Zameer Ahmed ಕ್ಷೇತ್ರದಲ್ಲಿ 56 ಕೋಟಿ ರೂ. ಭ್ರಷ್ಟಾಚಾರ : ಲೋಕಾಯುಕ್ತಕ್ಕೆ ಹೋಯ್ತು ದೂರು

Zameer Ahmed ಕ್ಷೇತ್ರದಲ್ಲಿ 56 ಕೋಟಿ ರೂ. ಭ್ರಷ್ಟಾಚಾರ : ಲೋಕಾಯುಕ್ತಕ್ಕೆ ಹೋಯ್ತು ದೂರು

ಬೆಂಗಳೂರು : ಭ್ರಷ್ಟಾಚಾರ ವಿರೋಧಿ ವೇದಿಕೆ ಅಧ್ಯಕ್ಷ ಎನ್. ಆರ್. ರಮೇಶ್ ಅವರು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಪ್ರತಿನಿಧಿಸುವ ಕ್ಷೇತ್ರದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಸಚಿವರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸದೆ ಎರೆಡು ಬಾರಿ ಬಿಲ್ ಹಾಕಲಾಗಿದೆ. ಮೊದಲ ಬಾರಿ ₹27 ಕೋಟಿ, ನಂತರ ₹28 ಕೋಟಿ ಹಣವನ್ನು ಒಬ್ಬರೇ ಗುತ್ತಿಗೆದಾರನಿಗೆ ಬಿಡುಗಡೆ ಮಾಡಲಾಗಿದೆ. ಒಟ್ಟು ₹56 ಕೋಟಿ ರೂಪಾಯಿಯ ದುರ್ಬಳಕೆಯಾಗಿರುವ ಬಗ್ಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಭ್ರಷ್ಟಾಚಾರ ಕುರಿತು ಲೋಕಾಯುಕ್ತ ಕಚೇರಿಗೆ ಅಧಿಕೃತವಾಗಿ ದೂರು ಸಲ್ಲಿಸಿರುವ ಅವರು, ದೂರು ಪ್ರಕಾರ, 19 ಗುತ್ತಿಗೆದಾರರಿಗೆ ಕೆಲಸವಿಲ್ಲದೇ ಹಣ ಪಾವತಿಸಲಾಗಿದೆ. ಈ ಪೈಕಿ ಉಮೇಶ್ ಎಂಬ ಗುತ್ತಿಗೆದಾರನು ಮಹಾಭ್ರಷ್ಟನಾಗಿದ್ದು, ಕೇವಲ ಆದೇಶ ಪತ್ರದ ಆಧಾರದ ಮೇಲೆ ಹಣ ಬಿಡುಗಡೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಸಚಿವ ಝಮೀರ್ ಅವರ ಆಪ್ತ ಅಯುಬ್ ಖಾನ್ ಅವರ ಪಾತ್ರವಿದೆ ಎಂಬ ನೇರ ಆರೋಪವನ್ನು ರಮೇಶ್ ಮಾಡಿದ್ದಾರೆ.

ಸಿಲ್ಕ್ ಬೋರ್ಡ್ – ಹೆಬ್ಬಾಳ್ ಸುರಂಗ ಮಾರ್ಗ ಎನ್ ಆರ್ ರಮೇಶ್ ಅವರ ಮತ್ತೊಂದು ಗಂಭೀರ ಆರೋಪ BMRCL ಯೋಜನೆಗೆ ಸಂಬಂಧಿಸಿದದು. ಹೆಬ್ಬಾಳ್ ಜಂಕ್ಷನ್ ನಿಂದ ಸಿಲ್ಕ್ ಬೋರ್ಡ್ ತನಕ ಸುರಂಗ ಮಾರ್ಗ ನಿರ್ಮಿಸುವ ಯೋಜನೆಯು ಭ್ರಷ್ಟಾಚಾರದಿಂದ ಭಾರಿತವಾಗಿದೆ ಎಂದು ಅವರು ಹೇಳಿದರು.

ಈ ಯೋಜನೆಯು ₹1.58 ಕೋಟಿ ವೆಚ್ಚದಲ್ಲಿ 19 ಕಿಲೋಮೀಟರ್ ಉದ್ದವಿರುವುದು ನಿಗದಿಯಾಗಿದ್ದು, ಈ ಯೋಜನೆಯ ಹಿಂದೆ ಸರ್ಕಾರದ ಹಣ ಲೂಟಿ ಮಾಡಲು ನಡೆಯುತ್ತಿರುವ ಆಮಂತ್ರಣವಿದೆ ಎಂಬುದು ಅವರ ಮಾತು. ಭೂಸ್ವಾಧೀನ, ಆಸ್ತಿ ಪಾಸ್ತಿಗಳ ಖರೀದಿಯ ವಿಷಯದಲ್ಲಿ ಕೂಡ ದೊಡ್ಡ ಮಟ್ಟದ ಹಣಕಾಸು ಲೆಕ್ಕಾಚಾರವಾಗಿದೆ.

ಸಚಿವ ಝಮೀರ್ ಅಹ್ಮದ್ ಕ್ಷೇತ್ರದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಕೆಲಸವಿಲ್ಲದೇ ಕೋಟ್ಯಂತರ ಹಣ ಬಿಡುಗಡೆ ಮಾಡಿರುವುದು ಸಾರ್ವಜನಿಕ ಧನದ ದುರ್ಬಳಕೆ. ಸುರಂಗ ಮಾರ್ಗ ಯೋಜನೆಯ ಹಿಂದೆ ಭೂಮಿ ಇತ್ಯಾದಿಗಳ ಖರೀದಿಯ ಹೆಸರಲ್ಲಿ ಭ್ರಷ್ಟಾಚಾರ ಅಡಗಿದೆ ಎಂದು. ಭ್ರಷ್ಟಾಚಾರ ವಿರೋಧಿ ವೇದಿಕೆಯು ಈ ಎಲ್ಲಾ ಅಂಶಗಳ ಬಗ್ಗೆ ಸ್ಪಷ್ಟ ತನಿಖೆ ನಡೆಸುವಂತೆ ಲೋಕಾಯುಕ್ತ ಕಚೇರಿಗೆ ಒತ್ತಾಯಿಸಿದೆ.

Leave a Reply

Your email address will not be published. Required fields are marked *