ಮಂಡ್ಯ: ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನಮ್ಮ ನಾಡಿನ ಕೆಲವೇ ಸುಸಂಸ್ಕತ ರಾಜಕಾರಣಿಗಳಲ್ಲಿ ಒಬ್ಬರು. ವಿದೇಶದಲ್ಲಿ ಅಧ್ಯಯನ ಮಾಡಿ ಅಲ್ಲೇ ಕೆಲಸ ಕೂಡ ಮಾಡಿಕೊಂಡಿದ್ದರು. ಆದರೆ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದಾರೆ. ಶಾಸಕ ರಾದ ಮೇಲೆ ತನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ, ವಿದ್ಯಾರ್ಥಿಗಳ ದೆಸೆಯಿಂದಲು ಉತ್ತಮ ಶೈಕ್ಷಣಿಕ ಅಭಿವೃದ್ಧಿಗೆ ತೊಡಗಿಕೊಂಡಿದ್ದಾರೆ.
ಶಾಸಕರಾಗಿರುವ ಅವರು ಕ್ಷೇತ್ರದ ತಣ್ಣೂರಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಧಿಡೀರ್ ಭೇಟಿ ನೀಡಿ ಅಲ್ಲ್ಲಿನ ಆಡಳಿತ ಹಾಗೂ ಅವ್ಯವಸ್ಥೆಯ ಬಗ್ಗೆಪರಿಶೀಲನೆ ನಡೆಸಿದ್ದಾರೆ. ವಾರ್ಡ್ನ್ ಅವರ ವಿರುದ್ಧ ಗುಡಿಗಿದ್ದಾರೆ.
ವಸತಿ ನಿಯಕ್ಕೆ ಬಾರದ ವಾರ್ಡನ್ ವಿರುದ್ಧ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗರಂ
ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ವಾಡರ್ನ್ ಅನುಪಸ್ಥಿಯ ಬ್ಗಗೆ ಸ್ವ ವಿವರವಾಗಿ ಹೇಳಿಕೊಂಡಿದ್ದಾರೆ. ಹಾಸ್ಟೆಲ್ ವಾರ್ಡನ್ ಯಾವಾಗಲೋ ಒಮ್ಮೆ ಬರುತ್ತಾರಂತೆ ಮತ್ತು ಮಕ್ಕಳನ್ನು ನೋಡಿಕೊಳ್ಳಲು ತನ್ನ ತಾಯಿಯನ್ನು ಅಲ್ಲಿ ಬಿಟ್ಟಿರುತ್ತಾರೆ. ವಾರ್ಡ್ನ್ನಿನ ತಾಯಿ ಮಕ್ಕಳಿಗೆ ಮನಬಂದAತೆ ಬಯ್ಯುವುದು ಮತ್ತು ಗದರುತ್ತಾಳೆ. ವಾರ್ಡ್ನ್ ಇಲ್ಲದೆ ಮಕ್ಕಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತಿದ್ದು, ಅವರ ವೈಯಕ್ತಿಕ ಸಮಸ್ಯೆಗಳನ್ನು ಯಾರ ಬಳಿ ಹೇಳುವುದು ಎಂಬುದು ತಿಳಿಯುತ್ತಿಲ್ಲ ಎಂದು ದೂರಿದ್ದಾರೆ.
ಮಕ್ಕಳ ದೂರುಗಳನ್ನು ಆಲಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ವಾರ್ಡನ್ಗೆ ನೇರವಾಗಿ ಕರೆ ಮಾಡಿ ವಸತಿ ನಿಲಯದ ಬಗ್ಗೆ ವಿಚಾರಿಸಿದ್ದಾರೆ. ಶಾಸಕರು ವಸತಿ ನಿಲಯದಲ್ಲೆ ನಿಂತು ಬೇರೆಲ್ಲೋ ಇರುವ ವಾರ್ಡನ್ಗೆ ತರಾಟೆ ತೆಗೆದು ಕೊಂಡಿದ್ದಾರೆ. ವಸತಿ ನಿಲಯಕ್ಕೆ ಬಂದರೆ ಕಾಲು ಮುರಿಯುವುದಾಗಿ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ವಸತಿ ನಿಲಯದ ಆಡಳಿತ ಮತ್ತು ಅಲ್ಲಿನ ಮಕ್ಕಳ ಅಳಲನ್ನು ಆಲಿಸಿದ ಶಾಸಕ ಮುಂದಿನ ಯೋಜನೆಗಳ ಬಗ್ಗೆ ಸಮಾಲೋಚಿಸಿ ಕ್ರಮ ಕೈ ಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.