ಇಂದಿನ ನಿಮ್ಮ ಜಾತಕ ಹೇಗಿದೆ ಗೊತ್ತಾ..? ಈ ರಾಶಿಯ ರಾಜಕೀಯ ವ್ಯಕ್ತಿಗಳಿಗೆ ಅಶುಭ ಫಲ. ಐಟಿ ಉದ್ಯೋಗದಲ್ಲಿರುವವರು ಎಚ್ಚರದಿಂದಿರಿ..!

ಇಂದಿನ ನಿಮ್ಮ ಜಾತಕ ಹೇಗಿದೆ ಗೊತ್ತಾ..? ಈ ರಾಶಿಯ ರಾಜಕೀಯ ವ್ಯಕ್ತಿಗಳಿಗೆ ಅಶುಭ ಫಲ. ಐಟಿ ಉದ್ಯೋಗದಲ್ಲಿರುವವರು ಎಚ್ಚರದಿಂದಿರಿ..!

ದಿನಾOಕ : 21.೦9.2024

ವಾರ: ಶನಿವಾರ

ನಕ್ಷತ್ರ : ಅಶ್ವಿನಿ

ತಿಥಿ : ಚೌತಿ

ಇಂದಿನ ವಿಶೇಷ : ಸಂಕಷ್ಟ ಚತುರ್ಥಿ

ಅದೃಷ್ಟ ಸಂಖ್ಯೆ : 3

ಇಂದಿನ ನಿಮ್ಮ ಭವಿಷ್ಯ ವಾಣಿ

ಮೇಷ: ಕೃಷಿಯಿಂದ ಹೆಚ್ಚು ಆದಾಯ. ಆತ್ಮವಿಶ್ವಾಸದ ಕೊರತೆಯಿಂದ ವಿಫಲರಾಗುವಿರಿ. ಕೆಲಸಗಳನ್ನು ರಹಸ್ಯವಾಗಿಡಲು ಪ್ರಯತ್ನಿಸಿ.

ವೃಷಭ: ನಾಯಕತ್ವಕ್ಕೆ ಸಮಾನವಾದ ಸ್ಥಾನಮಾನ ಪಡೆಯುವಿರಿ. ಸಮಾಜ ಸೇವೆಯಲ್ಲಿ ತೊಡಗುವಿರಿ. ಅನಿರೀಕ್ಷಿತ ಧನ ಲಾಭವಾಗಲಿದೆ.

ಮಿಥುನ: ಜವಾಬ್ದಾರಿಗಳನ್ನು ಜಾಣ್ಮಯಿಂದ ನಿರ್ವಹಿಸುವಿರಿ. ಮುದ್ರಣ ಕ್ಷೇತ್ರದವರಿಗೆ ಲಾಭದಲ್ಲಿ ಕುಸಿತ. ಮಕ್ಕಳ ಬಗ್ಗೆ ಗಮನಹರಿಸಿ.

ಕಟಕ: ಸಾಹಿತ್ಯ, ಸಂಗೀತಶಾಸ್ತ್ರಜ್ಞರಿಗೆ ಗೌರವ. ಸರ್ಕಾರಿ ನೌಕರಸ್ಥರಿಗೆ ಒತ್ತಡ. ಹಿತಶತ್ರುಗಳ ಕಾಟ ತಪ್ಪಲು ಕುಲದೇವರನ್ನು ಆರಾಧಿಸಿ.

ಸಿಂಹ: ಸಾಮಾಜಿಕ ಜನಪ್ರಿಯತೆ ಹೆಚ್ಚಾಗಲಿದೆ. ನಿರೀಕ್ಷಿತ ಬದಲಾವಣೆಗಳು ಕಂಡು ಬರುತವೆ. ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ.

ಕನ್ಯಾ: ಕೃಷಿಕರಿಗೆ ಖರೀದಿಯಲ್ಲಿ ಮೋಸವಾಗುವ ಸಾಧ್ಯತೆ. ದ್ರವರೂಪದ ಉತ್ಪನ್ನ ವ್ಯಾಪಾರದಲ್ಲಿ ಲಾಭ. ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ.

ತುಲಾ: ವಿದ್ಯಾರ್ಥಿಗಳಿಗೆ ಶುಭದಾಯಕ ದಿನವಲ್ಲ. ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ ಇದೆ. ಕೌಟುಂಬಿಕ ವಿಚಾರದಲ್ಲಿ ಎಚ್ಚರವಿರಲಿ.

ವೃಶ್ಚಿಕ: ಉಪನ್ಯಾಸಕರಿಗೆ ಖರ್ಚಿನಲ್ಲಿ ಹಿಡಿತವಿರಲಿ. ಅಧಿಕಾರಿಗಳಿಂದ ಪೋತ್ಸಾಹ ದೊರೆಯಲಿದೆ. ಆರೋಗ್ಯದ ವಿಷಯದಲ್ಲಿ ನೆಮ್ಮದಿ.

ಧನಸ್ಸು: ಲೆಕ್ಕ ಪರಿಶೋಧಕರಿಗೆ ಲಾಭ. ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ. ಸಹೋದ್ಯೋಗಿಗಳೊಂದಿಗೆ ಬಾಂಧವ್ಯ ವೃದ್ಧಿ. ಅಶುಭ ಸುದ್ದಿ.

ಮಕರ: ಅವಿವಾಹಿತರಿಗೆ ವಿವಾಹ ಯೋಗ. ಹಣದ ನಿರ್ವಹಣೆಯಲ್ಲಿ ವೈಫಲ್ಯ ಉಂಟಾಗಬಹುದು. ಒಡಹುಟ್ಟಿದವರಿಗೆ ಸಹಾಯ ಮಾಡುವಿರಿ.

ಕುಂಭ: ಐಟಿ ಉದ್ಯೋಗದಲ್ಲಿರುವವರು ಎಚ್ಚರದಿಂದಿರಿ. ದಿನಸಿ ವ್ಯಾಪಾರಿಗಳಿಗೆ ಖರ್ಚು ವೆಚ್ಚ ಅಧಿಕ. ಭೂ ಖರೀದಿ ವಿಚಾರದಲ್ಲಿ ಎಚ್ಚರ. ಮೀನ: ಸಗಟು ವ್ಯವಹಾರಗಳಲ್ಲಿ ಹೆಚ್ಚು ಲಾಭ ಬರದು. ಧಾರ್ಮಿಕ ವಿಷಯಗಳಲ್ಲಿ ಒಲವು. ರಾಜಕೀಯ ವ್ಯಕ್ತಿಗಳಿಗೆ ಅಶುಭ ಫಲ.

Leave a Reply

Your email address will not be published. Required fields are marked *