ಬಂಡೆ ಸ್ಪೋಟಕ ಸಿಡಿದು ಬಾಲಕನ ಮೂರು ಬೆರಳು ಛಿದ್ರ ಛಿದ್ರ

ಬಂಡೆ ಸ್ಪೋಟಕ ಸಿಡಿದು ಬಾಲಕನ ಮೂರು ಬೆರಳು ಛಿದ್ರ ಛಿದ್ರ

ತುಮಕೂರು:- ಬಂಡೆ ಸ್ಪೋಟಿಸುವ ಸ್ಪೋಟಕ ಸಿಡಿದು‌ ಬಾಲಕ ಮೂರು ಬೆರಳು ಛಿದ್ರ ಛಿದ್ರವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಬಂಡೆ ಛಿದ್ರಗೊಳಿಸುವ ಸ್ಫೋಟಕ ಸಿಡಿದು ಬಾಲಕನಿಗೆ ಗಂಭೀರ ಗಾಯವಾಗಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಇಡಗೂರಿನಲ್ಲಿ ನಡೆದಿದೆ.

ಸ್ಪೋಟಕವನ್ನು ಬಾಲಕ ಮುಟ್ಟಿದ ತಕ್ಷಣ ಸಿಡಿದಿದೆ. ಬಾಲಕನ ಮೂರು ಬೆರಳು ಛಿದ್ರಗೊಂಡಿವೆ. ಮೋನಿಷ್ ಗಾಯಗೊಂಡ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯಾಗಿದ್ದಾನೆ

ವಿದ್ಯಾರ್ಥಿಗೆ ಗಂಭೀರ ಗಾಯವಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ.

ಶಾಲೆಯ ಬಂಡೆ  ಬಳಿಯಿದ್ದ ಸ್ಪೋಟಕ ವನ್ನು ಮುಟ್ಟಿದ ಕೂಡಲೇ ಸ್ಪೋಟಗೊಂಡಿದೆ.  ಆಟದ ವಸ್ತು ಇರಬಹುದು ಎಂದು ಬಾಲಕ ಕೆಂಪು ಬಣ್ಣದ ಸ್ಫೋಟ ಮುಟ್ಟಿದ  ವೇಳೆ ಸ್ಪೋಟಗೊಂಡಿದೆ. ಸಿಎಸ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Leave a Reply

Your email address will not be published. Required fields are marked *