ಅ.4ರಿಂದ ‘ಮಾರ್ಟಿನ್’ ಜಾತ್ರೆ

ಅ.4ರಿಂದ 'ಮಾರ್ಟಿನ್' ಜಾತ್ರೆ

ಕನ್ನಡ ಚಿತ್ರರಂಗವಲ್ಲದೇ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ರಿಲೀಸ್ ಆಗಲು ಸಜ್ಜುಗೊಂಡಿರುವ ಸಿನಿಮಾ ‘ಮಾರ್ಟಿನ್’. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿರುವ ‘ಮಾರ್ಟಿನ್’ ಚಿತ್ರದ ಟ್ರೈಲರ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ‘ಪೊಗರು’ ಹುಡುಗನ ಎಂಟ್ರಿಗೆ ಅಭಿಮಾನಿ ಬಳಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ.

ಚಿತ್ರದ ಬಿಡುಗಡೆಗೆ ಇನ್ನೂ 9 ದಿನಗಳು ಬಾಕಿ ಇರುವಾಗಲೇ ‘ಮಾರ್ಟಿನ್’ ಚಿತ್ರತಂಡ ಹೊಸ ಅಪ್ಡೇಟ್ ನೀಡಿದೆ. ನಾಯಕ ಧ್ರುವ ಸರ್ಜಾ, ನಟಿ ವೈಭವಿ ಶಾಂಡಿಲ್ಯಾ, ಚಿಕ್ಕಣ್ಣ, ನಿರ್ಮಾಪಕ ಉದಯ್ ಮೆಹ್ತಾ, ಕ್ಯಾಮರಾಮನ್ ಸತ್ಯ ಹೆಗ್ಡೆ, ಕಲಾ ನಿರ್ದೇಶಕ ಮೋಹನ್ ಬಿ.ಕೆರೆ, ನೃತ್ಯ ಸಂಯೋಜಕರಾದ ಮುರಳಿ ಹಾಗೂ ಇಮ್ರಾನ್ ಸರ್ದಾರಿಯಾ ಸೇರಿದಂತೆ ಮಾರ್ಟಿನ್ ತಂಡ ಕೆಲ ವಿಚಾರಗಳನ್ನು ಹಂಚಿಕೊಂಡಿದೆ.

‘ನಮ್ಮ ಮಾರ್ಟಿನ್ ಚಿತ್ರದಲ್ಲಿ ಕ್ಯಾಮರಾಮನ್ ಸತ್ಯ ಹೆಗ್ಡೆ, ಡ್ಯಾನ್ಸ್ ಮಾಸ್ಟರ್ಗಳಾದ ಮುರಳಿ, ಇಮ್ರಾನ್ ಸರ್ದಾರಿಯಾ ಕೆಲಸ ಅದ್ಭುತವಾಗಿದೆ. ಸಿನಿಮಾವು ಬಹುಕೋಟಿ ವೆಚ್ಚದಲ್ಲಿ ಆಗುತ್ತಿರುವುದಕ್ಕೆ ನಿರ್ಮಾಪಕ ಉದಯ್ ಸರ್ ಕಾರಣ. ಬಜೆಟ್ ಬಗ್ಗೆ ತಲೆಕೆಡಿಸಿಕೊಳ್ಳದೇ, ತಾನು ಹಾಕಿದ ಹಣ ವಾಪಸ್ ಬರುತ್ತೆ ಎಂಬ ನಂಬಿಕೆಯಲ್ಲಿ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಬೇಕು” ಎಂದು ಧ್ರುವ ಸರ್ಜಾ ಹೇಳಿದರು.

ಮಾರ್ಟಿನ್ ಚಿತ್ರದ ಬಗ್ಗೆ ಒಂದೊಂದು ದಿನ ಒಂದೊಂದು ರೀತಿಯಲ್ಲಿ ಅಪ್ಡೇಟ್ ಕೊಡುತ್ತೇವೆ. ಅ.4ರಂದು ಹೈದರಾಬಾದ್ನಲ್ಲಿ ಹೊಸ ಹಾಡು ರಿಲೀಸ್ ಆಗುತ್ತಿದೆ. ಅ.5ರಂದು ಮಾರ್ಟಿನ್ ಚಿತ್ರದ ಬಗ್ಗೆ ಪ್ರೆಸ್ಮೀಟ್ ಜೊತೆಗೆ ಫ್ಯಾನ್ ಮೀಟ್ ಇರಲಿದೆ. ಯಾಕೆಂದರೆ, ಉತ್ತರ ಕರ್ನಾಟಕದ ಅಭಿಮಾನಿಗಳೇ ನನ್ನ ಅನ್ನದಾತರು. ನನ್ನ ಸಿನಿಮಾಗಳನ್ನು ಹೌಸ್ಫುಲ್ ಮಾಡಿಸಿದ್ದಾರೆ. ಅದಕ್ಕಾಗಿ ಹುಬ್ಬಳ್ಳಿಗೆ ಹೋಗುತ್ತೇವೆ” ಎಂದರು.

”ಅಕ್ಟೋಬರ್ 6ರಂದು ನನ್ನ ಬರ್ತ್ಡೇ ದಿನ ದಾವಣಗೆರೆಯಲ್ಲಿ ಚಿತ್ರದ ರಿಲೀಸ್ ಇವೆಂಟ್ ಇರಲಿದೆ. ಇದರ ಜೊತೆಗೆ ಒಂದು ಸ್ಪೆಷಲ್ ಹಾಡು ಕೂಡ ಬಿಡುಗಡೆ ಮಾಡಲಾಗುವುದು. ಅ.8ರಂದು ಮುಂಬೈನಲ್ಲಿ ಪ್ರೆಸ್ ಮೀಟ್ ಜೊತೆಗೆ, ಅಲ್ಲಿಯೂ ಒಂದು ಸಾಂಗ್ ರಿಲೀಸ್ ಆಗಲಿದೆ. ಅ.11ರಂದು ಸಿನಿಮಾ ಬಿಡುಗಡೆ ಆಗುತ್ತೆ. ಎಲ್ಲರೂ ಬಂದು ಸಿನಿಮಾ ನೋಡಿ, ಮಾರ್ಟಿನ್ ನಿಮಗೆ ಬೇಸರ ಮಾಡಲ್ಲ. ಯಾಕೆಂದರೆ ನಮ್ಮ ಅರ್ಜುನ್ ಮಾವ ಕಥೆ ಬರೆದಿರುವುದು” ಎಂದು ಧ್ರುವ ಚಿತ್ರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *