ಪಾವಗಡ: ತಾಲ್ಲೂಕಿನ ವೆಂಕಟಾಪುರ ಗ್ರಾಮ ಪಂಚಾಯಿತಿಯಲ್ಲಿ ಭಾರಿ ಗೋಲ್ಮಾಲ್ ನಡೆದಿದ್ದು, ತನಿಖೆಯಾಗುವ ತನಕ ಗ್ರಾಮ ಸಭೆಯನ್ನು ನಡೆಸಬಾರದೆಂದು ಗ್ರಾಮಸ್ಥರು ಪ್ರತಿಭಟಿಸಿದ ಘಟನೆ ಗುರುವಾರ ನಡೆದಿದೆ.

2023-24 ನೆ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯನ್ನು ಎಪ್ರಿಲ್ ೧೭ ರಂದು ಗ್ರಾಮ ಪಂಚಾಯಿತಿ ಆಡಳಿತ ಸಮಿತಿ ಹಾಗೂ ಅಧಿಕಾರಿಗಳು ಸೇರಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದರು. ಆಗ ಗ್ರಾಮಸ್ಥರು ಹಿಂದಿನ ಪಿಡಿಓ ಹನುಮಂತರಾಜು ಸಭೆಗೆ ಬರುವ ತನಕ ಗ್ರಾಮ ಸಭೆ ಮಾಡಬಾರದು ಎಂದು ಪ್ರತಿಭಟಿಸಿದರು.
ಗ್ರಾಮ ಪಂಚಾಯಿತಿಗೆ ಬಂದAತಹ ೧೫ ನೇ ಹಣಕಾಸು, ಹಾಗೂ ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಮತ್ತು ಇಂದಿರಾಗಾAಧಿ ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ೧ ಕೋಟಿ ೭೫ ಲಕ್ಷ ಹಣ ದುರುಪಯೋಗವಾಗಿದೆ. ಲೆಕ್ಕಪರಿಶೋಧನೆ ನಡೆಸುವವರೆಗೂ ಗ್ರಾಮ ಸಭೆ ನಡೆಸಲು ಬಿಡುವುದಿಲ್ಲ. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಅಭಿವೃದ್ಧಿ ಇಲ್ಲದೆ ಸೊರಗುತ್ತಿವೆ. ಹಿಂದಿನ ಪಿಡಿಓ ಹಾಗೂ ಹಿಂದಿನ ಅಧ್ಯಕ್ಷ, ಯಾವುದೇ ಅಭಿವೃದ್ಧಿ ಕೆಲಸಗಳು ಮಾಡದೇ ಹಣ ಡ್ರಾ ಮಾಡಿ ತಿಂದು ತೇಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
31-3-2024 ರಿಂದ 1-4-2025 ರ ತನಕ ಅನುಷ್ಠಾನಗೊಂಡಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ 15 ನೇ ಹಣಕಾಸು ಅನುದಾನ ಕುರಿತು ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಗ್ರಾಮ ಸಭೆಗೆ ಈ ಹಿಂದೆ ಕರ್ತವ್ಯದಲ್ಲಿದ್ದ ಅಭಿವೃದ್ಧಿ ಅಧಿಕಾರಿ ಹನುಮಂತರಾಜುಗೂ ಸಹ ಆಹ್ವಾನಿಸಲಾಗಿತ್ತು. ಆದರೆ ಅವರು ಬಾರದ ಕಾರಣ, ಬರುವ ತನಕ ಗ್ರಾಮ ಸಭೆ ನಡೆಸಬಾರದೆಂದು ಗ್ರಾಮಸ್ಥರು ಪಟ್ಟು ಹಿಡಿದರು.

ವೆಂಕಟಾಪುರ ಗ್ರಾಮ ಪಂಚಾಯಿತಿಯಲ್ಲಿ 12 ಸದಸ್ಯರಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಮಾತ್ರ ಹಾಜರಿದ್ದು, ಉಳಿದ ಸದಸ್ಯರು ಗ್ರಾಮ ಸಭೆಗೆ ಗೈರು ಹಾಜರಾಗಿದ್ದಾರೆ. ಇವರೆಲ್ಲರು ಗೈರು ಆಗಲು ಕಾರಣವೇನು ಗೊತ್ತಿಲ್ಲ, ಈ ಹಿಂದೆ ಇದ್ದ ಪಿಡಿಓ ಹಾಗೂ ಅಧ್ಯಕ್ಷರು ಭಾರಿ ಅವ್ಯವಹಾರ ಮಾಡಿದ್ದು, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಇಒ ರವರು ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷ ವೆಂಕಟರವಣಪ್ಪ, ಉಪಾಧ್ಯಕ್ಷೆ ವರಲಕ್ಷ್ಮಮ್ಮ, ನೋಡಲ್ ಅಧಿಕಾರಿ ಡಾ.ಅನುಷ್ಕಾ, ತಾಲ್ಲೂಕು ಲೆಕ್ಕಪರಿಶೋಧಕ ವ್ಯವಸ್ಥಾಪಕರು ರಾಮಕೃಷ್ಣಗೌಡ ಹಾಗೂ ಜಯರಾಮ್, ಪಿಡಿಒ ಮಹಮದ್ ರಫೀಕ್, ಇಂಜಿನಿಯರ್ ಸುನಿಲ್ಕುಮಾರ್, ಗ್ರಾಮಸ್ಥರಾದ ವೆಂಕಟರಮಣಪ್ಪ, ಅನಿಲ್ಕುಮಾರ್, ಕದರಪ್ಪ, ಶ್ರೀನಿವಾಸ್, ಹನುಮಂತರಾಯ, ವಿ.ಇ.ಈಶ್ವರಪ್ಪ, ಎಂ.ನಾಗರಾಜು, ನರಸಿಂಹಪ್ಪ, ರವಿಕುಮಾರ್, ರಮೇಶ್ ಹಾಗೂ ಗ್ರಾಮಸ್ಥರು ಇದ್ದರು.