ತುಮಕೂರು || ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಗಲಿಕೆ ಶ್ರೀ ಸಿದ್ಧಲಿಂಗ ಶ್ರೀ ಸಂತಾಪ

ತುಮಕೂರು || ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಗಲಿಕೆ ಶ್ರೀ ಸಿದ್ಧಲಿಂಗ ಶ್ರೀ ಸಂತಾಪ

ತುಮಕೂರು: ದೇಶ ಕಂಡಂತಹ ಒಬ್ಬ ಶ್ರೇಷ್ಠ ಅರ್ಥ ಶಾಸ್ತ್ರಜ್ಞ ಮನಮೋಹನ್ ಸಿಂಗ್.  ರಾಜಕೀಯ ಮುಸ್ಸದ್ದಿ, ನಮ್ಮ ದೇಶದ ಆರ್ಥಿಕ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ಕೊಟ್ಟವರು.

ಅವರ ಅಗಲಿಕೆ ಇಡೀ ದೇಶಕ್ಕೆ ತುಂಬಲಾರದ ನಷ್ಟ ಆಗಿದೆ‌ ಎಂದು ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ಅವರ ಅರ್ಥಶಾಸ್ತ್ರದ ವಿಚಾರಗಳು ಕೇವಲ ನಮ್ಮ ದೇಶ ಅಷ್ಟೇ ಅಲ್ಲ. ಇಡೀ ಪ್ರಪಂಚ ಮೆಚ್ವಿಕೊಂಡಿದೆ. ಬರಾಕ್ ಓಬಾಮಾ ಕೂಡ ಅವರನ್ನು ಗುರುಗಳು ಎಂದು ಭಾವಿಸಿ ಬಂದಿದ್ದರು. ಹಾಗೇ ಟಿ.ವಿ ನರಸಿಂಹರಾವ್ ಸಂಪುಟದಲ್ಲಿ ಇವರು ಹಣಕಾಸು ಮಂತ್ರಿಗಳಾಗಿ ಬಹುದೊಡ್ಡ ಬದಲಾವಣೆ ತಂದಿದ್ದರು. ಖಾಸಗೀಕರಣ,‌ಜಾಗತೀಕರಣ, ನೀತಿ ತಂದು ಆರ್ಥಿಕ ಸುಧಾರಣೆ ಮಾಡಿದವರು. ನರೇಗಾ ಯೋಜನೆಯ ಪರಿಕಲ್ಪನೆಯಡಿ ಉದ್ಯೋಗ ಸೃಷ್ಟಿ ಮಾಡಿ, ಆರ್ಥಿಕ ಸಬಲತೆ ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲಬೇಕು. ಜೊತೆಗೆ ವಿಜ್ಞಾನ ಅಣು ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸರಳ ಜೀವನ ನಡೆಸಿ ದೇಶದ ಅತ್ಯುನ್ನತ ಪ್ರಧಾನಿ ಎಂದು ಜನಮೆಚ್ಚುಗೆ ಪಡೆದವರಾಗಿದ್ದಾರೆ. ಅವರ ಕೊಡುಗೆಗಳು ಮುಂದಿನ ಪೀಳಿಗೆಗೆ ಆದರ್ಶವಾಗಿದೆ. ಅವರ ಅಗಲಿಕೆ ಅವರ ಕುಟುಂಬಕ್ಕೆ ಮಾತ್ರ  ಸೀಮಿತ ಅಲ್ಲ. ಇಡೀ ದೇಶಕ್ಕೆ ಅವರ ಅಗಲಿಕೆಯಿಂದ ದುಃಖ ಉಂಟಾಗಿದೆ. ನಾವೆಲ್ಲಾ ಕೂಡಾ ಅವರ ಅಗಲಿಕೆ ನಮ್ಮ ನಮ್ಮ ಶ್ರದ್ಧಾಂಜಲಿಯನ್ನ ಅತ್ಯಂತ ಅಭಿಮಾನದಿಂದ ಸಲ್ಲಿಸುವುದರ ಜೊತೆಗೆ ಅವರ ಸೇವೆಯನ್ನ ಸ್ಮರಿಸಬೇಕು. ಅಗಲಿಕೆಯನ್ನ ಭರಿಸುವ ಶಕ್ತಿಯನ್ನ ಅವರ ಕುಟುಂಬಕ್ಕೆ ಭಗವಂತ‌ ಕೊಡಲಿ ಅಂತ ಪ್ರಾರ್ಥಿಸೋಣ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *