ಮಂಗಳೂರು: ಕೇರಳದ ಬೇಪುರ್ ಕರಾವಳಿಯಿಂದ ಸುಮಾರು 78 ನಾಟಿಕಲ್ ಮೈಲುಗಳ ದೂರದಲ್ಲಿ ಸಿಂಗಾಪುರದ ಧ್ವಜದ ಕಂಟೇನರ್ ಹಡಗು (MV Wan Hai 503) ನಲ್ಲಿ ಸಂಭವಿಸಿದ ಭಾರೀ ಬೆಂಕಿ ದುರಂತದ ನಂತರ, 22 ಮಂದಿ ಸಿಬ್ಬಂದಿಯಲ್ಲಿ 18 ಜನರನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ರಕ್ಷಿಸಲಾದ ಸಿಬ್ಬಂದಿಯನ್ನು ಮಂಗಳೂರಿನ ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (NMPA) ಪಣಂಬೂರಿಗೆ ಕರೆತರಲಾಗಿದೆ. ಈ ಘಟನೆಯಲ್ಲಿ ನಾಲ್ವರು ಸಿಬ್ಬಂದಿ ಕಾಣೆಯಾಗಿದ್ದಾರೆ ಎಂದು ಇಂಡಿಯನ್ ಕೋಸ್ಟ್ ಗಾರ್ಡ್ ಪ್ರಕಟಣೆಯಲ್ಲಿ ತಿಳಿಸಿದೆ.

ಕೊಲಂಬೊದಿಂದ ಮುಂಬೈಗೆ ತೆರಳುತ್ತಿದ್ದ ಹಡಗಿನಲ್ಲಿ ಜೂನ್ 9 ರಂದು ಬೆಂಕಿ ಕಾಣಿಸಿಕೊಂಡಿತು. ಭಾರತೀಯ ನೌಕಾಪಡೆ ತಕ್ಷಣ ತುರ್ತು ಕರೆಗೆ ಸ್ಪಂದಿಸಿ, INS ಸೂರತ್ ಮೂಲಕ 18 ಸಿಬ್ಬಂದಿಯನ್ನು ರಕ್ಷಿಸಿತು. ರಕ್ಷಿಸಲಾದವರಲ್ಲಿ ಐವರು ಗಾಯಗೊಂಡಿದ್ದು, ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ರಕ್ಷಿಸಿದ ಸಿಬ್ಬಂದಿಯೊಂದಿಗೆ INS ಸೂರತ್ ಜೂನ್ 9 ರಂದು ರಾತ್ರಿ 10:45ಕ್ಕೆ ಮಂಗಳೂರಿನ NMPAಗೆ ಆಗಮಿಸಿತು.
ರಕ್ಷಿಸಲಾದ ಸಿಬ್ಬಂದಿಯ ರಾಷ್ಟ್ರೀಯತೆ: ಚೀನಾದ 8 ಮಂದಿ, ತೈವಾನ್ನ ನಾಲ್ವರು, ಮ್ಯಾನ್ಮಾರ್ನ ನಾಲ್ವರು ಮತ್ತು ಇಂಡೋನೇಷ್ಯಾದ ಇಬ್ಬರು ಇದ್ದಾರೆ.
ಲು ಯಾನ್ಲಿ, ಸೋನಿತುರ್ ಹೇನಿ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಜು ಫಾಬಾವ್, ಗುವೊ ಲಿನಿನೊ, ಥೀನ್ ಥಾನ್ ಹ್ಟಾಯ್ ಮತ್ತು ಕಿಯಿ ಜಾವ್ ಹ್ಟೂ ಎಂಬುವರಿಗೆ ಕಡಿಮೆ ಪ್ರಮಾಣದಲ್ಲಿ ಗಾಯಗಳಾಗಿವೆ.
ಯಾವುದೇ ಗಾಯಗಳಾಗದ ವೀ ಚುನ್-ಜು, ತಾಗ್ ಪೆಂಗ್, ಕಾನ್ ಹಿಯು ವಾಲ್, ಲಿನ್ ಚುನ್ ಚೆಂಗ್
ಫೆಂಗ್ ಲಿ, ಲಿ ಫೆಂಗುವಾಂಗ್, ಥೆಟ್ ಹ್ಟುಟ್ ಸ್ವೀ, ಗುವೊ ಎರ್ಚುನ್, ಹೋಲಿಕ್ ಅಸ್ಯಾರಿ, ಸು ವೀ,
ಚಾಂಗ್ ರೆನ್-ಹಾನ್ ಮತ್ತು ವೂ ವೆನ್-ಚಿ ಸೇರಿ 12 ಮಂದಿಯನ್ನು ಮಂಗಳೂರಿನ ಹೋಟೆಲ್ಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.