ತುಮಕೂರು: ಎರಡನೇ ಅಂತಾರಾಷ್ಟ್ರೀಯ ನಿರ್ಮಣದ ವಿಚಾರ ರಾಜ್ಯ ರಾಜಕಾರಣದಲ್ಲಿ ಈಗ ಭಿನ್ನ ಮತವನ್ನು ಸೃಷ್ಠಿಸಿದೆ. ಸಚಿವರು, ಶಾಸಕರ ನಡುವೆ ಭಿನ್ನಮತೀಯತೆ ಆರಂಭವಾಗಿದ್ದು, ನಮ್ಮ ಭಾಗದಲ್ಲಿ ಆಗಬೇಕು ಎಂಬ ಕೂಗು ಜೋರಾಗಿ ಮೊಳಗುತ್ತಿದೆ.

ಎರಡನೇ ಏರ್ಪೋರ್ಟ್ ನ್ನು ಶಿರಾದಲ್ಲಿ ಮಾಡಬೇಕು ಎಂಬ ಅಭಿಪ್ರಾಯ ಒಂದು ಕಡೆಯಾದರೆ, ನೆಲಮಂಗಲ, ಕನಕಪುರದಲ್ಲಿ ಮಾಡಬೇಕು ಎಂದು ಒತ್ತಾಯ ಮತ್ತೊಂದು ಕಡೆಯಲ್ಲಿದೆ. ಈಗಾಗಲೇ ತಜ್ಞರ ತಂಡ ಮೂರು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಂತಿಮ ವರದಿ ಏನಾಗುತ್ತೆ ಎಂಬ ಕಾತುರತೆ ಎಲ್ಲರಲ್ಲೂ ಕಾಡುತ್ತಿದೆ.
*ಶಿರಾ, ಉತ್ತರ ಕರ್ನಾಟಕ ಶಾಸಕರ ಬೇಡಿಕೆ:-* ಕೋಟೆಗಳ ನಾಡು ಎಂದೇ ಕರೆಸಿಕೊಳ್ಳುವ
ಶಿರಾದಲ್ಲಿ ಎರಡನೇ ಏರ್ಪೋರ್ಟ್ ಮಾಡಿ ಎಂಬುವುದು ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ ನೇತೃತ್ವದ ಶಾಸಕರ ಅಭಿಪ್ರಾಯವಾಗಿದೆ. ಇದಕ್ಕೆ ಸುಮಾರು 30 ಕ್ಕೂ ಹೆಚ್ಚು ಶಾಸಕರ ಬೆಂಬಲ ಇದೆ. ಶಿರಾದಲ್ಲಿ ವಿಮಾನ ನಿಲ್ದಾಣ ಮಾಡಿ ಎಂದು ಶಾಸಕರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿದ್ದಾರೆ. ಕನಕಪುರ, ನೆಲಮಂಗಲ ಬೇಡ ಎಂಬುವುದು ಇವರ ಆಗ್ರಹವಾಗಿದೆ.
ಎರಡನೇ ಏರ್ ಪೋರ್ಟ್ ನಿಲ್ದಾಣ ನಿರ್ಮಾಣ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತೊಂದು ಭಿನ್ನಮತ ವ್ಯಕ್ತಪಡಿಸಿದ್ದಾರೆ.
‘ಶಿರಾದಲ್ಲಿ ಮಾಡುವಂತೆ ಕೈ ಶಾಸಕರಿಂದ ಸಹಿ ಸಂಗ್ರಹ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಬಿಡದಿಯಲ್ಲಿ ಮಾಡಿ ಅಂತಾ ನಾನು ಹೇಳಿಲ್ಲ. ನನ್ನ ಜೊತೆ ಯಾರೂ ಚರ್ಚೆ ಮಾಡಿಲ್ಲ. ಕರ್ನಾಟಕದಲ್ಲಿ ಎಲ್ಲಾದ್ರೂ ಸಂತೋಷ. ನಾನು ಅಖಂಡ ಕರ್ನಾಟಕದ ಮೇಲೆ ನಂಬಿಕೆ ಇಟ್ಟವನು ಎಂದಿರುವ ಡಿಕೆಶಿ ಒಟ್ಟಿನಲ್ಲಿ ಎರಡನೇ ಏರ್ಪೋರ್ಟ್ ನಿರ್ಮಾಣ ಮಾಡುವ ಆರಂಭಿಕ ಹಂತದಲ್ಲೇ ಸ್ಥಳ ನಿಗದಿ ಬಗ್ಗೆ ಕಾಂಗ್ರೆಸ್ ಸರ್ಕಾರದಲ್ಲಿ ಭಿನ್ನಧ್ವನಿ ಕೇಳಿಬರುತ್ತಿದೆ. ಆದರೆ ತಜ್ಞರ ಸಮಿತಿ ಏನು ಹೇಳಲಿದೆ? ಅಂತಿಮವಾಗಿ ಅವರ ಆಯ್ಕೆ ಯಾವುದು ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.