ಸಿಲಿಕಾನ್ ಸಿಟಿಯಲ್ಲಿ ತಾಪಮಾನ ಏರಿಕೆ – ಜನರು ‘ಕೂಲ್’ ಹುಡುಕಾಟದಲ್ಲಿ
ಬೆಂಗಳೂರು : ನಗರದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಜನಜೀವನದ ಮೇಲೆ ಪರಿಣಾಮ ಬೀರಿದೆ. ಏಪ್ರಿಲ್ ಆರಂಭದಲ್ಲೇ ಉಷ್ಣತೆ ಹೆಚ್ಚಾಗಿ ಜನರು ತಂಪಿನ ಉಪಕರಣಗಳ ಮೊರೆ ಹೋಗುತ್ತಿದ್ದಾರೆ.
ಎಲೆಕ್ಟ್ರಾನಿಕ್ ಶೋರೂಮ್ಗಳಲ್ಲಿ ಏರ್ಕಂಡಿಷನರ್ ಮತ್ತು ಕೂಲರ್ಗಳಿಗೆ ಅಪಾರ ಬೇಡಿಕೆ ಉಂಟಾಗಿದೆ. ಸ್ಟಾಕ್ ಕೊರತೆಯಿಂದ ಗ್ರಾಹಕರು ಹೊಸ ಸರಕುಗಳಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪರಿಸರ ಸ್ನೇಹಿ ಹಾಗೂ ಆರೋಗ್ಯಕರ ಆಯ್ಕೆಯಾಗಿ ಮಣ್ಣಿನ ಮಡಿಕೆಗಳು ಜನಪ್ರಿಯವಾಗಿವೆ. ನೀರನ್ನು ತಂಪಾಗಿಡುವ ಈ ಪರಂಪರೆಯ ವಿಧಾನಕ್ಕೆ ಮತ್ತೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಬಂದಿದೆ.
ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕುಂಬಾರರು ಮತ್ತು ವ್ಯಾಪಾರಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆಯಿದ್ದರೂ ಮಾರಾಟ ಜೋರಾಗಿದೆ.
For More Updates Join our WhatsApp Group :




