ಕುಮಾರಸ್ವಾಮಿ ಸರ್ಕಾರ ರಚಿಸುವ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಅಂದಿದ್ದರು; ನಾನು ಬಟ್ಟೆ ಗಿಫ್ಟ್ ಮಾಡೋಣ ಅಂದ್ಕೊಂಡಿದ್ದೆ: Shivakumar

ಕುಮಾರಸ್ವಾಮಿ ಸರ್ಕಾರ ರಚಿಸುವ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಅಂದಿದ್ದರು; ನಾನು ಬಟ್ಟೆ ಗಿಫ್ಟ್ ಮಾಡೋಣ ಅಂದ್ಕೊಂಡಿದ್ದೆ: Shivakumar

ಬೆಂಗಳೂರು : ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಸತಿ ಯೋಜನೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿರೋದು ಮನವೊಲಿಕೆಯ ರಾಜಕಾರಣವಲ್ಲ, ಬಿಜೆಪಿಯವರು ರಾಜಕೀಯಕ್ಕಾಗಿ ಅದನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.

ಲ್ಯಾಪ್ಸ್ ಅದ ಮನೆಗಳಿಂದ ಸರ್ಕಾರ ನಷ್ಟ ಮಾಡಿಕೊಳ್ಳಲಾಗಲ್ಲ, ಹಿಂದೆ ಪರಿಶಿಷ್ಟ ಜಾತಿಯವರಿಗೆ ವಸತಿ ಯೋಜನೆಯಲ್ಲಿ ಮೀಸಲಾತಿ ಕಲ್ಪಿಸಲಾಗಿತ್ತು, ಹಂಚಿಕೆಯ ನಂತರ ಉಳಿದ ಮನೆಗಳನ್ನು ಒಬಿಸಿ ಮತ್ತು ಸಾಮಾನ್ಯ ವರ್ಗದವರಿಗೆ ಹಂಚಲಾಗಿತ್ತು, ಬಿಜೆಪಿಯವರು ಸದನದಲ್ಲಿ ಈ ಪ್ರಶ್ನೆಗಳನ್ನು ಕೇಳಲಿ ಉತ್ತರ ಕೊಡ್ತೀನಿ ಎಂದು ಶಿವಕುಮಾರ್ ಹೇಳಿದರು.

Leave a Reply

Your email address will not be published. Required fields are marked *