ಬೆಂಗಳೂರು: ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರು ಸೇರಿರುವ ನಿಯೋಗವೊಂದು ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಜಾತಿ ಗಣತಿಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಮನವಿ ಸಲ್ಲಿಸಿದೆ.
ಮುಖ್ಯಾಂಶಗಳು:
- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಕ್ಕಲಿಗ ನಿಯೋಗ ಮನವಿ
- ಸಮೀಕ್ಷೆಯಲ್ಲಿ ತಾಂತ್ರಿಕ ಹಾಗೂ ತಾತ್ವಿಕ ವೈಫಲ್ಯಗಳ ಆರೋಪ
- 1561 ಜಾತಿಗಳ ಪಟ್ಟಿಯಲ್ಲಿ ಸಂಶಯಾಸ್ಪದ ಸೇರ್ಪಡೆ
- ಸಮೀಕ್ಷೆ ಮುಂದೂಡಿಕೆಗಾಗಿ 45 ದಿನಗಳ猠ಆಗ್ರಹ
- ನವರಾತ್ರಿ ಹಿನ್ನಲೆಯಲ್ಲಿ ಸಮೀಕ್ಷೆ ವಿಳಂಬಕ್ಕೆ ಒತ್ತಾಯ
- ಪ್ರಮುಖ ರಾಜಕೀಯ ನಾಯಕರು, ಮಠಾಧೀಶರ ಬೆಂಬಲ
ನಿಯೋಗದ ಮುಖ್ಯಸ್ಥ ನಾಗರಾಜ್ ಯಲಚವಾಡಿ ಮಾತನಾಡಿ,
“ಈ ಸಮೀಕ್ಷೆಯಲ್ಲಿ ಯಾವುದೇ ಮಾನವಶಾಸ್ತ್ರೀಯ ಅಧ್ಯಯನವಿಲ್ಲದೆ, ಜಾತಿಗಳ ಪಟ್ಟಿಗೆ ನೇರ ಸೇರ್ಪಡೆ ನಡೆದಿದೆ. ಇದು ನ್ಯಾಯಸಮ್ಮತವಲ್ಲ. ಸಮೀಕ್ಷೆ ನಡೆಸುತ್ತಿರುವ ಸಿಬ್ಬಂದಿಗೆ ಸರಿಯಾದ ತರಬೇತಿಯೂ ನೀಡಲಾಗಿಲ್ಲ.” ಎಂದು ವಾಗ್ದಾಳಿ ನಡೆಸಿದರು.
ಒಕ್ಕಲಿಗರ ಆಕ್ಷೇಪ ಏನು?
- ಈಗಿರುವ 800 ಜಾತಿಗಳ ಪಟ್ಟಿಗೆ ಏಕಾಏಕಿ 1561 ಜಾತಿಗಳನ್ನು ಸೇರಿಸಿದ್ದು ಪ್ರಶ್ನಾರ್ಹ
- ಸರಿಯಾದ ತಯಾರಿ ಇಲ್ಲದೆ ಆರಂಭಿಸಿದ ಸಮೀಕ್ಷೆ
- ಸಮೀಕ್ಷಾ ಆ್ಯಪ್ಗಳ ಅಸಮರ್ಪಕ ಕಾರ್ಯಕ್ಷಮತೆ
- ಅಭ್ಯಾಸ ಹೊಂದದ ಸಿಬ್ಬಂದಿಯಿಂದ ಸಮೀಕ್ಷಾ ದೋಷ ಸಾಧ್ಯತೆ
- ನವರಾತ್ರಿ ಕಾಲಘಟ್ಟದಲ್ಲಿ ಸಮೀಕ್ಷೆ ನಡೆಸುವುದು ಅಸಾಧ್ಯ
ಆದಿಚುಂಚನಗಿರಿ ಶ್ರೀಗಳ ಸ್ಪಷ್ಟ ವಾದ:
“ಸಮೀಕ್ಷೆಯನ್ನು ನವರಾತ್ರಿ ನಂತರ 45 ದಿನಗಳ ಕಾಲ ನಡೆಸಬೇಕು. ಇದು ಸಮುದಾಯದ ಒಕ್ಕೂಟದ ಅಭಿಪ್ರಾಯ,” ಎಂದು ನಿರ್ಮಲಾನಂದನಾಥ ಶ್ರೀಗಳು ಶನಿವಾರದ ಸಭೆಯಲ್ಲಿ ತಿಳಿಸಿದರು.
ರಾಜಕೀಯ ಬೆಂಬಲ
ಈ ಸಭೆಯಲ್ಲಿ ಡಿಕೆ ಶಿವಕುಮಾರ್, ಹೆಚ್.ಡಿ. ಕುಮಾರಸ್ವಾಮಿ, ಆರ್. ಅಶೋಕ್, ಶೋಭಾ ಕರಂದ್ಲಾಜೆ, ಸಿ.ಟಿ. ರವಿ ಸೇರಿದಂತೆ ಅನೇಕ ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು.
ವಿಪಕ್ಷ ನಾಯಕ ಆರ್. ಅಶೋಕ್ ಅವರು,
“ಕ್ರಿಶ್ಚಿಯನ್ ಒಕ್ಕಲಿಗ ಎಂಬಂತೆ ಸಣ್ಣ ಪ್ರಶ್ನೆಗಳೂ ಬಂತು ಅಂದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ,” ಎಂದು ಎಚ್ಚರಿಕೆ ನೀಡಿದರು.
ಸಮೀಕ್ಷೆ ಆರಂಭವಾಗಿತೇನಾದರೂ…
ಒಕ್ಕಲಿಗರ ಭಾರಿ ವಿರೋಧದ ನಡುವೆಯೂ, ಜಾತಿ ಸಮೀಕ್ಷೆ ಸೋಮವಾರದಿಂದ ಆರಂಭವಾಗಿದೆ.
ಈ ಹಿನ್ನಲೆಯಲ್ಲಿ, ಖರ್ಗೆ ಈ ಮನವಿಗೆ ಯಾವ ರೀತಿಯ ಸ್ಪಂದನೆ ನೀಡುತ್ತಾರೆ ಎಂಬುದು ಗಮನಾರ್ಹ.
For More Updates Join our WhatsApp Group :




