ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ದೇಗುಲದ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆದಿದ್ದು, 2.27 ಕೋಟಿ ರೂ.ಗೂ ಹೆಚ್ಚು ಹಣ ಸಂಗ್ರಹವಾಗಿದೆ. ದಸರಾ, ಮಹಾಲಯ ಅಮಾವಾಸ್ಯೆ ಹಿನ್ನೆಲೆ ಮಾದಪ್ಪನ ಹುಂಡಿ ಭರ್ತಿಯಾಗಿದ್ದು, ಎಣಿಕೆ ನಡೆಸಲಾಯಿತು.
ಕೇವಲ 28 ದಿನಕ್ಕೆ ಈ ಮೊತ್ತ ಸಂಗ್ರಹವಾಗಿದೆ. ಗುರುವಾರ ಬೆಳಗ್ಗೆಯಿಂದ ತಡರಾತ್ರಿವರೆಗೂ ಹುಂಡಿ ಎಣಿಕೆ ಕಾರ್ಯ ನಡೆಯಿತು. ನಗದು ಮಾತ್ರವಲ್ಲದೆ 46 ಗ್ರಾಂ ಚಿನ್ನ, 1.350 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಮಾದಪ್ಪನ ಹುಂಡಿಯಲ್ಲಿ 9 ವಿದೇಶಿ ನೋಟುಗಳು ಹಾಗೂ ಚಲಾವಣೆ ಇಲ್ಲದ ಎರಡು ಸಾವಿರ ಮುಖಬೆಲೆಯ 9 ನೋಟು ಸಿಕ್ಕಿವೆ.
For More Updates Join our WhatsApp Group :
