ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ವಿಷ್ಣುವರ್ಧನ್ ಸಮಾಧಿಯನ್ನು ಕೆಲವು ದಿನಗಳ ಹಿಂದೆ ನೆಲಸಮ ಮಾಡಲಾಯಿತು. ಆ ಬಳಿಕ ವಿಷ್ಣುವರ್ಧನ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅನಿರುದ್ಧ್ ಜತ್ಕರ್ ಅವರ ನಿವಾಸದಲ್ಲಿ ಇಂದು (ಆಗಸ್ಟ್ 17) ಈ ಕುರಿತು ಅಭಿಮಾನಿಗಳ ಸಭೆ ಮಾಡಲಾಗಿದೆ.
‘ಕುಟುಂಬದವರ ಮಾತಿಗೆ ನಾವು ಬದ್ಧರಾಗಿ ಇರುತ್ತೇವೆ. ಯಾವುದೇ ಕಾರಣಕ್ಕೂ ನಾವು ಬೇರೆ ಜಾಗ ಕೇಳಲ್ಲ. ಆ ಜಾಗವನ್ನೇ ಖರೀದಿ ಮಾಡಬೇಕು ಎಂದರೂ ನಾವು ತಲಾ 1 ಲಕ್ಷ ರೂಪಾಯಿ ನೀಡಲು ಸಿದ್ಧರಾಗಿದ್ದೇವೆ. ಪುಣ್ಯಭೂಮಿಗೆ ಅದೇ ಜಾಗ ಬೇಕಾಗುತ್ತದೆ’ ಎಂದು ವಿಷ್ಣುವರ್ಧನ್ ಫ್ಯಾನ್ಸ್ ಹೇಳಿದ್ದಾರೆ.
For More Updates Join our WhatsApp Group :




