ಬೆಂಗಳೂರು: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ 45ನೇ ಸಭೆಯಲ್ಲಿ ಭಾಗವಹಿಸಿದರು.

ಮಂಡಳಿಯ ಕಾರ್ಯಚಟುವಟಿಕೆ, ಯೋಜನೆ ಮತ್ತಿತರರ ವಿಷಯಗಳ ಕುರಿತು ಮಾಹಿತಿ ಪಡೆದು ಅಧಿಕಾರಿಗಳಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
ಈ ಸಭೆಯಲ್ಲಿ ಕಾರ್ಮಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಎನ್ ವಿ ಪ್ರಸಾದ್ ಕಾರ್ಮಿಕ ಆಯುಕ್ತರಾದ ಗೋಪಾಲಕೃಷ್ಣ. ಮಂಡಳಿಯ ಕಾರ್ಯದರ್ಶಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ, ಮಂಡಳಿಯ ಸದಸ್ಯರುಗಳಾದ ಎಚ್ ಜೆ ರಮೇಶ್, ವಿಜಯಕುಮಾರ್ ಪಾಟೀಲ್, ಜಾನಿ.ಕೆ.ಪಿ., ಬಸಪ್ಪ ಶ್ರೀ ಶ್ರೇಯಸ್ ಕುಮಾರ್ ಜೈನ್ ಕವಿತಾ ರೆಡ್ಡಿ ಮತ್ತು ವಿವಿಧ ಇಲಾಖೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.