಚಿತ್ರದ ನಿರ್ಮಾಪಕರಿಗೆ 5 ಕೋಟಿ ರೂ. ಉಳಿಸಿದ ನಿರ್ದೇಶಕ ಲೋಕೇಶ್ ಕನಗರಾಜ್.

ಲೋಕೇಶ್ ಕನಗರಾಜ್ ಅವರ ನಿರ್ದೇಶನದ ‘ಕೂಲಿ’ ಸಿನಿಮಾ ನಿಗದಿತ ಬಜೆಟ್ ಮತ್ತು ಸಮಯದೊಳಗೆ ಪೂರ್ಣಗೊಂಡಿದೆ. ನಾಗಾರ್ಜುನ ಅವರು ಬ್ಯಾಂಕಾಕ್‌ನಲ್ಲಿನ ಚಿತ್ರೀಕರಣದ ಬಗ್ಗೆ ಮಾತನಾಡಿ, ಒಂದು ದಿನ ವಿಳಂಬವಾದರೂ…

ಈ ಸಲ ನಿನಗೆ ರಾಖಿ ಕಟ್ಟೋಕೆ ಆಗಲ್ಲ, ತಮ್ಮನಿಗೆ ಭಾವುಕ ಪತ್ರ ಬರೆದಿಟ್ಟು ಮಹಿಳೆ ಆತ್ಮಹ*ತ್ಯೆ .

ಆಂಧ್ರಪ್ರದೇಶ : ಮದುವೆಯಾಗಿ ಕೇವಲ ಆರು ತಿಂಗಳು ಕಳೆದಿತ್ತಷ್ಟೇ, ಶ್ರೀವಿದ್ಯಾ ಇನ್ನಿಲ್ಲ ಎಂಬ ಸುದ್ದಿ ಕೇಳಿ ಕುಟುಂಬದವರಿಗೆ ಸಿಡಿಲು ಬಡಿದಂತಾಗಿತ್ತು. ಆಕೆ ತಮ್ಮನಿಗೆ ಬರೆದ ಪತ್ರ ಕರುಳು…

ಇರುವ ಕ್ಯಾಂಟೀನ್ ನಿರ್ವಹಣೆ ಬಿಟ್ಟು 20 ಕೋಟಿ ರೂ. ವೆಚ್ಚದಲ್ಲಿ ಹೊಸ ಇಂದಿರಾ ಕ್ಯಾಂಟೀನ್​ಗಳ ಆರಂಭಿಸಲು ಮುಂದಾದ BBMP.

ಬೆಂಗಳೂರು : ಬಡಜನರ ಅಕ್ಷಯ ಪಾತ್ರೆಯಂತಿದ್ದ ಇಂದಿರಾ ಕ್ಯಾಂಟೀನ್​ಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಸರ್ಕಾರ ಹಾಗೂ ಪಾಲಿಕೆ ಜನರ ಕೋಪಕ್ಕೆ ಗುರಿಯಾಗಿತ್ತು. ಇತ್ತ ರಾಜಧಾನಿ ಬೆಂಗಳೂರಿನ ಹಲವೆಡೆ ಇಂದಿರಾ ಕ್ಯಾಂಟೀನ್​ಗಳ ಬಿಲ್ ಬಾಕಿ…

ಸಾರಿಗೆ ಮುಷ್ಕರ: ಹಲವೆಡೆ ರಸ್ತೆಗಿಳಿಯದ KSRTC, BMTC ಬಸ್ಗಳು

ಬೆಂಗಳೂರು: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದಾರೆ. ಇದರಿಂದಗಿ ಸಾರ್ವಜನಿಕರಿಗೆ ಆತಂಕ ಶುರುವಾಗಿದೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳನ್ನೇ ಅವಲಂಬಿಸಿರುವ ಜನರು ಕೆಲಸಗಳಿಗೆ, ಶಾಲೆಗಳಿಗೆ…

ಬಸ್ ಇಲ್ಲದ ಬಿಸಿ ಜನರ ಜೇಬಿಗೆ ಹೊಡೆತ : ದಿಢೀರ್ ಆಟೋ ದರ ಏರಿಕೆ || KSRTC Strike Impact

ಇಂದಿನಿಂದ ಸಾರಿಗೆ ನೌಕರರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಹೈಕೋರ್ಟ್​​ ಒಂದು ದಿನದ ತಡೆಯಾಜ್ಞೆ ನಡುವೆಯೂ ಬಸ್​​ಗಳ ಸಂಚಾರದಲ್ಲಿ ಕೆಲ ಗೊಂದಲ ಇದ್ದು, ಸಂಪೂರ್ಣ ಬಸ್​ಗಳು ರಸ್ತೆಗಿಳಿದಿಲ್ಲ.  ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಆಟೋ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ದಿಢೀರ್​ ಆಟೋ ದರ ಏರಿಕೆ ಮಾಡಿ, ಒಬ್ಬ ಪ್ರಯಾಣಿಕನಿದ್ದರೂ ಕೂಡ 300 ರೂ, 400 ರೂಗಳನ್ನು ವಸೂಲಿ ಮಾಡುತ್ತಿದ್ದಾರೆ. ಶಾಂತಿನಗರದಿಂದ ಜೀವನ್ ಭೀಮಾನಗರಕ್ಕೆ ತೆರಳಲು ಆಟೋ ಚಾಲಕರೊಬ್ಬರು ಒಬ್ಬ ಸಿಂಗಲ್ ಪ್ರಯಾಣಿಕನಿಂದ 350 ರೂಪಾಯಿಗಳನ್ನು ಡಿಮಾಂಡ್ ಮಾಡಿದ ಘಟನೆಯೊಂದು ಈ ಸಮಸ್ಯೆಯ ತೀವ್ರತೆಯನ್ನು ಎತ್ತಿ ತೋರಿಸಿದೆ. ಕೊನೆಗೆ, ಚರ್ಚೆಯ ಬಳಿಕ 250 ರೂಪಾಯಿಗಳಿಗೆ ಒಪ್ಪಿಕೊಂಡ ಚಾಲಕ, ಪ್ರಯಾಣಿಕನನ್ನು ಕರೆದೊಯ್ದಿದ್ದಾರೆ. ಇಲ್ಲಿ ಪ್ರಯಾಣಿಕ ತಮಿಳುನಾಡಿನಿಂದ ಬೆಂಗಳೂರಿಗೆ ಆಗಮಿಸಿದ್ದವರಾಗಿದ್ದು, ಸಾರಿಗೆ ಬಸ್‌ಗಳ ಸೇವೆ ಇಲ್ಲದಿರುವುದರಿಂದ ಆಟೋವನ್ನೇ ಆಶ್ರಯಿಸಬೇಕಾಗಿದೆ. ಆಟೋ ಚಾಲಕನು ದರ ಕೇಳಿದಾಗ ಪ್ರಯಾಣಿಕನಿಗೆ ಶಾಕ್​ ಆಗಿದ್ದು, ಕೊನೆಗೆ 250 ರೂಪಾಯಿಗಳನ್ನು ಪಾವತಿಸಿ ಪ್ರಯಾಣಿಸಿದ್ದಾರೆ. ಸಾಮಾನ್ಯವಾಗಿ, ಶಾಂತಿನಗರದಿಂದ ಜೀವನ್ ಭೀಮಾನಗರಕ್ಕೆ ಆಟೋ ದರ ಸುಮಾರು 100-150 ರೂಪಾಯಿಗಳಷ್ಟಿರುತ್ತದೆ. ಆದರೆ, ಮುಷ್ಕರದಿಂದಾಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿರುವುದರಿಂದ ಆಟೋ ಚಾಲಕರು ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ದರವನ್ನು ಗಗನಕ್ಕೇರಿಸಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸೇರಿದಂತೆ ರಾಜ್ಯದ ಸಾರಿಗೆ ಘಟಕಗಳ ಸಿಬ್ಬಂದಿ, 38 ತಿಂಗಳ ವೇತನ ಬಾಕಿ, ವೇತನ ಪರಿಷ್ಕರಣೆ, ಮತ್ತು 2021ರ ಮುಷ್ಕರದ ಸಂದರ್ಭದಲ್ಲಿ ವಜಾಗೊಂಡ ನೌಕರರ ಮರುನೇಮಕಾತಿಗಾಗಿ ಈ ಹೋರಾಟಕ್ಕೆ ಕರೆ ನೀಡಿದ್ದಾರೆ. ಇದರಿಂದ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೆ ಭಾರೀ ಒತ್ತಡ ಉಂಟಾಗಿದ್ದು, ವಿಶೇಷವಾಗಿ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಪಡೆಯುವ ಮಹಿಳೆಯರಿಗೆ ತೊಂದರೆಯಾಗಿದೆ.