ಕೋಲಾರ: ಕೋರ್ಟ್ ಅನುಮತಿ ಬಳಿಕ ಕೋಲಾರದಲ್ಲಿ ಕೊನೆಗೂ ಆರ್ಎಸ್ಎಸ್ ಪಥ ಸಂಚನಲ (RSS March Past) ನಡೆಸಿದೆ.
ಆರ್ಎಸ್ಎಸ್ ಶತಮಾನೋತ್ಸವ ಹಿನ್ನೆಲೆಯಲ್ಲಿ ವಕ್ಕಲೇರಿಯಿಂದ ಕೋಲಾರ ನಗರದವರೆಗೆ (Kolara City) 16 ಕಿಮೀ ಪಥ ಸಂಚಲನ ನಡೆಯಿತು. ಕೋಲಾರದ ಕ್ಲಾಕ್ ಟವರ್, ಟ್ರಯಾಂಗಲ್ ಸರ್ಕಲ್, ಪಲ್ಲವಿ ಸರ್ಕಲ್ನಲ್ಲಿ ಸರ ಸಂಘಚಾಲಕರು ಪಥಸಂಚಲನ ನಡೆಸಿದರು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಆರ್ಎಸ್ಎಸ್ ಕಾರ್ಯಕರ್ತರು ಬಂದಿದ್ದರು. ಪಥ ಸಂಚಲನ ಹಿನ್ನೆಲೆ ಮಾರ್ಗದುದ್ದಕ್ಕೂ ಸುಮಾರು 1,000 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇದಾಜ್ಷೆ ಜಾರಿಗೊಳಿಸಲಾಗಿತ್ತು.
ಅತ್ತ, ಬೆಳಗಾವಿಯಲ್ಲಿ ಸಂಭಾಜಿ ಮಹಾರಾಜರ ಮೂರ್ತಿ ಲೋಕಾರ್ಪಣೆ ವಿವಾದವಾಗಿದೆ. ಸರ್ಕಾರದಿಂದ ನಿರ್ಮಾಣವಾಗಿರುವ ಮೂರ್ತಿಯನ್ನು ಉಸ್ತುವಾರಿ ಸತೀಶ್ ಜಾರಕಿಹೊಳಿ ಉದ್ಘಾಟನೆಗೆ ಮುಂದಾಗಿದ್ದರು. ಆದರೆ, ಈ ಕ್ಷೇತ್ರ ಬಿಜೆಪಿ ಶಾಸಕ ಅಭಯ್ ಪಾಟೀಲ್, ಬಿಜೆಪಿ ಮೇಯರ್ ಸವಿತಾ ಕಾಂಬಳೆ ನಾವೇ ಲೋಕಾರ್ಪಣೆ ಮಾಡ್ತೇವೆ ಅಂತ ಪಟ್ಟು ಹಿಡಿದು, ಅಧಿಕಾರಿಗಳು ಕಟ್ಟಿದ್ದ ಪರದೆಯನ್ನು ಒತ್ತಾಯಪೂರ್ವಕವಾಗಿ ತೆಗೆದಿದ್ದಾರೆ.