Operation Sindoor || Pakistanನಕ್ಕೆ ಕೊಂಚವೂ ಸುಳಿವು ಕೊಡದೇ India ದಾಳಿ ಮಾಡಿದ್ದೇಗೆ ಗೊತ್ತಾ?

Operation Sindoor || Pakistanನಕ್ಕೆ ಕೊಂಚವೂ ಸುಳಿವು ಕೊಡದೇ India ದಾಳಿ ಮಾಡಿದ್ದೇಗೆ ಗೊತ್ತಾ?

ಪಹಲ್ಗಾಮ್ ದಾಳಿ ಆದಾಗಿನಿಂದಲೂ ಇಡೀ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರನ್ನು ಸೆದೆ ಬಡಿಯಬೇಕು, ಅಮಾಯಕರನ್ನು ಬಲಿ ತೆಗೆದುಕೊಂಡವರ ಹುಟ್ಟಡಗಿಸಬೇಕು ಎಂದು ತುದಿಗಾಲಲ್ಲಿ ನಿಂತಿದ್ದರು. ಈ ಬಗ್ಗೆ ಪ್ರಧಾನಿ ಮೋದಿ ದೇಶದ ಜನರಿಗೆ ಪ್ರತಿಜ್ಞೆ ಕೂಡ ಮಾಡಿದ್ದರು. ಪಾಕಿಸ್ತಾನದ ವಿರುದ್ಧ ಹಲವಾರು ಕ್ರಮಗಳನ್ನು ಕೈಗೊಂಡರು. ಅದರಂತೆ ಕೊನೆಗೂ ಮೋದಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ರಾತ್ರೋರಾತ್ರಿ ಭಯೋತ್ಪಾದಕರ ತವರು ಪಾಕಿಸ್ತಾನಕ್ಕೆ ನುಗ್ಗಿ ಅವರನ್ನು ಧ್ವಂಸ ಮಾಡಿದ್ದಾರೆ.

ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕೆಲವೇ ಗಂಟೆಗಳಲ್ಲಿ, ತಮ್ಮ ಸೌದಿ ಪ್ರವಾಸವನ್ನು ಮೊಟಕುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ಬಂದು ಇದರ ಪ್ರತೀಕಾರ ಮತ್ತು ನ್ಯಾಯಕ್ಕಾಗಿ ಪ್ರತಿಜ್ಞೆ ಮಾಡಿದರು. ಕಾಶ್ಮೀರದಲ್ಲಿ 26 ಜನರ ಹತ್ಯಾಕಾಂಡವು ಹಲವಾರು ರಾಜತಾಂತ್ರಿಕ ಕ್ರಮಗಳಿಗೆ ಕಾರಣವಾಯಿತು, ಆದರೆ ಪಾಯಿಂಟ್-ಬ್ಲಾಂಕ್ ಹೆಡ್ಶಾಟ್ಗಳು ಮತ್ತು ಧರ್ಮದ ಆಧಾರದ ಹತ್ಯೆ ಬಗ್ಗೆ ಸೇಡು ತೀರಿಸಿಕೊಳ್ಳಲು ಭಾರತೀಯರ ಕಾಯುತ್ತಿದ್ದರು. ಅಂತೂ ಆ ಸಮಯ ಬಂದೇ ಬಿಡ್ತು.

ಪ್ರಧಾನಿ ನರೇಂದ್ರ ಮೋದಿ ಉನ್ನತ ರಕ್ಷಣಾ ಅಧಿಕಾರಿಗಳು ಮತ್ತು ಮಂತ್ರಿಗಳೊಂದಿಗೆ ಹಲವಾರು ಮುಚ್ಚಿದ ಬಾಗಿಲಿನ ಸಭೆಗಳನ್ನು ನಡೆಸಿದ್ದರೂ ಸಹ, ಅವರು ವಿಶೇಷವಾಗಿ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಒಂದು ಕೆಲಸವನ್ನು ಮಾಡುತ್ತಲೇ ಇದ್ದರು. ಹಲವು ಕಾರ್ಯಕ್ರಮಗಳಿಗೆ ಹಾಜರಾಗುವುದು, ಯೋಜನೆಗಳನ್ನು ಉದ್ಘಾಟಿಸುವುದು ಮತ್ತು ಭಾರತದಲ್ಲಿ ಎಂದಿನಂತೆ ವಿಷಯಗಳು ನಡೆಯುತ್ತಿವೆ ಎಂದು ತೋರಿಸಲು ವ್ಯಾಪಾರ ಒಪ್ಪಂದವನ್ನು ಘೋಷಿಸುವುದು ಹೀಗೆ ನಿರಂತರ ಕೆಲಸದಲ್ಲಿ ತೊಡಗಿದ್ದರು.

ಇದರ ಉಪಕ್ರಮವಾಗಿ ದೇಶದಲ್ಲಿ ಮೇ.7 ರಂದು ಗೃಹ ಸಚಿವಾಲಯವು ಭದ್ರತಾ ಕವಾಯತನ್ನು ಘೋಷಿಸಿತ್ತು. ಹೀಗಾಗಿ ಭಾರತವು ಇನ್ನೂ ತನ್ನ ಪ್ರತಿಕ್ರಿಯೆಗಾಗಿ ಕೆಲಸ ಮಾಡುತ್ತಿದೆ ಎಂದು ಪಾಕಿಸ್ತಾನಕ್ಕೆ ತೋರಿಸಿತು. ಆದರೆ ಇದೆಲ್ಲವೂ ಆಪರೇಷನ್ ಸಿಂಧೂರ್ ಚಾಲನೆಯಲ್ಲಿರುವಾಗ ಪಾಕಿಸ್ತಾನವನ್ನು ಬೇರತ್ತ ಗಮನ ಹರಿಸಲು ಭಾರತ ಸರ್ಕಾರ ತಂತ್ರ ಹೆಣೆದಿತ್ತು ಎನ್ನಲಾಗಿದೆ

‘ಆಪರೇಷನ್ ಸಿಂಧೂರ್’ಗೆ ಭಯೋತ್ಪಾದಕರ ತಾಣಗಳು ಪೀಸ್ ಪೀಸ್

ಬುಧವಾರ ಬೆಳಗಿನ ಜಾವ ಭಾರತ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ದಾಳಿ ಮಾಡಿದಾಗ, ಪಾಕಿಸ್ತಾನ ಅನಿರೀಕ್ಷಿತವಾಗಿ ಸಿಕ್ಕಿಹಾಕಿಕೊಂಡಿತು. ಭಯೋತ್ಪಾದಕರ ಅಡುಗುತಾಣಗಳು ಪೀಸ್ ಪೀಸ್ ಆದವು. ಉಗ್ರರ ಮಾರಣ ಹೋಮವಾಯಿತು. ಇದಕ್ಕೆ ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಸಕ್ಕತ್ ಪ್ಲಾನ್ ಮಾಡಿದ್ದರು.

‘ಆಪರೇಷನ್ ಸಿಂಧೂರ್’ಗೆ ಮುನ್ನ ಪಾಕಿಸ್ತಾನಕ್ಕೆ ಸುಳಿವು ಕೊಡದ ಹಾಗೇ ನೋಡಿಕೊಂಡ ಮೋದಿ ಸೂತ್ರಗಳಿವು!

* ಮುಂಬೈನಲ್ಲಿ ವೇವ್ಸ್: ಪ್ರಧಾನಿ ಮೋದಿ ಮೇ 1 ರಂದು ವಿಶ್ವ ಆಡಿಯೋ ವಿಶುವಲ್ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) 2025 ರಲ್ಲಿ ಭಾಗವಹಿಸಿದ್ದರು, ಅಲ್ಲಿ ಅವರು ಭಾರತದ ಆರ್ಥಿಕತೆಯ ಉದಯವನ್ನು ಘೋಷಿಸಿದರು, ಸಂಗೀತ, ಚಲನಚಿತ್ರಗಳು, ಆಹಾರ, ಗೇಮಿಂಗ್ ಮತ್ತು ಅನಿಮೇಷನ್ ಅನ್ನು ಒಳಗೊಂಡ ಸೃಜನಶೀಲ ಆರ್ಥಿಕತೆಯನ್ನು ಘೋಷಣೆ ಮಾಡಿದರು.

* ತಿರುವನಂತಪುರದಲ್ಲಿ ಬಂದರು ಉದ್ಘಾಟನೆ: ಮೇ 2 ರಂದು ಪ್ರಧಾನಿ ಮೋದಿ ಅವರು 8,800 ಕೋಟಿ ರೂ. ವೆಚ್ಚದ ವಿಳಿಂಜಂ ಅಂತರರಾಷ್ಟ್ರೀಯ ಆಳ ನೀರಿನ ಬಹುಪಯೋಗಿ ಬಂದರನ್ನು ರಾಷ್ಟ್ರಕ್ಕೆ ಅರ್ಪಿಸಿದರು. ಭಾರತದ ಹಣ ಈಗ ಭಾರತಕ್ಕೆ ಸೇವೆ ಸಲ್ಲಿಸುತ್ತದೆ ಮತ್ತು ಒಂದು ಕಾಲದಲ್ಲಿ ದೇಶದ ಹೊರಗೆ ಹರಿಯುತ್ತಿದ್ದ ನಿಧಿಗಳು ಈಗ ಕೇರಳ ಮತ್ತು ವಿಳಿಂಜಂ ಜನರಿಗೆ ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಅವರು ಪ್ರತಿಪಾದಿಸಿದರು.

* ಅಣಕು ಕಸರತ್ತುಗಳು: “ಪರಿಣಾಮಕಾರಿ ನಾಗರಿಕ ರಕ್ಷಣೆ” ಗಾಗಿ ಮೇ 7 ರಂದು ದೇಶಾದ್ಯಂತ 244 ಜಿಲ್ಲೆಗಳಲ್ಲಿ ಅಣಕು ಕಸರತ್ತುಗಳನ್ನು ನಡೆಸಲು ಕೇಂದ್ರ ಗೃಹ ಸಚಿವಾಲಯ ಮೇ 5 ರಂದು ಆದೇಶಿಸಿತ್ತು. ಎಲ್ಲಾ ಸರ್ಕಾರಿ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳು ಇದರ ಬಗ್ಗೆ ಪೋಸ್ಟ್ ಮಾಡಿತ್ತು.

* ಭಾರತ-ಯುಕೆ FTA: ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ಪ್ರಧಾನ ಮಂತ್ರಿಗಳು ಮೇ 6 ರಂದು ಎರಡೂ ರಾಷ್ಟ್ರಗಳು ಮುಕ್ತ ವ್ಯಾಪಾರ ಒಪ್ಪಂದವನ್ನು ಪೂರ್ಣಗೊಳಿಸಿವೆ ಎಂದು ಘೋಷಿಸಿದರು . ಡಬಲ್ ಕಾಂಟ್ರಿಬ್ಯೂಷನ್ ಸಮಾವೇಶದೊಂದಿಗೆ ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದದ ಯಶಸ್ವಿ ತೀರ್ಮಾನವನ್ನು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಸ್ವಾಗತಿಸಿದ್ದರು.

* ಮಾಧ್ಯಮ ಶೃಂಗಸಭೆ: ಮೇ 6 ರಂದು ಮೋದಿ ಟಿವಿ ಸುದ್ದಿ ವಾಹಿನಿಯ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದರು.

* ವಿದೇಶಾಂಗ ಸಚಿವಾಲಯ: ಪ್ರಧಾನಿ ಮೋದಿಯವರ ಮುಂದಿನ ಭೇಟಿಗೆ ವಿದೇಶಾಂಗ ಸಚಿವಾಲಯ ಸಿದ್ಧತೆ ನಡೆಸುತ್ತಲೇ ಇದ್ದಾಗ, ಪತ್ರಕರ್ತರು ಮತ್ತು ವಿದೇಶಿ ಗಣ್ಯರನ್ನು ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಆಹ್ವಾನಿಸುತ್ತಲೇ ಇತ್ತು.

* ಕಾರ್ಯತಂತ್ರದ ಮೌನ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ವಿದೇಶಾಂಗ ಇಲಾಖೆ ಮತ್ತು ರಕ್ಷಣಾ ಪಡೆಗಳು ಮೌನವನ್ನು ಕಾಯ್ದುಕೊಂಡಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನದ ‘ಮುಚ್ಚಿದ ಬಾಗಿಲಿನ ಮಾಹಿತಿ’ಗೆ ವಿದೇಶಾಂಗ ಇಲಾಖೆಯು ಇನ್ನೂ ಪ್ರತಿಕ್ರಿಯಿಸಿರಲಿಲ್ಲ.

Leave a Reply

Your email address will not be published. Required fields are marked *