ನಾಗೇಂದ್ರ ಮಾಡಿದ ವಂಚನೆಯ ಕಿರು ಪುಸ್ತಕ ಮಾಡಿ ಹಂಚುತ್ತೇನೆ: ಜನಾರ್ದನ ರೆಡ್ಡಿ

ನಾಗೇಂದ್ರ ಮಾಡಿದ ವಂಚನೆಯ ಕಿರು ಪುಸ್ತಕ ಮಾಡಿ ಹಂಚುತ್ತೇನೆ: ಜನಾರ್ದನ ರೆಡ್ಡಿ

ಬಳ್ಳಾರಿ: ಬಿ ನಾಗೇಂದ್ರ ಅವರು ಸರ್ಕಾರದ ಕೋಟಿ ಕೋಟಿ ರೂ. ಹಣವನ್ನು ಲೂಟಿ ಮಾಡಿದ್ದಾರೆ. ಅವರು ವಂಚನೆ ಮಾಡಿದ್ದನ್ನು ಕಿರು ಪುಸ್ತಕ ಮಾಡಿ ಹಂಚುತ್ತೇನೆ. ಚಾರ್ಜ್ ಶೀಟ್ ಅಂಶಗಳನ್ನು ಕೆಲವೇ ದಿನಗಳಲ್ಲಿ ಬುಕ್ಲೆಟ್ ಮಾಡಿ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಸಂಡೂರಿಬಲ್ಲಿ ಗೃಹ ಪ್ರವೇಶ ಮಾಡಿದ ಬಳಿಕ ನಾಗೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾಗೇಂದ್ರ ನಿನ್ನೆ ಕಣ್ಣೀರು ಹಾಕಿದ್ದರು. ಅವರು ಹಾಕಿರೋ ಕಣ್ಣೀರು ಪಶ್ಚಾತಾಪದ ಕಣ್ಣೀರು. ನಾಗೇಂದ್ರ ಅವರನ್ನು ರಾಜಕೀಯವಾಗಿ ಬೆಳೆಸಿದ್ದು ನಾವು. ಆದರೆ ಇಂತಹವರನ್ನು ನಾವು ಬೆಳೆಸಿದ್ದೇವಾ ಎಂಬ ಪಶ್ಚಾತಾಪ ಕಾಡುತ್ತಿದೆ ಎಂದರು.

ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ಗೆ ಬಿದ್ದಿದ್ದಾರೆ. ಕಾಂಗ್ರೆಸ್ ನಾಗೇಂದ್ರ ಅವರನ್ನು ಸಂಪೂರ್ಣ ಬಳಕೆ ಮಾಡಿಕೊಂಡಿದೆ. ಅವರಿಗೆ ಮಾಡಿದ ಪಾಪಕ್ಕೆ ಪಶ್ಚಾತಾಪ ಕಾಡುತ್ತಿದೆ. ಹೀಗಾಗಿ ಕಣ್ಣೀರು ಹಾಕಿದ್ದಾರೆ. ಸರ್ಕಾರಿ ನೌಕರ ಸತ್ಯ ಹೇಳಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾರು ಕೂಡಾ ಸುಳ್ಳು ಹೇಳಿ ಆತ್ಮಹತ್ಯೆ ಮಾಡಿಕೊಳ್ಳಲ್ಲ. ಈಗ ನಾಗೇಂದ್ರ ಏನು ಹೇಳಿದರೂ ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *